ಆನಂದ್ ತೇಲ್ತುಂಬ್ಡೆ, ಡಾ. ಮಹದೇವಪ್ಪ, ನಾ. ಡಿಸೋಜ, ಮೀನಾಕ್ಷಿ ಬಾಳಿ ಸೇರಿ 75 ಗಣ್ಯರಿಗೆ ವಿವಿಧ ಪ್ರಶಸ್ತಿ ಪ್ರಕಟ

ಬೆಂಗಳೂರು: ಬಸವ ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನಾಲ್ಕು ವರ್ಷಗಳ ತರುವಾಯ ಏಕಕಾಲಕ್ಕೆ ಪ್ರಕಟಿಸಿದ್ದು, ಒಟ್ಟು 75 ಸಾಧಕರ ಹೆಸರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುವಾರ ಪ್ರಕಟಿಸಿದೆ. ಆನಂದ್ 

ಮೊದಲ ಬಾರಿಗೆ ಸರಕಾರ ಇಷ್ಟು ದೊಡ್ಡ ಪ್ರಮಾಣದಲ್ಲಿ 21 ವಿಭಾಗದ ಸಾಧಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಸವ ರಾಷ್ಟ್ರೀಯ ಪ್ರಶಸ್ತಿಗೆ ಮಹಾರಾಷ್ಟ್ರದ ಆನಂದ ತೆಲ್ತುಂಬಡೆ (2022-23) ಹಾಗೂ ಧಾರವಾಡದ ಡಾ. ಎನ್.ಜಿ. ಮಹದೇವಪ್ಪ (2023-24) ಅವರನ್ನು ಕ್ರಮವಾಗಿ 2022-23 ಹಾಗೂ 2023-24ನೇ ಸಾಲಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಘೋಷಿಸಿದರೂ, ಪ್ರಶಸ್ತಿ ಪ್ರದಾನ ಮಾಡದಿರುವ 2020-21ನೇ ಸಾಲಿನ ರತ್ನಗಿರಿಯ ಭಿಕು ರಾಮ್‍ಜಿ ಇದಾತೆ, 2021-22ನೇ ಸಾಲಿಗೆ ಡಾ. ವೀರಣ್ಣ ರಾಜೂರು ಅವರನ್ನು ಬಸವ ರಾಷ್ಟ್ರೀಯ ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ತಿಳಿಸಿದರು.

ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿಗೆ ಧಾರವಾಡದ ಜಿನದತ್ತ ದೇಸಾಯಿ ಹಾಗೂ ಗುಜರಾತ್‍ನ ಗಾಂಧೀ ಸೇವಾಶ್ರಮ ಆಯ್ಕೆಯಾಗಿದೆ. ಗಾಯನಯೋಗಿ ಪಂ. ಪಂಚಾಕ್ಷರಿ ಗವಾಯಿ ಪ್ರಶಸ್ತಿಗೆ ಹಿಂದೂಸ್ಥಾನಿ ಗಾಯಕ ಧಾರವಾಡದ ಪಂ. ಸೋಮನಾಥ ಮರಡೂರ ಮತ್ತು ಮೈಸೂರು ಡಾ. ನಾಗಮಣಿ ಶ್ರೀನಾಥ್ ಅವರನ್ನು ಆಯ್ಕೆ ಮಾಡಲಾಗಿದೆ. ಟಿ. ಚೌಡಯ್ಯ ಪ್ರಶಸ್ತಿಗೆ ಮುಂಬಯಿನ ಕೊಳಲು ವಾದಕ ನಿತ್ಯಾನಂದ ಹಳದಿಪುರ, ಕೋಲಾರದ ನಾದಸ್ವರ ಕಲಾವಿದ ಶ್ರೀರಾಮುಲು ಭಾಜನರಾಗಿದ್ದಾರೆ. ಆನಂದ್ 

ಇದನ್ನೂ ಓದಿಆನಂದ್​ ತೆಲ್ತುಂಬ್ಡೆ ಜಾಮೀನು ವಿರೋಧಿಸಿ ಎನ್‌ಐಎ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ನಾನಾ ಪ್ರಶಸ್ತಿಗಳಿಗೆ ಆಯ್ಕೆಯಾದ ಸಾಧಕರ ವಿವರ ಈ ಕೆಳಗಿನಂತಿದೆ. 

ಬಸವ ರಾಷ್ಟ್ರೀಯ ಪ್ರಶಸ್ತಿ

  • ಭಿಕು ರಾಮ್‍ಜಿ ಇದಾತೆ (ರತ್ನಗಿರಿ)
  • ಡಾ. ವೀರಣ್ಣ ರಾಜೂರು ಆನಂದ ತೆಲ್ತುಂಬಡೆ (ಮಹಾರಾಷ್ಟ್ರ)
  • ಡಾ. ಎನ್.ಜಿ. ಮಹದೇವಪ್ಪ (ಧಾರವಾಡ)

ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ

  • ಜಪಾನಂದ ಸ್ವಾಮೀಜಿ
  • ಸದಾನಂದ ಮಾಸ್ಟರ್ ಜಿನದತ್ತ ದೇಸಾಯಿ (ಧಾರವಾಡ)
  • ಗಾಂಧೀ ಸೇವಾಶ್ರಮ (ಗುಜರಾತ್)

ಟಿ. ಚೌಡಯ್ಯ ಪ್ರಶಸ್ತಿ

  • ಎಂ. ವಾಸುದೇವ ಮೋಹಿತೆ
  • ಹರಿಪ್ರಸಾದ್ ಚೌರಾಸಿಯಾ ಕೊಳಲು ವಾದಕ
  • ನಿತ್ಯಾನಂದ ಹಳದಿಪುರ (ಮುಂಬಯಿ)
  • ಶ್ರೀರಾಮುಲು (ಕೋಲಾರ)”

ಪಂ. ಪಂಚಾಕ್ಷರಿ ಗವಾಯಿ ಪ್ರಶಸ್ತಿ

  • ಹಿಂದೂಸ್ಥಾನಿ ಗಾಯಕ ಪಂ. ಸೋಮನಾಥ ಮರಡೂರ (ಧಾರವಾಡ)
  • ಡಾ. ನಾಗಮಣಿ ಶ್ರೀನಾಥ್ (ಮೈಸೂರು)

ಪಂಪ ಪ್ರಶಸ್ತಿ

  • ಸಿ.ಪಿ. ಕೃಷ್ಣಕುಮಾರ್
  • ಡಾ. ಎಸ್.ಆರ್. ರಾಮಸ್ವಾಮಿ
  • ಸಾಹಿತಿ ನಾ. ಡಿಸೋಜ

ಸಂಗೊಳ್ಳಿ ರಾಯಣ್ಣ ಪ್ರಶಸ್ತಿ

  • ಕೆ. ಮರುಳಸಿದ್ದಪ್ಪ (ಬೆಂಗಳೂರು)
  • ಹಸನ್ ನಯೀಂ ಸುರಕೋಡ (ಬೆಳಗಾವಿ)
  • ಕೆ. ರಾಮಯ್ಯ (ಕೋಲಾರ)
  • ವೀರ ಸಂಗಯ್ಯ (ವಿಜಯನಗರ)

ಅಕ್ಕಮಹಾದೇವಿ ಪ್ರಶಸ್ತಿ

  • ಅಕ್ಕಮಹಾದೇವಿ ಆಶ್ರಮ ಟ್ರಸ್ಟ್ (ಧಾರವಾಡ)
  • ಡಾ. ಆರ್.ಸುನಂದಮ್ಮ (ಮಂಡ್ಯ)
  • ಮೀನಾಕ್ಷಿ ಬಾಳಿ ( ಕಲಬುರಗಿ)
  • ಡಾ. ವಸುಂಧರಾ ಭೂಪತಿ (ಬೆಂಗಳೂರು)

ಕನಕಶ್ರೀ ಪ್ರಶಸ್ತಿ

  • ಡಾ. ಲಿಂಗದಹಳ್ಳಿ ಹಾಲಪ್ಪ (ಹಾವೇರಿ)
  • ಡಾ. ಬಿ. ಶಿವರಾಮ ಶೆಟ್ಟಿ (ಮಂಗಳೂರು)

ಕೆ.ಜಿ.ಕುಂದಣಗಾರ ಗಡಿನಾಡ ಪ್ರಶಸ್ತಿ

  • ಡಾ. ಕೆ. ವಿಶ್ವನಾಥ್ ಕಾರ್ನಾಡ್ (ಮಹಾರಾಷ್ಟ್ರ)
  • ಚಂದ್ರಕಾಂತ ಪೋಕಳೆ (ಬೆಳಗಾವಿ) “

ಅತ್ತಿಮಬ್ಬೆ ಪ್ರಶಸ್ತಿ

  • ಕೌಸಲ್ಯಾ ಧರಣೇಂದ್ರ
  • ಮಾಲತಿ ಪಟ್ಟಣಶೆಟ್ಟಿ

ಬಾನು ಮುಷ್ತಾಕ್ (ಹಾಸನ) ಎಚ್.ಎಸ್.ಮುಕ್ತಾಯಕ್ಕ (ರಾಯಚೂರು) ”

ಬಿ.ವಿ.ಕಾರಂತ ಪ್ರಶಸ್ತಿ ಆನಂದ್ 

  • ಸಿ.ಬಸವಲಿಂಗಯ್ಯ (ಬೆಂ)
  • ಸದಾನಂದ ಸುವರ್ಣ (ಮಂಗಳೂರು)

ಗುಬ್ಬಿ ವೀರಣ್ಣ ಪ್ರಶಸ್ತಿ

  • ಕುಮಾರಸ್ವಾಮಿ (ಚಿತ್ರದುರ್ಗ)
  • ಬಾಬಣ್ಣ ಕಲ್ಮನಿ ಚನ್ನಬಸಯ್ಯ ಗುಬ್ಬಿ (ತುಮಕೂರು)
  • ಎಲ್.ಬಿ.ಶೇಖ್ ಮಾಸ್ತರ (ವಿಜಯಪುರ) “

ಡಾ. ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ

  • ಡಾ. ಮೊಗಳ್ಳಿ ಗಣೇಶ್ (ಹಂಪಿ)
  • ಉತ್ತಮ ಕಾಂಬ್ಳೆ (ಮರಾಠಿ ಲೇಖಕರು)
  • ಬಿ.ಟಿ.ಜಾಹ್ನವಿ (ದಾವಣಗೆರೆ)

ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ

  • ಗಾಯತ್ರಿ ದೇಸಾಯಿ
  • ವಿಜಯ್ ಹಾಗರ ಗುಂಡಗಿ
  • ಜಿ.ಎಲ್.ಎನ್.ಸಿಂಹ (ಮೈಸೂರು)
  • ಬಸವರಾಜ್ ಎಲ್. ಜಾನೆ (ಕಲಬುರಗಿ) “

ಜಾನಪದಶ್ರೀ ಪ್ರಶಸ್ತಿ ವಾದನ

  • ಹುಸೇನ ಬಿ. ಬುಡೇನ್
  • ಕುಮಾರಸ್ವಾಮಿ (ಮೈಸೂರು)
  • ಅರುವ ಕೊರಗಪ್ಪ ಶೆಟ್ಟಿ (ದ.ಕ)
  • ಜಿ.ಪಿ. ಜಗದೀಶ್ (ಚಿಕ್ಕಮಗಳೂರು) “

ಜಾನಪದಶ್ರೀ ಗಾಯನ

  • ಮಾರೆಪ್ಪ ದಾಸರ
  • ಡಾ. ಅಪ್ಪಗೆರೆ ತಿಮ್ಮರಾಜು
  • ಕಲ್ಲಪ್ಪ ಮಿರ್ಜಾಪುರ (ಬೀದರ್)
  • ಹಲಗೆ ದುರ್ಗಮ್ಮ (ಚಿತ್ರದುರ್ಗ)

ನಿಜಗುಣಶ್ರೀ ಪುರಂದರ ಪ್ರಶಸ್ತಿ

  • ವೆಂಕಟೇಶ್‍ಕುಮಾರ್
  • ಎಂ.ಎಸ್. ಶೀಲಾ
  • ಎಂ.ಕೆ.ಸರಸ್ವತಿ (ಮೈಸೂರು)
  • ಅಕ್ಕಮಹಾದೇವಿ ಮಠ (ಧಾರವಾಡ)

ಕುಮಾರವ್ಯಾಸ ಪ್ರಶಸ್ತ

  • ರಾಜಾರಾಂ ಮೂರ್ತಿ
  • ಡಾ. ಎಂ.ಕೆ. ರಾಮಶೇಷನ್
  • ಸಿದ್ದೇಶ್ವರ ಶಾಸ್ತ್ರಿ (ಗದಗ)
  • ಕೃಷ್ಣಗಿರಿ ರಾಮಚಂದ್ರ (ಮೈಸೂರು)

ಶಾಂತಲಾ ನಾಟ್ಯ ಪ್ರಶಸ್ತಿ

  • ಎಂ.ಆರ್. ಕೃಷ್ಣಮೂರ್ತಿ
  • ಬಿ.ಎಸ್. ಸುನಂದಾದೇವಿಚಿತ್ರಾ ವೇಣುಗೋಪಾಲ್ (ಬೆಂ)
  • ರೇವತಿ ನರಸಿಂಹನ್ (ಬೆಂ)

ಸಂತ ಶಿಶುನಾಳ ಷರೀಫ ಪ್ರಶಸ್ತಿ

  • ಪುತ್ತೂರು ನರಸಿಂಹ
  • ಚಂದ್ರಶೇಖರ ಜೋಯಿಸ್
  • ಕಸ್ತೂರಿ ಶಂಕರ್ (ಬೆಂ)
  • ಎನ್.ಬಿ.ಶಿವಲಿಂಗಪ್ಪ (ಶಿವಮೊಗ್ಗ)

ಈ ವಿಡಿಯೋ ನೋಡಿಗಣತಂತ್ರ 75 :ಎತ್ತ ಚಲಿಸುತ್ತಿದೆ ಭಾರತ |ನಾದದ‌ ಅಲೆಯನೇರಿ – ನಾದ ಮಣಿನಾಲ್ಕೂರು ಜೊತೆ ಹಾಡು ಮಾತು Janashakthi Media

 

 

Donate Janashakthi Media

Leave a Reply

Your email address will not be published. Required fields are marked *