ಬಿಹಾರ| 25 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕದ್ದ ಕಳ್ಳರು; ಪರಾರಿ

ಬಿಹಾರ: ನೆನ್ನೆ ಸೋಮವಾರ ರಾಜ್ಯದ ಆರ್ರಾ ಪ್ರದೇಶದಲ್ಲಿರುವ ತನಿಷ್ಕ್ ಜ್ಯುವೆಲ್ಲರ್ಸ್ ಶೋರೂಮ್​ನಲ್ಲಿ ಅಂದಾಜು 25 ಕೋಟಿ ರೂ. ಮೌಲ್ಯದ ಚಿನ್ನಾಭರಣ ಸೇರಿದಂತೆ ನಗದು ಹಣ ಕದ್ದು ಕಳ್ಳರು ಪರಾರಿಯಾಗಿರುವ ಘಟನೆ ನಡೆದಿದೆ. ಬಿಹಾರ

ಇಲ್ಲಿನ ಅರ್ರಾ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಆಭರಣ ಕದ್ದು ಪರಾರಿಯಾಗುತ್ತಿರುವ ದೃಶ್ಯಗಳು ಸೆರೆಯಾಗಿವೆ.ಇನ್ನು ಈ ಕುರಿತು ಪ್ರಕರಣ ದಾಖಲಾಗಿದ್ದು ಇಬ್ಬರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು| ಬಡ ರೈತರಿಗೆ ಭೂ ಮಂಜೂರು ಮಾಡಲು ಸಭೆ; ಅರ್ಜಿ ವಿಲೇವಾರಿ

ಶೋರೂಮ್​ ಮಾಲೀಕ ಕುಮಾರ್ ಮೃತ್ಯುಂಜಯ ಮಾಧ್ಯಮಗಳ ಜತೆ ಮಾತನಾಡಿದ್ದು, ‘ ದರೋಡೆಕೊರರು ನಗದು ಜತೆಗೆ ಚಿನ್ನಾಭರಣ, ಬಂಗಾರ ಸರಗಳು, ನೆಕ್ಲೇಸ್​ ಮತ್ತು ಕೆಲ ವಜ್ರಗಳು ಸೇರಿ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ. ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಂದಾಜು 25 ಕೋಟಿ ರೂ. ಮೌಲ್ಯದಷ್ಟು ವಸ್ತುಗಳು ಕಳುವಾಗಿವೆ. ಅಲ್ಲದೆ, ಶೋರೂಮ್​ನ ಕರೆಗೆ ಪೊಲೀಸರು ಮೊದಲು ಸ್ಪಂದಿಸಲಿಲ್ಲ ಎಂದು ಆರೋಪಿಸಿದ್ದಾರೆ.’

ಸಿಸಿಟಿವಿಯಲ್ಲಿ ಸೆರೆ

ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯಲ್ಲಿ 8-9 ಜನರು ಒಳನುಗ್ಗಿ ಶೋರೂಮ್​ ಒಳಗೆ ಇದ್ದ ಸಿಬ್ಬಂದಿ ಮತ್ತು ಉದ್ಯೋಗಿಗಳಿಗೆ ಗನ್​ ತೋರಿಸಿ ಬೆದರಿಸುತ್ತಿರುವುದು ಕಂಡುಬಂದಿದೆ. ನಂತರ ದರೋಡೆಕೋರರು ಕೌಂಟರ್‌ನಲ್ಲಿದ್ದ ನಗದು ಮತ್ತು ಹಲವಾರು ಆಭರಣಗಳನ್ನು ದೋಚಿರುವ ದೃಶ್ಯಗಳು ಸಿಸಿಟಿಯಲ್ಲಿ ಸೆರೆಯಾಗಿವೆ.

ಇದನ್ನೂ ನೋಡಿ: Karnataka Legislative Assembly Live Day 06 | ವಿಧಾನಸಭೆ ಬಜೆಟ್ ಅಧಿವೇಶನದ ನೇರ ಪ್ರಸಾರ

Donate Janashakthi Media

Leave a Reply

Your email address will not be published. Required fields are marked *