ಸಚಿವ ಸುಧಾಕರ ಹೇಳಿಕೆಗೆ ಖಂಡನೆ: ಸಂಪುಟದಿಂದ ವಜಾಗೆ ಬೌದ್ಧ ಬಿಕ್ಕು ಸಂಘ ಆಗ್ರಹ

ಬೀದರ: ಬೀದರ ನಗರದ ಮಯೂರ ಹೋಟೆಲಿನಲ್ಲಿ ವಿಶ್ವ ಬೌದ್ಧ ಭಿಕ್ಕು ಸಂಘದ ಪ್ರಧಾನ ಕಾರ್ಯದರ್ಶಿ ಭಂತೆ ಧಮ್ಮನಾಗ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಆರೋಗ್ಯ ಸಚಿವ   ಡಾ.ಕೆ.ಸುಧಾಕರ ರವರು ಬೌದ್ಧ ಧರ್ಮದ ಕುರಿತು ನೀಡಿರುವ ಹೇಳಿಕೆ ಬೇಜವಾಬ್ದಾರಿತನದಿಂದ ಕೂಡಿದೆ  ಇದನ್ನು ನಾವು ತೀವ್ರವಾಗಿ ಖಂಡಿಸುತೇವೆ ಎಂದಿದ್ದಾರೆ.

ಸಚಿವರು ಒಮ್ಮೆ ಬೌದ್ಧ ಧರ್ಮದ ಇತಿಹಾಸ ತಿಳಿದು ಮಾತಾನಾಡಲಿ ಅದನ್ನು ಬಿಟ್ಟು  ತಪ್ಪು ಸಂದೇಶ ನೀಡಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಹೇಳಿದ ಅವರು, ಮುಖ್ಯಮಂತ್ರಿಗಳು ಕೂಡಲೇ ಸಚಿವ ಸುಧಾಕರ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಆಗ್ರಹಿಸಿದರು.

ಈ ಸಂಧರ್ಭದಲ್ಲಿ  ಧಮ್ಮರತ್ನ, ಬಿ.ಎಸ್.ಐ. ಮುಖಂಡರು ನಿವೃತ್ತ ಪ್ರಾಂಶುಪಾಲ ವಿಠಲದಾಸ ಪ್ಯಾಗೆ, ನಿವೃತ್ತ ಬಿ.ಎಸ್.ಎನ್.ಎಲ್. ಅಧಿಕಾರಿ ಎಸ್.ಸುಂದರ್, ಆರ್.ಪಿ.ಐ. ಜಿಲ್ಲಾಧ್ಯಕ್ಷ ಮಹೇಶ ಗೋರನಾಳಕರ್, ಸಮಾಜ ಸೇವಕರಾದ  ಗಂಗಮ್ಮಾ ಫುಲೆ, ವಿಜಯದಶಮಿ ಗೂನ್ನಳ್ಳಿಕರ್, ವಿಧ್ಯಾವತಿ ಹಜ್ಜರ್ಗಿಕರ್, ಹಾಗೂ ಯುವ ಮುಖಂಡ ವಿಲಾಸಕುಮಾರ ಮದನಕರ್ ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *