ನಾಳೆ ಒಳಗೆ ಚಾರಣಿಗರು ಬೆಂಗಳೂರಿಗೆ ವಾಪಸ್

ಬೆಂಗಳೂರು: ನಾಳೆಯೊಳಹೆ ಉತ್ತರಾಖಂಡದ ಉತ್ತರಕಾಶಿಗೆ ಚಾರಣಕ್ಕೆಂದು ತೆರಳಿದ್ದ ಕನ್ನಡಿಗರಲ್ಲಿ ಬದುಕುಳಿದವರು ವಾಪಸ್ ಆಗಲಿದ್ದಾರೆ ಎಂದು ಡೆಹ್ರಾಡೂನ್‌ಗೆ ತೆರಳಿರುವ ಸಚಿವ ಕೃಷ್ಣಬೈರೇಗೌಡ ಸ್ಪಷ್ಪಪಡಿಸಿದ್ದಾರೆ. ಚಾರಣಿಗರು

9 ಮೃತದೇಹಗಳು ಹಾಗೂ ಬದುಕುಳಿದ 12 ಜನರನ್ನು ನಾಳೆ ಬೆಳಗ್ಗೆ ಒಳಗೆ ಬೆಂಗಳೂರಿಗೆ ಕರೆತರಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಸಚಿವ ಕೃಷ್ಣಭೈರೇಗೌಡ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದನ್ನು ಓದಿ : ಉತ್ತರ ಪ್ರದೇಶದ ಸುಮಾರು 16 ಕ್ಷೇತ್ರಗಳಲ್ಲಿ ಬಿಜೆಪಿಗೆ ನೆರವಾದ ಬಹುಜನ ಸಮಾಜ ಪಕ್ಷ ಅಭ್ಯರ್ಥಿಗಳು

ದುರಂತ ಸಂಭವಿಸಿದ ಬಳಿಕ ಡೆಹ್ರಾಡೂನ್‌ಗೆ ತೆರಳಿ, ವಿಮಾನ ನಿಲ್ದಾಣದಿಂದ ವಿಡಿಯೋ ಮೂಲಕ ಎಲ್ಲಾ ಮಾಹಿತಿಗಳನ್ನು ನೀಡಿದ ಸಚಿವರು, ಕೆಲವೇ ಸಮಯದಲ್ಲಿ ಮೃತಪಟ್ಟವರ ದೇಹಗಳು ಇಲ್ಲಿಗೆ ತಲುಪಲಿದೆ. ಜೀವಂತವಾಗಿರೋ 5 ಜನರು ಜೊತೆಗೆ ಬರಲಿದ್ದಾರೆ. ಈಗಾಗಲೇ 8 ಮಂದಿ ಬದುಕುಳಿದವರು ಡೆಹ್ರಾಡೂನ್‌ಗೆ ತಲುಪಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನು ನೋಡಿ : ಪರಿಸರ ಸಂರಕ್ಷಣೆ ನಮ್ಮ ಹೊಣೆ : ಮರುಭೂಮಿಯಾಗದಂತೆ ನೋಡಿಕೊಳ್ಳೋಣ Janashakthi Media

Donate Janashakthi Media

Leave a Reply

Your email address will not be published. Required fields are marked *