ಬೆಂಗಳೂರು: ಕನ್ನಡ ರಾಜ್ಯೋತ್ಸವದ ಹಿನ್ನೆಲೆಯ, ಆಯ್ಕೆ ಸಮಿತಿಯನ್ನು ಪ್ರಶಸ್ತಿಯನ್ನು ನೀಡುವ ನಿಟ್ಟಿನಲ್ಲಿ ರಚನೆ ಮಾಡಲಾಗಿದೆ. ಆಯ್ಕೆ ಸಮಿತಿ ಅಧ್ಯಕ್ಷರು ಮತ್ತು 63 ಮಂದಿ ಸದಸ್ಯರನ್ನು ಒಳಗೊಂಡಿದೆ. ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡುವ ನಿಟ್ಟಿನಲ್ಲಿ ಆಯ್ಕೆ ಸಮಿತಿ ರಚನೆ ಮಾಡಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಆಯ್ಕೆ ಸಮಿತಿಗೆ ನೇಮಿಸಲಾಗಿದೆ.
ಅಧ್ಯಕ್ಷರಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ತಂಗಡಗಿ ಇದ್ದರೆ, ಸದಸ್ಯರಾಗಿ ಮಾರುತಿ ಬೌದ್ಧೆ, ಕೆ ಪಿ ಸುರೇಶ್, ಇ.ಟಿ ರತ್ನಾಕರ್ ತಳವಾರ, ದು ಸರಸ್ವತಿ, ಫಾದರ್ ಟಿಯೋಲ, ಡಾ. ಮಾಲತಿ ಪಟ್ಟಣಶೆಟ್ಟಿ, ಪ್ರೊ. ಜಿ ಅಬ್ದುಲ್ ಬಷೀರ್, ಚಂದ್ರಶೇಖರ ನಂಗ್ಲಿ, ಡಾ. ಎಂಕೆ ಮಾಸ್ಕೇರಿ ನಾಯಕ್, ಎಚ್ಕೆ ಸುಬ್ಬು ಹೊಲೇಯಾರ್, ಡಿ.ಬಿ ರಜಿಯಾ, ಸಬಿಹಾ ಭೂಮಿಗೌಡ, ಸುನಂದ ಜಯರಾಂ, ಪ್ರೊ. ಶಿವರಾಂ ಶೆಟ್ಟಿ ಸೇರಿದಂತೆ 63 ಮಂದಿಯ ಪಟ್ಟಿಯಲ್ಲಿದ್ದಾರೆ.
ಇದನ್ನೂ ಓದಿ: ವನ್ಯಜೀವಿಧಾಮದಲ್ಲಿ ಕಾನೂನು ಬಾಹಿರ ಚಟುವಟಿಕೆ: ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಕೆ
ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ನಾವು ಕಳೆದ ಬಾರಿ ಕೂಡ ಸಮಿತಿ ರಚನೆ ಮಾಡಿದ್ದೆವು. ಈ ಬಾರಿ ಎಲ್ಲಾ ಅಕಾಡೆಮಿ ಅಧ್ಯಕ್ಷರನ್ನು ಸಮಿತಿಯಲ್ಲಿ ಸೇರಿಸಿದ್ದೇವೆ, ಹೀಗಾಗಿ ಸಂಖ್ಯೆ ಜಾಸ್ತಿಯಾಗಿದೆ. ಸಾಹಿತ್ಯ ಕ್ಷೇತ್ರ,ನಾಟಕ ಕ್ಷೇತ್ರ, ಶಿಕ್ಷಣ ಕ್ಷೇತ್ರ ಎಲ್ಲದರಲ್ಲೂ ಒಬ್ಬರು ಇಬ್ಬರನ್ನು ಆಯ್ಕೆ ಮಾಡಿದ್ದೇವೆ. 15ನೇ ತಾರೀಕು ಮೊದಲ ಸಭೆ ಕರೆದಿದ್ದೇನೆ ಎಂದರು.
ಇನ್ನು ಇದೇ ಸಂದರ್ಭದಲ್ಲಿ ಜಾತಿಗಣತಿ ವಿಚಾರವಾಗಿ ಮಾತನಾಡಿ, ಸಮೀಕ್ಷೆ ವಿಸ್ತರಣೆ ಆದ ಮೇಲೆ ಚೆನ್ನಾಗಿ ನಡೆಯುತ್ತಿದೆ. ಬೆಂಗಳೂರಿನಲ್ಲಿ ಸ್ವಲ್ಪ ನಿಧಾನವಾಗಿದೆ. ನಿನ್ನೆಯಿಂದ ಬೆಂಗಳೂರಿನಲ್ಲೂ ಚೆನ್ನಾಗಿ ನಡಿತಾ ಇದೆ. ಗದಗ ಚಾಮರಾಜನಗರ ಕೊಪ್ಪಳ 100% ಆಗಿದೆ. ಬೆಂಗಳೂರಲ್ಲೂ ಆಗಬಹುದು ಎಂಬ ವಿಶ್ವಾಸದಲ್ಲಿ ಇದ್ದೇನೆ ಎಂದರು.
ಸಣ್ಣ ಪುಟ್ಟ ಘಟನೆಗಳು ನಡೆಯುತ್ತಿವೆ. ಅಂತ ಘಟನೆಗಳು ನಡೆಯಬಾರದು ಎಂಬುದು ನನ್ನ ವಿನಂತಿಯಾಗಿದೆ. ನೀವು ಏನು ಮಾಹಿತಿ ಕೊಡ್ತೀರಾ ಅದನ್ನ ಮಾತ್ರ ತೆಗೆದುಕೊಳ್ಳುತ್ತೇವೆ. ಯಾರೋ ಕೂಡಿ ಹಾಕಿದ್ದನ್ನ ಮಾದ್ಯಮದಲ್ಲಿ ನೋಡಿದ್ದೇನೆ. ಆ ರೀತಿ ಮಾಡೋದು ಒಳ್ಳೆ ಬೆಳವಣಿಗೆಯಲ್ಲ . ನಾವು ನಿಮ್ಮ ಸಲುವಾಗಿ ಮಾಡುತ್ತಿದ್ದೇವೆ.ಇದರಲ್ಲಿ ನಮ್ಮ ವೈಯಕ್ತಿಕ ಹಿತಾಸಕ್ತಿ ಇಲ್ಲ. ತುಳಿತಕ್ಕೊಳಗಾದವರಿಗೆ ಕಟ್ಟ ಕಡೆಯವರಿಗೆ ಸರ್ಕಾರದಿಂದ ಯೋಜನೆ ಕೊಡ್ತಾರೆ ಎಂದರು.
ಇದನ್ನೂ ನೋಡಿ: ನಮಗೆ 10 ಸಾವಿರ ಪಿಂಚಣಿ ನೀಡಿ – ವಿಕಲಚೇತನರ ಆಗ್ರಹ Janashakthi Media
