ಸಚಿವರಿಗೆ ಪುರುಸೋತ್ತಿಲ್ಲವೆ? ಸದನಕ್ಕೆ ಗೈರಾದ ಮಂತ್ರಿಗಳ ನಡೆಗೆ ಸ್ಪೀಕರ್ ಕಾಗೇರಿ ಗರಂ

ಬೆಳಗಾವಿ: ಸಚಿವರಿಗೆ ಒಬ್ಬರಿಗೂ ಪುರುಸೋತ್ತಿಲ್ಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು. ಗುರುವಾರ ಶೂನ್ಯ ವೇಳೆಯಲ್ಲಿ ಸದನದಲ್ಲಿ ಸಚಿವರು ಸಕ್ರಿಯವಾಗಿ ಭಾಗಿಯಾಗದಿದ್ದಕ್ಕೆ ಸ್ಪೀಕರ್ ಗರಂ ಆದ ಘಟನೆ ಇಂದು ನಡೆದಿದೆ.

ಶೂನ್ಯವೇಳೆ ಸಂದರ್ಭದಲ್ಲಿ ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ವಿಚಾರ ಪ್ರಸ್ತಾಪ ಮಾಡಲು ಮುಂದಾಗಿದ್ದರು. ಈ ವೇಳೆ ಇದಕ್ಕೆ ಉತ್ತರ ಕೊಡಬೇಕಾಗಿದ್ದ ಸಚಿವರು ಗೈರಾಗಿದ್ದರು. ಈ ವೇಳೆ ಸದನದಲ್ಲಿ ಗೈರಾದ ಸಚಿವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್, ‌ ಸರ್ಕಾರದಲ್ಲಿ ಯಾರು ಕೇಳಿಸಿಕೊಳ್ಳುತ್ತೀರಿ? ಒಬ್ಬರೂ ನನ್ನ ಕಡೆ ನೋಡ್ತಿಲ್ಲ ಎಂದು ಗರಂ ಆದರು‌.‌

 

ಸಚಿವರಾದ ಡಾ ಸಿಎನ್‌ ಅಶ್ವತ್ಥ ನಾರಾಯಣ, ಆರಗ ಜ್ಞಾನೇಂದ್ರ, ಡಾ ಕೆ ಸುಧಾಕರ್, ಶಿವರಾಮ್‌ ಹೆಬ್ಬಾರ್, ಎಸ್‌ ಅಂಗಾರ, ಶಶಿಕಲಾ ಜೊಲ್ಲೆ ಎಂದು ಹೆಸರು ಕೂಗಿದ ಸ್ಪೀಕರ್, ಇಷ್ಟು ಜನ ಇದ್ದೀರಿ ನಾನು ಕೇಳುವಾಗ ನನಗೆ ಉತ್ತರ ಕೊಡಿ ಎಂದರು. ಸರ್ಕಾರದ ಪರವಾಗಿ ನೀವು ಯಾರು ಗಮನಿಸುತ್ತಿದ್ದೀರಿ? ನಿಮಗೆ ಒಬ್ಬರಿಗೂ ಪುರುಸೋತ್ತಿಲ್ಲ. ಕೇಳ್ರೀ ಯಾರಾದರೂ ಒಬ್ಬರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

Donate Janashakthi Media

Leave a Reply

Your email address will not be published. Required fields are marked *