ಟೈಲರ್‌ ಹತ್ಯೆಯ ಆರೋಪಿಗಳಿಗೆ ಬಿಜೆಪಿ ಸದಸ್ಯರ ನಂಟು – ಇಂಡಿಯಾ ಟುಡೆ ತನಿಖಾ ವರದಿ

ಉದಯಪುರ: ದೇಶದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ಟೈಲರ್ ಹತ್ಯೆಯ ಆರೋಪಿಗಳು ಸ್ಥಳೀಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ನಾಯಕನೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ಇಂಡಿಯಾ ಟುಡೆ ಮಾಡಿರುವ ತನಿಖಾ ವರದಿಯಲ್ಲಿ ಬೆಳಕಿಗೆ ಬಂದಿದೆ.

ಹತ್ಯೆಯ ಬಳಿಕ ಆರೋಪಿಗಳ ಗತಕಾಲವನ್ನು ಕೆದಕಿದ ಇಂಡಿಯಾಟುಡೆ ವಾಹಿನಿಯು ಈ ಮಾಹಿತಿಯನ್ನು ಹೊರ ಹಾಕಿದೆ. ಇಂಡಿಯಾ ಟುಡೆ ಮಾಡಿದ ವರದಿ ಪ್ರಕಾರ, ಹಲವು ವರ್ಷಗಳಿಂದ ಸ್ಥಳೀಯ ಬಿಜೆಪಿ ನಾಯಕರೊಂದಿಗೆ ಹಾಗೂ ಕಾರ್ಯಕರ್ತರೊಂದಿಗೆ ಟೈಲರ್‌ ಕನ್ನಯ್ಯಲಾಲ್‌ ಹತ್ಯೆ ಆರೋಪಿಗಳು ಸಂಬಂಧ, ಒಡನಾಟ ಹೊಂದಿದ್ದಾರೆ. ರಾಜಸ್ಥಾನದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಲ್ಲಿ ಕಳೆದ ಹತ್ತು ವರ್ಷಗಳಿಂದ ಇರುವ ಸದಸ್ಯ ಇರ್ಷಾದ್‌ ಚೈನ್‌ವಾಲ ಆರೋಪಿಗಳಲ್ಲಿ ಓರ್ವನಾದ ರಿಯಾಝ್‌ ಜೊತೆ ಕಾಣಿಸಿಕೊಂಡಿರುವ ಹಲವು ಚಿತ್ರಗಳನ್ನು ಇಂಡಿಯಾಟುಡೆ ವರದಿ ಮಾಡಿದೆ.

ಈ ಕುರಿತು ಇರ್ಷಾದ್‌ ಬಳಿ ಕೇಳಿದಾಗ, ಬಿಜೆಪಿ ನಾಯಕ ಗುಲಾಬ್‌ ಚಂದ್‌ ಕಟಾರಿಯಾ ಅವರ ಹಲವು ಕಾರ್ಯಕ್ರಮಗಳಲ್ಲಿ ಹತ್ಯೆಯ ಆರೋಪಿ ಭಾಗಿಯಾಗಿದ್ದ, ಆತ ಬಿಜೆಪಿ ಸೇರಲು ಉತ್ಸುಕನಾಗಿದ್ದೇನೆ ಎಂದು ಹೇಳುತ್ತಿದ್ದ. ಆದರೆ ವೈಯಕ್ತಿಕವಾಗಿ ಬಿಜೆಪಿ ನೀತಿಯನ್ನು ಟೀಕಿಸುತ್ತಿದ್ದ ಎಂದು ಹೇಳಿದ್ದಾರೆ.

ಅದೂ ಅಲ್ಲದೆ, ಬಿಜೆಪಿಯ ಇನ್ನೋರ್ವ ಕಾರ್ಯಕರ್ತ ಮಹಮ್ಮದ್‌ ತಾಹಿರ್‌ ಎಂಬಾತನೊಂದಿಗೆ ರಿಯಾಝ್‌ ಇರುವ ಚಿತ್ರಗಳನ್ನೂ ಇಂಡಿಯಾ ಟುಡೆ ಹೊರಗೆಡವಿದೆ. ಇಂಡಿಯಾ ಟುಡೆ ವರದಿ ಪ್ರಕಾರ ತಾಹಿರ್‌ ಜೊತೆಗೆ ಉದಯಪುರದ ಬಿಜೆಪಿ ಕಾರ್ಯಕ್ರಮದಲ್ಲಿ ರಿಯಾಝ್‌ ಭಾಗಿಯಾಗಿದ್ದ. ಇರ್ಷಾದ್‌ ನೀಡಿರುವ ಹೇಳಿಕೆ ಪ್ರಕಾರ ರಿಯಾಝ್‌ ಹಾಗೂ ತಾಹೀರ್‌ ಆಪ್ತರಾಗಿದ್ದು, ಕೊಲೆಯ ಬಳಿಕ ತಾಹಿರ್‌ ನಾಪತ್ತೆಯಾಗಿದ್ದಾರೆ ಎಂದು ಇಂಡಿಯಾಟುಡೆ ವರದಿ ಹೇಳಿದೆ.

ಇಂಡಿಯಾ ಟುಡೇ ಈ ವರದಿಯನ್ನು ಟ್ವೀಟ್‌ ಮಡಿದ ಬೆನ್ನಲ್ಲೇ ಹಲವು ನೆಟ್ಟಿಗರು ಈ ಕೊಲೆಯಲ್ಲಿ ಬಿಜೆಪಿಗೆ ಲಾಭವಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸರ್ಕಾರವಿದೆ, ಮುಂದಿನ ವರ್ಷ ಚುನಾವಣೆ ಇದೆ. ಈ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದೆಂಬ ಊಹಾಪೋಹಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಡಲಾಗುತ್ತಿದೆ. ಅದರಲ್ಲೂ 2019 ರಲ್ಲಿ ತಬಿಜೆಪಿ ಸದಸ್ಯ ತಾಹಿರ್‌ ಫೇಸ್‌ಬುಕ್‌ ಮೂಲಕ ಹಂಚಿಕೊಂಡ ಚಿತ್ರವೊಂದರಲ್ಲಿ ಕೊಲೆ ಆರೋಪಿ ರಿಯಾಝ್‌ ಬಿಜೆಪಿಯ ಸ್ಥಳೀಯ ನಾಯಕರೊಂದಿಗೆ ಇರುವುದು ಕಂಡು ಬಂದಿದೆʼ

ಇನ್ನಷ್ಟು ಮಾಹಿತಿಗಳು ತನಿಖೆಯಿಂದ ಬಯಲಾಗಬೇಕಿದೆ. ಬಿಜೆಪಿ ಅಧಿಕಾರಕ್ಕಾಗಿ ಇಂತಹ ಕೀಳು ಮಟ್ಟದ ಕೆಲಸಗಳಿಗೆ ಇಳಿಯುವುದು ಇದು ಹೊಸದೇನಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *