ಬೀದಿಬದಿ ವ್ಯಾಪಾರಿಗಳಿಗೆ ಪುನರ್ವಸತಿ ಇಲ್ಲದೆ ಎತ್ತಂಗಡಿ ಕಾನೂನು ಬಾಹಿರ: ಸಿ. ಯತಿರಾಜು

ತುಮಕೂರು: ಬೀದಿಬದಿ ವ್ಯಾಪಾರಿಗಳು ಕೈಗೆಟಕುವ ದರಗಳಲ್ಲಿ ರುಚಿಯಾದ ಅಹಾರ – ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಬಡಜನರ  ಮಿತ್ರರಾಗಿದ್ದಾರೆ. ಸರ್ಕಾರ ಈ ವ್ಯಾಪಾರಿಗಳ ದತ್ತಾಂಶವನ್ನು ಸಮಗ್ರವಾಗಿ ಸಂಗ್ರಹಿಸಿ ಅವರಿಗೆ ಪುನರ್ವಸತಿ  ಕಲ್ವಿಸಿ, ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಬೇಕೆಂದು ಚಿಂತಕ – ಹೋರಾಟಗಾರ ಸಿ.ಯತಿರಾಜು ಅಭಿಪ್ರಾಯ ಪಟ್ಟರು.

ಸರ್ಕಾರಗಳು ಬಡಜನರ ಪರವಾದ ಕಾನೂನುಗಳನ್ನು ಜಾರಿ ಮಾಡುವಲ್ಲಿ ಅಸಕ್ತಿ ತೊರದ ಮನಸ್ಥಿತಿಯಲ್ಲಿದೆ ಎಂದ ಅವರು ಇದರ ವಿರುದ್ದ ತಮ್ಮ ಹಕ್ಕುಭಾದ್ಯತೆಗಳನ್ನು ಪಡೆಯಲು ಸಂಘಟಿತರಾಗುವುದು ಅತ್ಯಂತ ಅವಶ್ಯಕವಾದದ್ದು ಎಂದು ಹೇಳಿದರು.

ಬುಧವಾರದಂದು ನಗರದ ಜನ ಚಳುವಳಿ ಕೇಂದ್ರದಲ್ಲಿ ತುಮಕೂರು  ಜಿಲ್ಲಾ ಪುಟ್‌ಪಾತ್ ವ್ಯಾಪಾರಿಗಳ ಸಂಘ (ಸಿಐಟಿಯು ಸಂಯೋಜಿತ)ದ 21ನೇ ವಾರ್ಷಿಕೋತ್ಸವದ ಸಮಾರಂಭ ಹಾಗು ತುಮಕೂರು ನಗರ ಸಮ್ಮೇಳವನ್ನು ಉಧ್ಘಾಟಿಸಿ ಮಾತನಾಡಿದರು.

ಈ ಸಮ್ಮೇಳನವು ನಗರದ ಎಲ್ಲಾ ಬೀದಿಬದಿ ವ್ಯಾಪಾರಿಗಳನ್ನು ಗುರುತಿಸುವ ಹಾಗು ಅವರಿಗೆ ಕಡ್ಡಾಯವಾಗಿ ಮಹಾನಗರ ಪಾಲಿಕೆ  ಕಾರ್ಡನ್ನು ನೀಡಬೇಕು, ನಗರದಲ್ಲಿ ಸರಿಸುಮಾರು 8-9 ಸಾವಿರ ಬೀದಿ ವ್ಯಾಪಾರಿಗಳ ಪುನರ್ವಸತಿಗೆ ಕನಿಷ್ಟ 50 ವೆಂಡಿಗ್ ಜೋನ್‌ಗಳನ್ನು ರೂಪಿಸಬೇಕು. ಸ್ವಂತ ಮನೆ/ನಿವೇಶನ ಇಲ್ಲದ ವ್ಯಾಪಾರಿಗಳನ್ನು ಗುರುತಿ ವಸತಿ ಸೌಲಭ್ಯ ನೀಡಬೇಕು. ಕನಿಷ್ಟ 1 ಲಕ್ಷ ರೂ.ಗಳವರೆಗೆ ಬಡ್ಡಿ ರಹಿತ ಸಾಲ ನೀಡಬೇಕು, ವ್ಯಾಪಾರಿಗಳಿಗೆ ಸೂಕ್ತ ಪುನರ್ವಸತಿ ಕಲ್ಪಿಸದೆ ಒಕ್ಕಲೆಬ್ಬಿಸಬಾರದು. ಎಂ.ಜಿ.ರಸ್ತೆಯ ಪುಟ್‌ಪಾತ್ ವ್ಯಾಪಾರಿಗಳಿಗೆ ಅದೇ ಬೀದಿಯಲ್ಲಿ ಮೂಲಸೌಕರ್ಯಗಳೊಂದಿಗೆ ಕನ್ಸವೆನ್ಸಿ ಒಂದರಲ್ಲಿ ಜಾಗ ನೀಡಬೇಕು, ಸ್ಮಾಟ್ ಸಿಟಿಯಲ್ಲಿ ನಿರ್ಮಾಣವಾಗುತ್ತಿರುವ ವೇಡಿಂಗ್ ಜೋನ್‌ಗಳಲ್ಲಿ ನಿಜವಾದ ವ್ಯಾಪಾರಿಗಳನ್ನೆ ಮಳಿಗೆಗಳನ್ನು ನೀಡಬೇಕು ಎಂಬ ನಿರ್ಣಯಗಳನ್ನು ಸಮ್ಮೇಳನದಲ್ಲಿ ಸರ್ವಾನುಮತದಿಂದ ಕೈಗೊಳ್ಳಲಾಯಿತು.

ಸಮ್ಮೇಳದ ಅಧ್ಯಕ್ಷತೆಯನ್ನು ಸಿಐಟಿಯು ಜಿಲ್ಲಾ ಅಧ್ಯಕ್ಷ ಸೈಯದ್ ಮುಜೀಬ್ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಎನ್.ಕೆ.ಸುಬ್ರಮಣ್ಯ, ಟಿ.ಎಸ್.ರಾಜಶೇಖರ್, ಶ್ರೀಧರ್, ಪುಡ್‌ಕೋಟ್‌ನ ಪ್ರಕಾಶ್, ಶಿರಾಗೇಟ್‌ನ ಅಲ್ಲಬಕಾಶ್, ಶೆಟ್ಟೇಹಳ್ಳಿ ಪ್ರದೇಶದ ಮುಖಂಡರಾದ ತುಳಸಿ, ಅಶೋಕ ರಸ್ತೆಯ ಸಾಬ್ ಜಾನ ಸಾಬ್ ಮಾತನಾಡಿದರು. ಸಭೆಯ  ಅರಂಭದಲ್ಲಿ ವಸೀಂ ಅಕ್ರಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುತ್ತುರಾಜ್ ಸ್ವಾಗತಿಸಿ, ರವಿಕುಮಾರ್ ಹೆಚ್. ಕೆ ವಂದಿಸಿದರು.

ಸಮ್ಮೇಳನದಲ್ಲಿ ಜಿ.ಜಗದೀಶ್, ಸುಜಾತ, ಎಂ.ಜಿ.ರಸ್ತೆಯ ಪರವಾಗಿ ತಬೇಜ್ ಪಾಷ, ಗಿರಿ, ಶೇಕ್‌ಪಜ್ಮಾನ್, ಇತರರು ಮಾತನಾಡಿದರು.

ಸಮ್ಮೇಳನ ನಗರ ಮಟ್ಟದ ಪದಾಧಿಕಾರಿಗಳನ್ನು ಚುನಾಯಿಸಿತು. ಅಧ್ಯಕ್ಷರಾಗಿ ಟಿ.ಎಸ್.ರಾಜಶೇಖರ್, ಉಪಧ್ಯಾಕ್ಷರಾಗಿ ರವಿಕುಮಾರ್  ಹೆಚ್.ಕೆ.  (ಮಿನಿ ಸಿದ್ದಿ ವಿನಾಯಕ ಮಾರುಕಟ್ಟೆ)  ಜಿ.ಜಗದೀಶ್ (ಅರ್.ಟಿ.ಓ ಪುಡ್ ಕೊಟ್),  ಶ್ರೀಧರ್ (ಜೆ.ಸಿ ರಸ್ತೆ), ಪ್ರಧಾನ ಕಾರ್ಯದರ್ಶಿಯಾಗಿ ವಸೀಂ ಅಕ್ರಂ, ಕಾರ್ಯದರ್ಶಿಗಳಾಗಿ ಪ್ರಕಾಶ್, ಅಲ್ಲಾ ಬಕಾಶ್, ಸೈಯದ್ ಅಸಿಪ್, ಖಚಾಂಜಿಯಾಗಿ ಎನ್ ಮುತ್ತುರಾಜ್, ಸಂಘಟನಾ ಕಾರ್ಯದರ್ಶಿಗಳಾಗಿ ಶ್ರೀಮತಿ ತುಳಸಿ, ಶ್ರೀಮತಿ ಲಕ್ಷ್ಮಮ್ಮ, ಶ್ರೀಮತಿ ಅಂಬಿಕಾ, ಶ್ರೀಮತಿ ಸುಜಾತ ಅವರುಗಳು ಆಯ್ಕೆಯಾಗಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *