ಕ್ರೂರ ವರ್ತನೆಗೆ ಗುರಿಯಾದ ಬಾಲಕನ  ಮನೆಗೆ ಸಿಪಿಐ(ಎಂ) ನಿಯೋಗದ ಭೇಟಿ

ಸಿಪಿಐ(ಎಂ) ಪೊಲಿಟ್ ಬ್ಯೂರೋ ಸದಸ್ಯೆ ಸುಭಾಷಿಣಿ ಅಲಿ ಮತ್ತು ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಅವರನ್ನೊಳಗೊಂಡ ಸಿಪಿಐ(ಎಂ) ನಿಯೋಗವು ಉತ್ತರಪ್ರದೇಶದ ಮುಝಫ್ಫರ್‍ ನಗರ ಜಿಲ್ಲೆಯ ಒಂದು ಹಳ್ಳಿಯ ಶಾಲೆಯ ಮಾಲೀಕರೂ ಆದ ಶಿಕ್ಷಕರ ಕ್ರೂರ ವರ್ತನೆಗೆ ಗುರಿಯಾದ ಮುಸ್ಲಿಂ ಬಾಲಕನ  ಕುಟುಂಬವನ್ನು ಆಗಸ್ಟ್ 30ರಂದು ಭೇಟಿ ಮಾಡಿತು. ನಿಯೋಗವು  ಖುಬ್ ಬಾಪುರ್ ಗ್ರಾಮದ ಅವರ ಅವಿಭಕ್ತ ಕುಟುಂಬದ ಮನೆಯಲ್ಲಿ ಆ ಚಿಕ್ಕ ಹುಡುಗನನ್ನು ಮತ್ತು ಆತನ  ಪೋಷಕರಾದ ಇರ್ಷಾದ್ ಮತ್ತು ರುಬೀನಾರನ್ನು ಭೇಟಿ ಮಾಡಿತು. ಅವರು ಬಡ ಜನಗಳು. ಅವರ ಇಬ್ಬರು ಹಿರಿಯ ಪುತ್ರರು ಚಂಡೀಗಢದಲ್ಲಿ ಕೆಲಸ ಮಾಡುತ್ತಿದ್ದಾರೆ.…