ಮಾದನಾಯಕನಹಳ್ಳಿ |ಕರ್ನಾಟಕ ರಾಷ್ಟ್ರ ಸಮೀತಿ ಪಕ್ಷದ ಕಾರ್ಯಕರ್ತರನ್ನು ಅಟ್ಟಾಡಿಸಿ  ಹೊಡೆದು ಗೂಂಡಾ ವರ್ತನೆ ಪೋಲಿಸರು

ಬೆಂಗಳೂರು : ಕರ್ನಾಟಕ ರಾಷ್ಟ್ರ ಸಮೀತಿ ಪಕ್ಷ (ಕೆಆರ್‌ಎಸ್‌) ಕಾರ್ಯಕರ್ತರನ್ನು ಮಾದನಾಯಕನಹಳ್ಳಿ ಠಾಣೆಯ ಮುಂಭಾಗ ಪೊಲೀಸರು ಅಟ್ಟಾಡಿಸಿ  ಹೊಡೆದು ಗೂಂಡಾ ವರ್ತನೆ ನಡೆಸಿರುವುದು ಬೆಳಕಿಗೆ ಬಂದಿದೆ. ಪೊಲೀಸರು ನಡೆಸಿರುವ ಹಲ್ಲೆ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.  ಮಾದನಾಯಕನಹಳ್ಳಿ

ಓರ್ವ ಕೆಆರ್‌ಎಸ್‌ ಕಾರ್ಯಕರ್ತನಿಗೆ ಮಹಿಳಾ ಪೊಲೀಸ್‌ ಹೆಲ್ಮೆಟ್‌ನಿಂದ ಮನಸೋ ಇಚ್ಛೆ ಹೊಡೆದಿದ್ದಾರೆ.  ಪೊಲೀಸ್‌ ಠಾಣೆ ಮುಂಭಾಗವೇ ಡಿವೈಎಸ್ಪಿ ಸಮ್ಮುಖದಲ್ಲಿ ಪೊಲೀಸರು ಕೆಆರ್‌ಎಸ್‌ ಕಾರ್ಯಕರ್ತರನ್ನು ಅಟ್ಟಾಡಿಸಿ ಹೊಡಿದುಕೊಂಡಿದ್ದಾರೆ.  ಕಾರ್ಯಕರ್ತರ ಮೊಬೈಲ್‌ ಕಸಿದು ದೌರ್ಜನ್ಯ ಎಸಗಿದ್ದಾರೆ ಎಂದು ಕೆಆರ್‌ಎಸ್‌ ಆರೋಪಿಸಿದೆ. ಪೊಲೀಸರ ದೌರ್ಜನ್ಯದ ವಿಡಿಯೋಗಳನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ : ಕಾವೇರಿ ಆರತಿ ಕೈ ಬಿಡಲು ಆಗ್ರಹಿಸಿ ಪ್ರಗತಿಪರ ಸಂಘಟನೆ ಪ್ರತಿಭಟನೆ

ಇನ್ಸ್‌ಪೆಕ್ಟರ್‌, ದರ್ಪದಿಂದ ನಿಂದಿಸುತ್ತಿರುವ ಹಾಗೂ ಮೊಬೈಲ್‌ ಕಿತ್ತುಕೊಂಡಿರುವ ವಿಡಿಯೋ ಗಮನಿಸಿರುವ ನೆಟ್ಟಿಗರು, ಅವರ ವರ್ತನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರಮುಖವಾಗಿ ನೆಲಮಂಗಲ ಠಾಣೆಯ ಇನ್ಸ್‌ಪೆಕ್ಟರ್‌ ನರೇಂದ್ರಬಾಬು ಕೆಆರ್‌ಎಸ್‌ ಕಾರ್ಯಕರ್ತರ ಮೊಬೈಲ್‌ ಕಸಿದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ಕೆಆರ್‌ಎಸ್‌ ಕಾರ್ಯಕರ್ತರು, ಅವರ ವಿರುದ್ಧ ಕ್ರಮ ಜರುಗಿಸುವಂತೆ ಡಿಜಿ-ಐಜಿಪಿಗೆ ಮನವಿ ಮಾಡಿದ್ದಾರೆ.

ಘಟನೆಗೆ ಸಂಬಂಧಿಸಿಧಿದಂತೆ ಮಾಹಿತಿ ಹಂಚಿಕೊಂಡಿರುವ ಕೆಆರ್‌ಎಸ್‌ ಮುಖ್ಯಸ್ಥರಾದ  ರವಿಕೃಷ್ಣರೇಡ್ಡಿ  “ಅನ್ಯಾಯಕ್ಕೆ ಒಳಗಾದ ರೈತರ ಪರವಾಗಿ ನ್ಯಾಯ ಕೇಳಲು ಹೋದ ಕೆಆರ್‌ಎಸ್‌ ಕಾರ್ಯಕರ್ತರನ್ನು ಪೊಲೀಸರು ಸುಳ್ಳು ಕೇಸ್‌ನಲ್ಲಿ ಅಕ್ರಮವಾಗಿ ಬಂಧಿಸಿದ್ದರು. ಇದನ್ನು ಪ್ರಶ್ನಿಸಲು ತೆರಳಿದ್ದ ಪಕ್ಷದ ಕಾರ್ಯಾಧ್ಯಕ್ಷ ರಘು ಜಾಣಗೆರೆ ಸೇರಿದಂತೆ ಇನ್ನಿತರರ ಮೇಲೆ ಪೊಲೀಸರು ಅಟ್ಟಾಡಿಸಿ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸುಳ್ಳು ಕೇಸ್‌ ದಾಖಲಿಸಿ ಜೈಲಿಗೆ ಕಳಿಸಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾಸನಪುರ ಎಪಿಎಂಸಿಯಲ್ಲಿಏಜೆಂಟರಿಂದ ರೈತರಿಗೆ ಆಗುತ್ತಿದ್ದ ಅನ್ಯಾಯ ಖಂಡಿಸಿ ಪ್ರತಿಭಟನೆ ನಡೆಸಿದ್ದ ಮೂವರು ಕೆಆರ್‌ಎಸ್‌ ಕಾರ್ಯಕರ್ತರನ್ನು ಮಾದನಾಯಕನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದರು. ಈ ಮಾಹಿತಿ ತಿಳಿದು ಪಕ್ಷದ ಕಾರ್ಯಧಕ್ಷ್ಯ  ರಘು ಜಾಣಗೆರೆ ಸೇರಿದಂತೆ ಮತ್ತಿತರರು ಠಾಣೆಗೆ ತೆರಳಿದಾಗ ಪೊಲೀಸರ ನಡುವೆ ವಾಕ್ಸಮರ ನಡೆದಿದೆ.

ಕೆಆರ್‌ಎಸ್‌ ಕಾರ್ಯಕರ್ತರು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸುತ್ತಿರುವುದಕ್ಕೆ ಪೊಲೀಸರು ಆಕ್ಷೇಪಿಸಿದ್ದಾರೆ. ಬಳಿಕ ಪೊಲೀಸರು ಏಕಾಏಕಿ ನಿಂದಿಸಿದ್ದಾರೆ. ಜತೆಗೆ, ಹಲವು ಮಂದಿಯನ್ನು ಓಡಿಸಿಕೊಂಡು ಹೋಗಿ ಹಿಡಿದಿದ್ದಾರೆ. ಅಂತಿಮವಾಗಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಕೆಆರ್‌ಎಸ್‌ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ತಡರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಆರೂ ಮಂದಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು ಎಂದು ತಿಳಿದು ಬಂದಿದೆ.

ಇದೀಗ ಶನಿವಾರ ರಾತ್ರಿ ಬಂದ ಮಾಹಿತಿ ಪ್ರಕಾರ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಕೆಆರ್‌ಎಸ್ ಕಾರ್ಯಕರ್ತರು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಇದನ್ನೂ ನೋಡಿ : ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ಹೋರಾಟ ತಾರ್ಕಿಕ ಅಂತ್ಯಕ್ಕೆ ಬರಲಿದೆ – ಮೀನಾಕ್ಷಿ ಬಾಳಿJanashakthi Media

 

Donate Janashakthi Media

Leave a Reply

Your email address will not be published. Required fields are marked *