ಪಾಟ್ನಾ: ಬಿಹಾರದ ಲಖಿಸರಾಯಿ ಜಿಲ್ಲೆಯಲ್ಲಿ ಉಪ ಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾರ ಬೆಂಗಾವಲು ವಾಹನದ ಮೇಲೆ ಕೆಲವು ಅಪರಿಚಿತ ವ್ಯಕ್ತಿಗಳು, ಸಗಣಿ ಹಾಗೂ ಚಪ್ಪಲಿಗಳನ್ನು ತೂರಿರುವ ಘಟನೆ ನಡೆದಿದೆ. ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದ ದಿನವಾದ ಇಂದು ಇದರ ಬೆನ್ನಿಗೇ, ಈ ದಾಳಿಯ ಹಿಂದೆ ಆರ್ಜೆಡಿ ಇದೆ ಎಂದು ಬಿಜೆಪಿ ಆರೋಪಿಸಿದೆ. ಪಾಟ್ನಾ
ಇದನ್ನೂ ಓದಿ : ಬೆಂಗಳೂರು | ಗ್ಯಾರಂಟಿ ಯೋಜನೆಗಳು : ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು ಸಹಕಾರಿ – ಡಾ.ಶಾಲಿನಿ ರಜನೀಶ್
ಈ ಕುರಿತು ಪ್ರತಿಕ್ರಿಯಿಸಿದ ಲಖಿಸರಾಯಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಮೂರು ಬಾರಿಯ ಬಿಜೆಪಿ ಶಾಸಕರಾದ ವಿಜಯ್ ಕುಮಾರ್ ಸಿನ್ಹಾ, ಈ ದಾಳಿಯನ್ನುಆರ್ಜೆಡಿ ಪಕ್ಷದ ಬೆಂಬಲಿಗರು ನಡೆಸಿದ್ದು, ಅವರು ನನ್ನ ಖೋರಿಯಾರಿ ಗ್ರಾಮದ ಭೇಟಿಯನ್ನು ತಡೆಯಲು ಯತ್ನಿಸಿದರು ಎಂದು ಆರೋಪಿಸಿದ್ದಾರೆ. ಪಾಟ್ನಾ
ಇದನ್ನೂ ನೋಡಿ : ಧರ್ಮಸ್ಥಳದ ನಿಗೂಢಗಳು |ಮಹಿಳಾ ಆಯೋಗ ಮತ್ತೆ ಎಂಟ್ರಿಎಸ್ಐಟಿ ವಿರುದ್ಧಅಸಮಾಧಾನ | ಗುರುರಾಜ ದೇಸಾಯಿ Janashakthi Media
