“ಅನುಪಯುಕ್ತ ಮಾಹಿತಿಯ ತುಣುಕು”: ದೆಹಲಿ ಉಚ್ಛ ನ್ಯಾಯಾಲಯ ಪೊಲೀಸರಿಗೆ ತರಾಟೆ

ದೆಹಲಿ: ಕಳೆದ ವರ್ಷ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಮೇ ತಿಂಗಳಲ್ಲಿ ಬಂಧಿಸಲ್ಪಟ್ಟ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಯೊಬ್ಬರ ಮೇಲೆ ದಾಖಲಾದ ವಿಜಿಲೆನ್ಸ್ ವಿಚಾರಣಾ ವರದಿಯ ಕುರಿತು ದೆಹಲಿ ಹೈಕೋರ್ಟ್  ಸೋಮವಾರ ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು ಎಂದು ಎನ್ಡಿಟಿವಿ  ವರದಿ ಮಾಡಿದೆ.

ಭಯೋತ್ಪಾದನಾ ವಿರೋಧಿ ಕಾನೂನಿನಡಿಯಲ್ಲಿ (ಯುಎಪಿಎ) ಮೇ ತಿಂಗಳಲ್ಲಿ  24 ವರ್ಷದ ಆಸಿಫ್ ಇಕ್ಬಾಲ್ ತನ್ಹಾ ರವರನ್ನು ಬಂಧಿಸಲಾಗಿತ್ತು . ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ನೀಡಿರುವ ಹೇಳಿಕೆಯು ಮಾಧ್ಯಮಗಳಲ್ಲಿ ಸೋರಿಕೆಯಾಗಿದ್ದು, ಇದರ ಕುರಿತು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು.

ಮನವಿಗೆ ಸ್ಪಂದಿಸಿದ ನ್ಯಾಯಾಲಯವು ದೆಹಲಿ ಪೊಲೀಸರು ಮತ್ತು ಸುದ್ದಿ ಚಾನೆಲ್‌ನಿಂದ ಉತ್ತರ ಕೋರಿತ್ತು. ಇದಕ್ಕೆ ದೆಹಲಿ ಪೊಲೀಸರು ವರದಿಯನ್ನು ದೆಹಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವಾಲಯದೊಂದಿಗೆ ಮಾತ್ರ ಹಂಚಿಕೊಳ್ಳಲಾಗಿದೆ ಎಂದು ವಿವರಿಸಿದರು.

ದೆಹಲಿ ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭದಲ್ಲಿ “ಅತ್ಯಂತ ಮಹತ್ವದ ವಿಚಾರಣೆಯನ್ನು ಸಣ್ಣ ಕಳ್ಳತನ ಪ್ರಕರಣದಲ್ಲಿ ಅವರನ್ನು ಸಾಮಾನ್ಯ ವಿಚಾರಣೆಯಲ್ಲಿ ಮಾಡುವುದಕ್ಕಿಂತ ಕೆಟ್ಟದಾಗಿದೆ. ಈ ಪ್ರಕರಣದಲ್ಲಿ ನಡೆದುಕೊಳ್ಳಲಾಗಿದೆ. ಇವು ಕೊರಿಯರ್ ಮೂಲಕ ಕಳುಹಿಸಲಾದ ಫೈಲ್‌ಗಳಲ್ಲ, ಇವು ಕೈಯಲ್ಲಿ ಹಿಡಿದಿರುವ ಫೈಲ್‌ಗಳಾಗಿವೆ” ಎಂದು ನ್ಯಾಯಮೂರ್ತಿ ಮುಕ್ತಾ ಗುಪ್ತಾ ಹೇಳಿದ್ದಾರೆ.

ನ್ಯಾಯಾಲಯ ವಿಜಿಲೆನ್ಸ್ ವರದಿಯನ್ನು ‘ಅರ್ಧ ಬೇಯಿಸಿದ ಹಾಗೂ ಅನುಪಯುಕ್ತ ಮಾಹಿತಿಯ ತುಣುಕು’ ಎಂದು ಹೇಳಿದೆ.

“ಇವರು ಹಿರಿಯ ಐಎಎಸ್ ಅಧಿಕಾರಿಗಳು. ನೀವು ಎಲ್ಲಿ ವಿಚಾರಣೆ ಮಾಡಿದ್ದೀರಿ, ಯಾರನ್ನು ವಿಚಾರಿಸಿದ್ದೀರಿ? ಫೈಲ್‌ಗಳನ್ನು ಎಲ್ಲಿಗೆ ಕಳುಹಿಸಲಾಗಿದೆ? ದೆಹಲಿ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ನೀಡಿರುವ ವರದಿ ಹಾಗೂ ಯಾರು ಕರೆದೊಯ್ದರು ಮತ್ತು ಅವರನ್ನು ವಾಪಸ್ ಕರೆತಂದವರು ಯಾರು… ಈ ಬಗ್ಗೆ ವರದಿಯಲ್ಲಿ ಯಾವ ಮಾಹಿತಿಯೂ ಇಲ್ಲ. ಇವು ರಸ್ತೆಯಲ್ಲಿ ಬಿದ್ದಂತಹ ದಾಖಲೆಗಳಲ್ಲ” ಎಂದು ನ್ಯಾಯಾಲಯವು ತೀಕ್ಷ್ಣವಾದ ಪ್ರತಿಕ್ರಿಯಿಸಿತು.

ತನ್ಹಾ ಪರವಾಗಿ ಹಾಜರಾದ ವಕೀಲ ಸಿದ್ಧಾರ್ಥ್ ಅಗರ್ವಾಲ್, ಸುದ್ದಿ ಚಾನೆಲ್ ಪ್ರಸಾರ ಮಾಡಿದ ಉದ್ದೇಶವು ಅವನನ್ನು “ಕೆಟ್ಟದಾಗಿ” ಬಿಂಬಿಸುವುದಾಗಿದೆ. ಅಲ್ಲದೆ, ಪೊಲೀಸರ ಮಾಹಿತಿಯ ಸೋರಿಕೆಯಿಂದಾಗಿ ಅವರು ಅಷ್ಟೇ ದುಃಖಿತರಾಗಿದ್ದಾರೆ ಎಂದು ಹೇಳಿದರು.

ಇದು ಕೇವಲ ಅನಪೇಕ್ಷಿತವಲ್ಲ, ಇದು ಆರೋಪಿಗಳಿಗೆ ಪೂರ್ವಾಗ್ರಹ ಪೀಡಿತವಾಗಿದ್ದು ಮತ್ತು ಆರೋಪಿಗಳಿಗೆ ನ್ಯಾಯ ಮತ್ತು ತನಿಖೆಯ ಪರಿಶುದ್ಧತೆಗಾಗಿ ಕಠಿಣತೆಯಿಂದ ವರ್ತಿಸಬೇಕೆಂದು ಎಂದು ನ್ಯಾಯಾಲಯ ಹೇಳಿದೆ.

ಕಳೆದ ವರ್ಷ, ವಿವಾದಾತ್ಮಕ ಪೌರತ್ವ ಕಾನೂನನ್ನು ಬೆಂಬಲಿಸುವವರ ನಡುವೆ ಘರ್ಷಣೆಗಳು ಸಂಭವಿಸಿದ ನಂತರ 50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಸ್ಟೂಡೆಂಟ್ಸ್ ಇಸ್ಲಾಮಿಕ್ ಸಂಘಟನೆಯ ಸದಸ್ಯರಾದ ಶ್ರೀ ತನ್ಹಾ ಮತ್ತು ಹೊಸ ಪೌರತ್ವ ಕಾನೂನಿನ ವಿರುದ್ಧ ಪ್ರತಿಭಟನೆಗಳನ್ನು ಮುನ್ನಡೆಸಿದ ಜಾಮಿಯಾ ಸಮನ್ವಯ ಸಮಿತಿಯ ಭಾಗವಾಗಿದ್ದರು ಎಂದು ಪೊಲೀಸರು ಈ ಹಿಂದೆ ಹೇಳಿದ್ದಾರೆ.

ಮುಂದಿನ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಪೊಲೀಸರ ವಿಶೇಷ ವಿಜಿಲೆನ್ಸ್ ಆಯುಕ್ತರನ್ನು ನ್ಯಾಯಾಲಯ ಕೇಳಿದೆ.

Donate Janashakthi Media

Leave a Reply

Your email address will not be published. Required fields are marked *