ಎನ್‌ಸಿಇಆರ್‌ಟಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಸುಧಾ ಮೂರ್ತಿ!

ಸುಧಾ ಮೂರ್ತಿ

ನವದೆಹಲಿ: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಇದರ ಹೊಸ ಪಠ್ಯಕ್ರಮದ ಪ್ರಕಾರ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ರಚಿಸಿರುವ ಹೊಸ ಸಮಿತಿಯ 19 ಸದಸ್ಯರಲ್ಲಿ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಮತ್ತು ಸಂಗೀತಗಾರ ಶಂಕರ್ ಮಹಾದೇವನ್ ಸ್ಥಾನ ಪಡೆದಿದ್ದಾರೆ.

19 ಸದಸ್ಯರಿರುವ ರಾಷ್ಟ್ರೀಯ ಪಠ್ಯಕ್ರಮ ಮತ್ತು ಬೋಧನಾ ಕಲಿಕಾ ಸಾಮಗ್ರಿ ಸಮಿತಿ (NSTC)ಯ ನೇತೃತ್ವವನ್ನು ಎಂ.ಸಿ. ಪಂತ್ ವಹಿಸಿದ್ದು, ಈ ಸಮಿತಿ 3 ರಿಂದ 12 ನೇ ತರಗತಿಗಳಿಗೆ ಪಠ್ಯಪುಸ್ತಕಗಳನ್ನು ಅಭಿವೃದ್ಧಿಪಡಿಸುತ್ತದೆ. ಪಂತ್ ಅವರು ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆ (NIEPA)ಯ ಕುಲಪತಿಯಾಗಿದ್ದಾರೆ.

ಇದನ್ನೂ ಓದಿ: ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣ ಸೇರಿಸಿ: ಕೇರಳ ಹೈಕೋರ್ಟ್ ಶಿಫಾರಸು

ಪಠ್ಯಪುಸ್ತಕಗಳು ಮತ್ತು ಇತರ ಬೋಧನಾ ಕಲಿಕಾ ಸಾಮಗ್ರಿಗಳನ್ನು ಸಿದ್ಧಪಡಿಸಲು ಈ ಸಮಿತಿಗೆ ನಿರ್ದೇಶಿಸಲಾಗಿದ್ದು, ಇವುಗಳನ್ನು ಎನ್‌ಸಿಇಆರ್‌ಟಿ ಉಲ್ಲೇಖಿಸಿ ನಿಯಮಗಳ ಪ್ರಕಾರ ಪ್ರಕಟಿಸಿ ಬಳಸುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಸುಧಾ ಮೂರ್ತಿ ಮತ್ತು ಸಂಗೀತಗಾರ ಶಂಕರ್ ಮಹಾದೇವನ್ ಒಳಗೊಂಡಿರುವ ಎನ್‌ಎಸ್‌ಟಿಸಿ ಸಮಿತಿಗೆ ಪ್ರತಿ ಪಠ್ಯಕ್ರಮದ ಬೋಧನಾ-ಕಲಿಕೆ ಸಾಮಗ್ರಿಗಳ ಅಭಿವೃದ್ಧಿಯಲ್ಲಿ ‘ಪಠ್ಯಕ್ರಮದ ಪ್ರದೇಶ ಗುಂಪುಗಳು’ (CAGs) ಸಹಾಯ ಮಾಡುತ್ತದೆ. ಈ ಗುಂಪುಗಳು ಸೂಕ್ತ ತಜ್ಞರನ್ನು ಒಳಗೊಂಡಿದ್ದು, ಎನ್‌ಸಿಇಆರ್‌ಟಿಯ ನೆರವಿನೊಂದಿಗೆ ಎನ್‌ಎಸ್‌ಟಿಸಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ನೇಮಕ ಮಾಡುತ್ತದೆ” ಎಂದು ಅಧಿಕಾರಿ ಹೇಳಿದ್ದಾರೆ. ಸುಧಾ ಮೂರ್ತಿ

ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರದ ಪ್ರಾಧ್ಯಾಪಕ ಮಂಜುಲ್ ಭಾರ್ಗವ್ ಅವರು ಸಮಿತಿಯ ಸಹ-ಅಧ್ಯಕ್ಷರಾಗಿದ್ದಾರೆ. ಗಣಿತಶಾಸ್ತ್ರಜ್ಞೆ ಸುಜಾತಾ ರಾಮದೊರೈ, ಬ್ಯಾಡ್ಮಿಂಟನ್ ಆಟಗಾರ್ತಿ ಯು. ವಿಮಲ್ ಕುಮಾರ್, ನೀತಿ ಅಧ್ಯಯನ ಕೇಂದ್ರದ ಅಧ್ಯಕ್ಷ ಎಂ.ಡಿ. ಶ್ರೀನಿವಾಸ್ ಮತ್ತು ಭಾರತೀಯ ಭಾಷಾ ಸಮಿತಿಯ ಅಧ್ಯಕ್ಷ ಚಾಮು ಕೃಷ್ಣ ಶಾಸ್ತ್ರಿ ಈ ಸಮಿತಿಯ ಇತರ ಸದಸ್ಯರಾಗಿದ್ದಾರೆ.

ಇದನ್ನೂ ಓದಿ: ಪಠ್ಯ ಪುಸ್ತಕ ಪರಿಷ್ಕರಣೆ : ಸಮಾನ ಮನಸ್ಕರು ನೀಡಿದ ಮನವಿಯನ್ನು ಪುರಸ್ಕರಿಸಲು ಎಸ್ ಎಫ್ ಐ ಆಗ್ರಹ

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ರ ಅನುಷ್ಠಾನದ ಭಾಗವಾಗಿ ಕೆ. ಕಸ್ತೂರಿರಂಗನ್ ನೇತೃತ್ವದ ಸಮಿತಿಯು ಅಭಿವೃದ್ಧಿಪಡಿಸಿದ ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನೊಂದಿಗೆ (ಎನ್‌ಸಿಎಫ್-ಎಸ್‌ಇ) ಪಠ್ಯಕ್ರಮವನ್ನು ರಚಿಸಲು ಸಮಿತಿಯು ಕೆಲಸ ಮಾಡುತ್ತಿದೆ.

ಅಂತಿಮ ಎನ್‌ಸಿಎಫ್-ಎಸ್‌ಇ ಅನ್ನು ಈಗಾಗಲೇ ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ಸಲ್ಲಿಸಲಾಗಿದೆಯಾದರೂ, ಅದನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಇನ್ನಷ್ಟೆ ಬಿಡುಗಡೆ ಮಾಡಬೇಕಾಗಿದೆ. ಚೌಕಟ್ಟಿನ ಕರಡು ಏಪ್ರಿಲ್‌ನಲ್ಲಿ ಬಿಡುಗಡೆಯಾಯಿತು. ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಿಂದ ಹಲವಾರು ವಿಷಯಗಳು ಮತ್ತು ಭಾಗಗಳನ್ನು ಕೈಬಿಟ್ಟಿರುವುದು ಮೇ ತಿಂಗಳಲ್ಲಿ ತೀವ್ರ ವಿವಾದ ಹುಟ್ಟುಹಾಕಿತು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು “ಸೇಡಿನ ವೈಟ್‌ವಾಶ್” ಎಂದು ಪ್ರತಿಪಕ್ಷಗಳು ದೂಷಿಸಿದ್ದವು.

ಪಠ್ಯಪುಸ್ತಕಗಳಲ್ಲಿನ ಲೋಪಗಳು ಉದ್ದೇಶಪೂರ್ವಕವಾಗಿ ಮಾಡಿಲ್ಲ ಎಂದು ಎನ್‌ಸಿಇಆರ್‌ಟಿ ಹೇಳಿಕೊಂಡಿದ್ದರೂ, ಕೈ ಬಿಟ್ಟಿರುವ ವಿಷಯಗಳನ್ನು ಮತ್ತೆ ಸೇರಿಸುವುದಿಲ್ಲ ಎಂದು ಹೇಳಿತ್ತು. ಜೊತೆಗೆ ತಜ್ಞರು ನೀಡಿದ ಶಿಫಾರಸುಗಳ ಆಧಾರದ ಮೇಲೆ ಅವುಗಳನ್ನು ತೆಗೆದುಹಾಕಲಾಗಿದೆ ಎಂದು NCERT ಹೇಳಿತ್ತು.

ವಿಡಿಯೊ ನೋಡಿ: ಎನ್‌ಇಪಿ-2020 ಎಂದರೆ ‘ನಾಗಪುರ ಬ್ರಾಹ್ಮಣರ ಪಾಲಿಸಿ’ – ಎಸ್.ಜಿ. ಸಿದ್ದರಾಮಯ್ಯJanashakthi Media

Donate Janashakthi Media

Leave a Reply

Your email address will not be published. Required fields are marked *