ವೇದಿಕೆಯಲ್ಲೇ ಕುಸಿದು ಬಿದ್ದ ಅಮ್ಮಾಜಮ್ಮ; ಕೆಲಕಾಲ ಆತಂಕ ಸೃಷ್ಟಿ..!

  • ಚಿಕಿತ್ಸೆ ಬಳಿಕ ಮತ್ತೆ ಪ್ರಚಾರಕ್ಕೆ ಮರಳಿದ ಜೆಡಿಎಸ್‍ ಅಭ್ಯರ್ಥಿ ಅಮ್ಮಾಜಮ್ಮ

ಶಿರಾ: ಶಿರಾ ಕ್ಷೇತ್ರದ ಉಪಚುನಾವಣೆಯ ಜೆಡಿಎಸ್‌ ಅಭ್ಯರ್ಥಿ ಅಮ್ಮಾಜಮ್ಮ ಅವರು ನಿತ್ರಾಣರಾಗಿ ವೇದಿಕೆಯಲ್ಲೇ ಕುಸಿದುಬಿದ್ದ ಘಟನೆ ಭಾನುವಾರ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ವೇಳೆ ನಡೆದಿದೆ.

ನಿರಂತರ ಪ್ರಚಾರ ಸಭೆಗಳು ಮತ್ತು ಕ್ಷೇತ್ರದಲ್ಲಿ ಓಡಾಟ ನಡೆಸಿದ್ದರಿಂದ  ಅಮ್ಮಾಜಮ್ಮ ಅವರಿಗೆ ನಿತ್ರಾಣವಾಗಿದ್ದು, ಅವರು ಕುಸಿದುಬಿದ್ದಕೆಲ ಕ್ಷಣ ಆತಂಕದ ವಾತಾವರಣ ಸೃಷ್ಟಿಯಾಯಿತು. ತಕ್ಷಣವೇ ಅವರನ್ನು ಪೊಲೀಸ್‌ ವಾಹನದಲ್ಲಿಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಪಡೆದು ಸ್ವಲ್ಪ ಹೊತ್ತಿನ ಬಳಿಕ ವಾಪಸಾದ ಅವರು, ನಾನು ಆರೋಗ್ಯವಾಗಿದ್ದೇನೆ. ನನಗೆ ಜನರ ಆರ್ಶೀವಾದ ಇದೆ. ಏನೂ ಆಗುವುದಿಲ್ಲ ಎನ್ನುವ ಮೂಲಕ ಕಾರ್ಯಕರ್ತರ ಆತಂಕ ನಿವಾರಿಸಿದರು.

ಬಳಿಕ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ,  ಬಿಜೆಪಿಯವರು ಈ ಚುನಾವಣೆಯಲ್ಲಿ ಹಣದಿಂದ ಗೆಲ್ಲಬಹುದು ಎಂಬ ಉದ್ದೇಶದಿಂದ ಈಗಾಗಲೇ ಗೆದ್ದಿದ್ದೇವೆ ಎಂದು ಅಹಂನಿಂದ ಮಾತನಾಡುತ್ತಿದ್ದಾರೆ. ಇಲ್ಲಿ ಹಣಕ್ಕಾಗಿ ಮತ ಚಲಾಯಿಸುವುದಿಲ್ಲ, ಶಿರಾ ಕ್ಷೇತ್ರದ ಜನ ಸ್ವಾಭಿಮಾನಿ ಮತದಾರರು ಎಂದು ಹೇಳಿದರು.

ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಶಿರಾ ನಗರದಲ್ಲಿ ಜೆಡಿಎಸ್‌ ಕಾರ್ಯಕರ್ತರ ತಾಳ್ಮೆಯ ಕಟ್ಟೆಯೊಡೆದಿದೆ. ಅಮ್ಮಾಜಮ್ಮ ಅವರ ಗೆಲುವಿಗೆ ಹಗಲಿರುಳು ದುಡಿಯುತ್ತಿದ್ದಾರೆ ಎಂದರು. ಬಿಜೆಪಿಯವರು ನಿನ್ನೆ ಪೊಲೀಸ್‌ ವಾಹನದಲ್ಲಿ ಹಣ ತಂದಿದ್ದಾರೆ. ಕೆ.ಆರ್‌.ಪೇಟೆ ಮಾದರಿ ಇಲ್ಲಿ ವರ್ಕೌಟ್‌ ಆಗುವುದಿಲ್ಲ. ಧೈರ್ಯವಾಗಿ ಹೋಗಿ 20 ಸಾವಿರ ಮತದಿಂದ ಜೆಡಿಎಸ್‌ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದಾಗಿ ನನಗೆ ಶಿರಾದ ಮತದಾರರು ಹೇಳುತ್ತಿದ್ದಾರೆ ಎಂದರು.

Donate Janashakthi Media

Leave a Reply

Your email address will not be published. Required fields are marked *