ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ; ಬಾಲಮಂಜುನಾಥ ಸ್ವಾಮಿ ಬಂಧನ!

ತುಮಕೂರು :ಹಂಗರಹಳ್ಳಿ ಶ್ರೀವಿದ್ಯಾ ಚೌಡೇಶ್ವರಿ ಮಠದ  ಬಾಲಮಂಜುನಾಥ ಸ್ವಾಮಿ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪೋಕ್ಸೋ  ಪ್ರಕರಣ ದಾಖಲಿಸಲಾಗಿದೆ.

ಬಾಲ ಮಂಜುನಾಥ ಸ್ವಾಮಿ ಹಾಗೂ ಆತನ ಆಪ್ತ ಸಹಾಯಕ ಅಭಿಲಾಷ್‌ ನನ್ನು ಹುಲಿಯೂರು ದುರ್ಗ ಠಾಣೆಯ  ಪೊಲೀಸರು ಬಂಧಿಸಿದ್ದಾರೆ.

ಕಳೆದ ಫೆ. 10 ರಂದು ಸ್ವಾಮೀಜಿಯ ಆಪ್ತ ಸಹಾಯಕ ಅಭಿಲಾಷ್‌ ತುಮಕೂರು ಸೈಬರ್‌ ಠಾಣೆಯಲ್ಲಿ ತಾನೇ ದೂರು ದಾಖಲಿಸಿದ್ದ. ಚರ್ಮ ರೋಗಕ್ಕೆ ಚಿಕಿತ್ಸೆ ನೀಡುವ ನೆಪದಲ್ಲಿ ಸ್ವಾಮೀಜಿಯ ಬೆತ್ತಲೆ ವಿಡಿಯೋ ತೆಗೆದು ಬ್ಲಾಕ್‌ ಮೇಲ್‌ ಮಾಡಲಾಗುತ್ತಿದೆ ಎಂದು ಸ್ವಾಮೀಜಿ ಪರವಾಗಿ ಅಭಿಷೇಕ್‌ ಆರು ಮಂದಿಯ ವಿರುದ್ದ ದೂರು ದಾಖಲಿಸಿದ್ದ.

ಇದನ್ನು ಓದಿ : ರಾಜ್ಯಸಭೆಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ನಾಮನಿರ್ದೇಶನ

ಪ್ರಕರಣ ಪರಿಶೀಲನೆಗಾಗಿ ಪೊಲೀಸರು ಮಠಕ್ಕೆ ತೆರಳಿ ವಿಚಾರಣೆ ನಡೆಸಿದಾಗ ಸ್ವಾಮೀಜಿಯ ಕುಕೃತ್ಯ ಬಯಲಾಗಿತ್ತು. ಮಠದಲ್ಲಿಯೇ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಸ್ವಾಮೀಜಿ ಲೈಂಗಿಕ ಕಿರುಕುಳ ನೀಡಿರುವ ಸಂಗತಿ ಬೆಳಕಿಗೆ ಬಂದಿದೆ.

ಕೂಡಲೇ ಸ್ವಾಮೀಜಿ ಮತ್ತು ಅಭಿಷೇಕ್‌ನನ್ನು ವಶಕ್ಕೆ ಪಡೆದಿರುವ ಹುಲಿಯೂರು ದುರ್ಗ ಠಾಣೆಯ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.

ಇದನ್ನು ನೋಡಿ : ಪಾಕ್ ಘೋಷಣೆಯಷ್ಟೆ ಬಿಜೆಪಿಗೆ ಕೇಳಿಸಿತಾ? ಜನರ ಸಂಕಷ್ಟದ ನೋವು ಕೇಳಲೇ ಇಲ್ವಾ? ವಿಶ್ಲೇಷಣೆ – ಸಂಧ್ಯಾ ಸೊರಬ

Donate Janashakthi Media

Leave a Reply

Your email address will not be published. Required fields are marked *