ಸೌಜನ್ಯ ಪ್ರಕರಣ: ದೂರು ನೀಡಲು ಬಂದ ಮಹಿಳೆಗೆ ಎಸ್.ಐ.ಟಿ ಅಧಿಕಾರಿಗಳು ಬೆದರಿಕೆ

ಬೆಳ್ತಂಗಡಿ: ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಲು ಬಂದಿದ್ದ ಮಹಿಳೆಯ ದೂರು ಹೇಳಿಕೆ ಪಡೆಯುವ ಕಾರ್ಯವನ್ನು ಮಾಡದೆ, ಮಹಿಳೆಯನ್ನು ಎಸ್.ಐ.ಟಿ ಕಚೇರಿಯಲ್ಲಿ ಇದ್ದ ಇಬ್ಬರು ಅಧಿಕಾರಿಗಳು ಬೆದರಿಸಿರುವುದಾಗಿ ಸಾಮಾಜಿಕ ಜಾಲತಾಣದ ಮೂಲಕ ಒಡನಾಡಿ ಸಂಸ್ಥೆಯ ಸ್ಟಾನ್ಲಿ ಆರೋಪ ಮಾಡಿದ್ದಾರೆ.

ಮಂಡ್ಯ ಮೂಲದ ಮಹಿಳೆಯೊಬ್ಬರು ಸೌಜನ್ಯ ಪ್ರಕರಣದ ಬಗ್ಗೆ ಸಾಕ್ಷಿ ನುಡಿಯುವುದಾಗಿ ಹೇಳಿಕೆ ನೀಡಿದ್ದರು. ತಾನು ಸೌಜನ್ಯ ಅಪಹರಣ ವನ್ನು ನೋಡಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಇದಾದ ಬಳಿಕ ಈಕೆ ಎಸ್.ಐ.ಟಿ ಗೆ ಪತ್ರ ಬರೆದಿದ್ದರು. ಈ ಮಹಿಳೆ ತನ್ನ ಹೇಳಿಕೆಯನ್ನು ನೀಡಲು ಸೆ.19 ರಂದು ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಬಂದಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಖೈಬರ್ ಪಖ್ತುಂಖ್ವಾ ಮೇಲೆ ಪಾಕಿಸ್ತಾನದ ವಾಯುಪಡೆ ವೈಮಾನಿಕ ದಾಳಿ; 30 ಮಂದಿ ಸಾವು

ಸಾಕ್ಷಿ ಹೇಳಲು ಬಂದ ಮಹಿಳೆಯನ್ನು ಸುಮಾರು 7 ಗಂಟೆಗಳ ಕಾಲ ವಿಚಾರಣೆಯನ್ನು ನಡೆಸಿದ್ದಾರೆ. ಎಸ್.ಐ.ಟಿ ಅಧಿಕಾರಿಗಳು ತೋರಿಸಿದ ವರ್ತನೆ ಸರಿಯಾಗಿರಲಿಲ್ಲ, ಬೆದರಿಕೆ ಹಾಕುವ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಸ್ಟಾನ್ಲಿ ಆರೋಪಿಸಿದ್ದಾರೆ.

ಸಾಕ್ಷಿ ಹೇಳಲು ಬಂದ ಮಹಿಳೆಯನ್ನು ಬೆದರಿಸು ಪ್ರಯತ್ನ ನಡೆಸಿದ್ದಲ್ಲದೆ ಅವರು ಸಾಕ್ಷಿ ಹೇಳದಂತೆ ಮಾಡುವ ಪ್ರಯತ್ನ ನಡೆದಿದೆ ಎಂದು ಒಡನಾಡಿ ಸಂಸ್ಥೆಯ ಸ್ಟಾನ್ಲಿ ಆರೋಪಿಸಿದ್ದು, ಈ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ನೀಡಲು ಮುಂದಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ನೋಡಿ: ಧರ್ಮಸ್ಥಳ ಪ್ರಕರಣ | ಅಸಹಜ ಸಾವುಗಳಿಗೂ, ಭೂ ಕಬಳಿಕೆ, ಮೈಕ್ರೋಫೈನಾನ್ಸ್‌ಗೂ ಲಿಂಕ್‌ ಇದೆಯಾ?

Donate Janashakthi Media

Leave a Reply

Your email address will not be published. Required fields are marked *