ಕೋವಿಡ್ನಿಂದ ಮೃತಪಟ್ಟವರ ಪ್ರತಿಯೊಬ್ಬರ ಸಾವಿಗೆ ಸರಕಾರ ಹೊಣೆ – ನಿರ್ದೇಶಕ ಗುರುಪ್ರಸಾದ್ ಆರೋಪ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್​ ಬೆಂಬಿಡದೆ ಕಾಡುತ್ತಿದೆ. ಹಲವಾರು ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳಿಗೂ ಕೊರೊನಾ ಸೋಂಕು ತಗುಲಿ ಆಸ್ಪತ್ರೆ ಸೇರಿದ್ದಾರೆ. ಇದೀಗ ನಟ, ನಿರ್ದೇಶಕ ಗುರುಪ್ರಸಾದ್​​​​ಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಹೀಗಾಗಿ ಗುರುಪ್ರಸಾದ್​ ಫೇಸ್​ ಬುಕ್ ಲೈವ್​ನಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕೊರೊನಾ ನಿರ್ವಹಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ಕೊರೊನಾದಿಂದ ಮೃತಪಟ್ಟಿರುವ ಪ್ರತಿಯೊಬ್ಬರ ಸಾವಿಗೂ ಸಿಎಂ ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ್ ಹಾಗೂ ವಿಜಯೇಂದ್ರ ಅವರೇ ನೇರ ಕಾರಣ. ಮೋದಿ ಪ್ರಾಮಾಣಿಕ, ಹಾಗಂತ ಬಿಜೆಪಿಯವರೆಲ್ಲಾ ಪ್ರಾಮಾಣಿಕರಲ್ಲ. ಜೆಡಿಎಸ್​ ಕಾಂಗ್ರೆಸ್​ನವರೂ ಪ್ರಾಮಾಣಿಕರಲ್ಲ ಅಂತ ಗುರುಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲ ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ಅದಕ್ಕೆ ನೇರ ಕಾರಣ ನೀವೇ. ಹೀಗಾಗಿ ಇದು ನನ್ನ ಡೆತ್ ನೋಟ್ ಅಂತ ಹೇಳಿದ್ದಾರೆ. ಕೊರೊನಾ ಕಂಟ್ರೋಲ್ ಮಾಡೋಕೆ ನಿಮ್ಗೆ ಒಂದೂವರೆ ವರ್ಷ ಬೇಕಾ..? ನಿಯತ್ತಾಗಿ ಕೆಲಸ ಮಾಡಿ, ಜನರ ಪ್ರಾಣ ಉಳಿಸಿ ಸ್ವಾಮಿ ಅಂತ ಗುರುಪ್ರಸಾದ್​ ಕೈಮುಗಿದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *