ಕೆಎಸ್‌ಆರ್‌ಟಿಸಿ ಬಸ್ ಗೆ ಸಿಲುಕಿ 21 ಕುರಿಗಳು, ಒಬ್ಬ ಕುರಿಗಾಹಿ ಸಾವು

ಚಿತ್ರದುರ್ಗ: ಕುರಿಗಾಹಿ ಹಾಗೂ ಕುರಿಗಳ ಹಿಂಡಿನ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಹರಿದಿದ್ದು, ಸ್ಥಳದಲ್ಲೇ ಕುರಿಗಾಹಿ ಹಾಗೂ 21 ಕುರಿಗಳು ಸಾವನ್ನಪ್ಪಿರುವ ದಾರುಣ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಈ ದುರಂತ ಚಿತ್ರದುರ್ಗ ತಾಲೂಕಿನ ಈರಜ್ಜನಹಟ್ಟಿಯಲ್ಲಿ ಸಂಭವಿಸಿದೆ. ನೆಲಗೇತನಹಟ್ಟಿಯ ಕುರಿಗಾಹಿ ರಾಜಪ್ಪ (30) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಮತ್ತೋರ್ವ ಕುರಿಗಾಹಿ ತಿಪ್ಪಣ್ಣಗೆ ಗಂಭೀರವಾದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನು ಓದಿ : ಆರನೇ ಹಂತದಲ್ಲಿ ಹಕ್ಕು ಚಲಾಯಿಸಿದ ಘಟಾನುಘಟಿಗಳು

ಕುರಿ ಮೇಯಿಸಲು ನೇಲಗತಿನಹಟ್ಟಿ ಗ್ರಾಮದಿಂದ ಚನ್ನಗಿರಿಗೆ ತೆರಳಿದ್ದರು, ಈ ವೇಳೆ ಮಳೆ ಬಂದ ಕಾರಣ ಸ್ವ- ಗ್ರಾಮಕ್ಕೆ ಮರಳುತ್ತಿದ್ದಾಗ ಬಸ್ ಹರಿದಿದೆ. ಪರಿಣಾಮ 2 ಲಕ್ಷಕ್ಕೂ  ಹೆಚ್ಚು  ಮೌಲ್ಯದ  21 ಕುರಿಗಳ ಸಾವನ್ನಪ್ಪಿದ್ದು, ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನು ನೋಡಿ : ಬಿಜೆಪಿ ಸೋತರೆ, ಮೋದಿ ಸುಲಭವಾಗಿ ಅಧಿಕಾರ ಬಿಟ್ಟುಕೊಡುವರೇ? Janashakthi Media

Donate Janashakthi Media

Leave a Reply

Your email address will not be published. Required fields are marked *