ಅಸಂಖ್ಯಾತರನ್ನು ಓಲೈಸಲು ಸಬ್‌ ಕಾ ಸಾಥ್, ಸಬ್ ಕಾ ವಿಕಾಸ್ ಘೋಷವಾಕ್ಯವನ್ನು ನಿಲ್ಲಿಸಿ; ಸುವೇಂದು ಅಧಿಕಾರಿ ಆಗ್ರಹ

ದೆಹಲಿ: ಸುವೇಂದು ಅಧಿಕಾರಿ, ಬಿಜೆಪಿಗೆ‌ ಲೋಕಸಭಾ ಚುನಾವಣೆ ಹಾಗೂ ಉಪ ಚುನಾವಣೆಗಳಲ್ಲಿ ಮುಖಭಂಗ ಉಂಟಾಗಿರುವ ಹಿನ್ನೆಲೆಯಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದು,  ಇನ್ನು ಮುಂದೆ ಪಕ್ಷದಲ್ಲಿ ಅಲ್ಪಾ ಸಂಖ್ಯಾತ ಮೋರ್ಚಾದ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಘೋಷವಾಕ್ಯ

ನರೇಂದ್ರ ಮೋದಿ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿದ್ದಾಗ ಜಾತಿ, ಧರ್ಮ ಮೀರಿ ಎಲ್ಲರೂ ಒಗ್ಗೂಡಿ ಮತ ಹಾಕಲಿ ಎಂಬ ಕಾರಣಕ್ಕೆ ಸಬ್ ಕಾ ಸಾಥ್, ಸಬ್‌ ಕಾ ವಿಕಾಸ್ ಘೋಷಣೆ ಮಾಡಿದ್ದರು.

ಇದನ್ನು ಓದಿ : ಮನೀಶ್ ಸಿಸೋಡಿಯಾ ಜಾಮೀನು ಅರ್ಜಿಯ ವಿಚಾರಣೆ : ಸಿಬಿಐ, ಇಡಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ

ಅಸಂಖ್ಯಾತರನ್ನು ಓಲೈಸಲು ಸಬ್‌ ಕಾ ಸಾಥ್, ಸಬ್ ಕಾ ವಿಕಾಸ್ ಘೋಷವಾಕ್ಯವನ್ನು ನಿಲ್ಲಿಸಿ ಎಂದು ಪಶ್ಚಿಮ ಬಂಗಾಳದ ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ಶಾಸಕ ಸುವೇಂದು ಅಧಿಕಾರಿ ಹೈಕಮಾಂಡ್ ಅನ್ನು ಆಗ್ರಹಿಸಿದ್ದಾರೆ.

ಕೋಲ್ಕತ್ತಾದಲ್ಲಿ ನಡೆದ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಯನ್ನು ತೆಗೆದುಹಾಕಿ ಜೋ ಹಮಾರಾ ಸಾಥ್, ಹಮ್ ಉವ್ರ ಸಾಥ್ (ಯಾರೂ ನಮ್ಮ ಜೊತೆಗಿದ್ದಾರೆ, ನಾವು ಅವರ ಜೊತೆಗಿದ್ದೇವು) ಎಂದು ಬದಲಿಸಬೇಕು ಎಂದಿದ್ದಾರೆ.

ಇದನ್ನು ನೋಡಿ : ನೀಟ್‌ ಪರೀಕ್ಷೆ ಅಕ್ರಮ : 24 ಲಕ್ಷ ಮಕ್ಕಳ ಭವಿಷ್ಯ ಕಸಿದುಕೊಂಡ ಕೇಂದ್ರ ಸರ್ಕಾರ Janashakthi Media

Donate Janashakthi Media

Leave a Reply

Your email address will not be published. Required fields are marked *