ನವದೆಹಲಿ: ಪ್ರಧಾನ ಮಂತ್ರಿಗಳು ಮಿಲಿಟರಿ ಕಾರ್ಯಾಚರಣೆಗಳ ನಿಲುಗಡೆಯ ಎರಡು ದಿನಗಳ ನಂತರ ಮೇ 12ರ ರಾತ್ರಿ ದೇಶವನ್ನು ಉದ್ದೇಶಿಸಿ ಎಂ.ಎ.ಬೇಬಿ ಭಾಷಣ ಮಾಡಿದರು. ಮಾತುಗಾರಿಕೆ
ಈ ಬಗ್ಗೆ ಟಿಪ್ಪಣಿ ಮಾಡುತ್ತ, “ಬಹಳಷ್ಟು ಆಡಂಬರದ ಮಾತುಗಳಿಂದ ಕೂಡಿದ ಭಾಷಣದಲ್ಲಿ ಗಡಿಯಾಚೆಗಿನ ಶೆಲ್ ದಾಳಿಯಲ್ಲಿ ಕೊಲ್ಲಲ್ಪಟ್ಟವರು ಮತ್ತು ಅವರ ಕುಟುಂಬಗಳ ಬಗ್ಗೆ ಉಲ್ಲೇಖಿಸಲು ಪ್ರಧಾನಿಗೆ ಸಮಯವೇ ಸಿಗಲಿಲ್ಲ, ಕಾಶ್ಮೀರಿ ಜನತೆಯ ಧೈರ್ಯ, ಭಯೋತ್ಪಾದಕ ದಾಳಿಗೆ ಗುರಿಯಾದವರಿಗೆ ಸಹಾಯ ಮಾಡುವಲ್ಲಿ ಅವರ ನಿಸ್ವಾರ್ಥ ಪಾತ್ರ ಅಥವಾ ದಾಳಿಯನ್ನು ಅವರು ಸ್ಪಷ್ಟವಾಗಿ ಖಂಡಿಸಿದ ಬಗ್ಗೆ ಪ್ರಧಾನಿಯವರಿಂದ ಒಂದೇ ಒಂದು ಮಾತೂ ಇರಲಿಲ್ಲ” ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿ ಹೇಳಿದರು.
ಅಲ್ಲದೆ, ದ್ವೇಷ ಅಭಿಯಾನವನ್ನು ಖಂಡಿಸಲು ಮತ್ತು ಸರ್ಕಾರದ ಧ್ವನಿಯಾಗಿದ್ದಕ್ಕೆ ಟ್ರೋಲಿಂಗ್ಗೆ ಗುರಿಯಾದ ವಿದೇಶಾಂಗ ಕಾರ್ಯದರ್ಶಿಯವರನ್ನು ಸಮರ್ಥಿಸಿಕೊಳ್ಳಲು ಕೂಡ ಪ್ರಧಾನ ಮಂತ್ರಿಗಳು ವಿಫಲರಾದರು ಎಂದು ಅವರು ಖೇದ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವ ಎಂಬುದು ಒಂದು ಏಕಮುಖ ಸಂಚಾರವಲ್ಲ. ಇಂತಹ ಮಾತುಗಾರಿಕೆ ಸಂಸತ್ತಿನಲ್ಲಿ ಈ ಕುರಿತು ವಿಷಯವಾರು ಚರ್ಚೆಗೆ ಬದಲಿಯಾಗಲು ಸಾಧ್ಯವಿಲ್ಲ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸರ್ಕಾರವು ಉತ್ತರದಾಯಿಯಾಗಿರಲೇಬೇಕಾಗಿದೆ ಎಂದು ಮುಂದುವರೆದು ಅವರು ಹೇಳಿದ್ದಾರೆ.
ಇದನ್ನೂ ನೋಡಿ: ವಕ್ಪ್ ತಿದ್ದುಪಡಿ ಮಸೂದೆ – 2025 | ಒಂದು ಅವಲೋಕನ Janashakthi Media