ಬೆಂಗಳೂರು: ನಗರದಲ್ಲಿ ಇ ಮೊಬಿಲಿಟಿ ಜಾಲದಲ್ಲಿ ಸುರಕ್ಷತಾ ಲೋಪಗಳು ಹಾಗೂ ಕಳಪೆ ನಿರ್ವಹಣೆಗಳನ್ನು ಉಲ್ಲೇಖಿಸಿ ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ ಮಾದರಿಯಲ್ಲಿ ವಿದ್ಯುತ್ ಬಸ್ಗಳನ್ನು ಓಡಿಸುವ ಕಂಪನಿಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸುವಂತೆ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್ ಡಿ ಕುಮಾರಸ್ವಾಮಿ ರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ ಬರೆದು ಒತ್ತಾಯಿಸಿದ್ದಾರೆ. ಕಂಪನಿ
ಇವಿ ಬಸ್ ಗಳಿಂದ ರಾಜ್ಯ ಸಾರಿಗೆ ಸಂಸ್ಥೆಗೆ ಕೆಟ್ಟ ಹೆಸರು:
ವಿಧಾನಸೌಧದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರಿಕಾಗೋಷ್ಠಿ ನಡೆಸಿ ಅನೇಕ ವಿಚಾರಗಳನ್ನು ತಿಳಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ನಗರದಲ್ಲಿ ಎಲೆಕ್ಟ್ರಿಲ್ ಬಸ್ ಸಂಚಾರ ಹೆಚ್ಚಾಗ್ತಿದೆ. ಪರಿಸಲ ಮಾಲಿನ್ಯ ತಡೆಯಲು ಇದರ ಬಳಕೆ ಹೆಚ್ಚು ಮಾಡಲಾಗ್ತಿದೆ. ಇದು ಒಂದರ್ಥದಲ್ಲಿ ಸ್ವಾಗತಾರ್ಹ ವಿಷಯವಾಗಿದೆ. ಆದರೆ ನಮಗೆ NDA ಸರ್ಕಾರ ಬಂದ ಮೇಲೆ GCC ಮಾಡೆಲ್ ನಲ್ಲಿ ಇ ಬಸ್ ಗಳನ್ನ ಪೂರೈಕೆ ಮಾಡಲಾಗ್ತಿದೆ. ಕಂಪನಿ
ಇದನ್ನೂ ಓದಿ: ನಿರಂಜನ ಮರು ಓದು ಮಾಲಿಕೆಯ ಪುಸ್ತಕಗಳ ಕಿರು ಪರಿಚಯ : ‘ಆಯ್ದ ಅಂಕಣ ಬರಹಗಳು’, ‘ಆಯ್ದ ಸಾಹಿತ್ಯಕ ಬರಹಗಳು’
ಸದ್ಯ 1750 ಬಸ್ ಗಳು ಸದ್ಯ ರಸ್ತೆಯಲ್ಲಿ ಒಡಾಡುತ್ತಿವೆ. ಆದರೆ ಈ ಬಸ್ ಗಳಲ್ಲಿ ತಾಂತ್ರಿಕ ವೈಫಲ್ಯ, ಬಸ್ ನಿರ್ವಹಣೆ, ಚಾಲಕರ ತರಬೇತಿ ಕೊರತೆ, ಅಪಘಾತದ ಹೆಚ್ಚಳ ಜಾಸ್ತಿ ಆಗ್ತಿದೆ. ಹೀಗಾಗಿ ಇವಿ ಬಸ್ ಗಳಿಂದ ರಾಜ್ಯ ಸಾರಿಗೆ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತಿದೆ. ಇದರಿಂದಾಗಿ ಇಲಾಖೆಗೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸುತ್ತಿದೆ. ಅಲ್ಲದೇ ಇವಿ ಬಸ್ ಚಾಲಕರೂ ಸಹ ಎಚ್ಚರಿಕೆಯಿಂದ ವಾಹನ ಚಲಾಯಿಸ ಬೇಕು ಎಂದು ಹೇಳಿದ್ದಾರೆ. ಕಂಪನಿ
ಇವಿ ಬಸ್ಗಳಿಂದಲೇ ಹೆಚ್ಚು ಸಮಸ್ಯೆ:
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಎಂಟಿಸಿ MD ಶಿವುಕುಮಾರ್, PEM ಎನ್ನುವ ಕಾರ್ಯಕ್ರಮವನ್ನ ಕೇಂದ್ರ ಸರ್ಕಾರ ವ್ಯಾಪ್ತಿಯಲ್ಲಿ ಬರುತ್ತದೆ. ನಮ್ಮತ್ರಾ 1700 ಬಸ್ ಗಳು ನಮ್ಮಲ್ಲಿ ಇವೆ. ಹಿಂದೆ UPA ಸರ್ಕಾರ 80% ಸಬ್ಸಿಡಿ ಹಣವನ್ನು ಕೊಡ್ತಿದ್ರು ಅದ್ರೆ ಮಾಲಿನ್ಯ ಕಡಿಮೆ ಮಾಡಲು ಕೇಂದ್ರ ಸರ್ಕಾರ ಇವಿ ವಾಹನಗಳನ್ನು ಕೊಡ್ತಿದೆ.
GCC ಪ್ರಕಾರ ಬಸ್ ತಯಾರಿ ಮಾಡ್ತಾರೆ ಅದಕ್ಕೆ ಅವರೇ ನಿಭಾಯಿಸಬೇಕು ಎಂಬ ಬಗ್ಗೆ ನಿಯಮ ಇದೆ. ಇದಕ್ಕೆ ಡ್ರೈವರ್ ಹಾಗು ಮೆಂಟೈನ್ ಮಾಡೋದು ಅವರೇ. ಕಂಡಕ್ಟರ್ ಮಾತ್ರ ನಮ್ಮೋರು ಇದಾರೆ. ಇವಿ ಬಸ್ ಇಂದ ಸಾಕಷ್ಟು ತಾಂತ್ರಿಕ ಸಮಸ್ಯೆ ಬರ್ತಿದೆ. NTPC ಪ್ರಕಾರ ಅಪಘಾತಗಳು 2.09 ಇರಬೇಕು. ಕಳೆದ ಏಳು ತಿಂಗಳಲ್ಲಿ 700 ಬ್ಯಾಟರಿ ಇಂದ ದುರಂತ ಆಗಿವೆ.
ಇದರ ಜೊತೆಗೇ 9 ಕೋಟಿ ರೂಪಾಯಿ ದಂಡವನ್ನು ಹಾಕಲಾಗಿದೆ. ಈ ವರ್ಷ ಬ್ರೇಕ್ ಫೆಲ್ ಇಂದ 100ಕ್ಕೂ ಹೆಚ್ಚು ಪ್ರಕರಣಗಳು ಆಗಿವೆ. ಮೊಬೈಲ್ ಪ್ರಕರಣಗಳ ಇಂದಾಗಿ ಇದುವರೆಗೂ ಒಟ್ಟು 3 ಕೋಟಿ ರೂಪಾಯಿ ದಂಡವನ್ನ ಹಾಕಲಾಗಿದೆ. ಈ ವರ್ಷ 1700 ಬ್ಯಾಟರಿ ಇಂದ ಅನಾಹುತಗಳು ಆಗಿವ.
ಡೀಸೆಲ್ ಬಸ್ ಗಳಿಗಿಂತ ಇವಿ ಬಸ್ ಗಳ ಪ್ರಕರಣವೇ ಹೆಚ್ಚಾಗಿದೆ. ನಮ್ಮಲ್ಲಿ ಐದು ಸಾವಿರ ಬಸ್ ಗಳಿಗೆ ಅದ್ರೆ ಬ್ರೇಕ್ ಫೆಲ್ ಇಂದ ಬರಿ 100ಕ್ಕೂ ಹೆಚ್ಚು ಪ್ರಕರಣಗಳು ಆಗಿವೆ. ಅದರೆ ಖಾಸಗಿ ಅವರದ್ದು 1000 ಕ್ಕೂ ಹೆಚ್ಚು ಬಸ್ ಗಳಿವೆ ಅದರೆ ಅವರ ಪ್ರಕರಣಗಳು 1300 ಪ್ರಕರಣಗಳಿವೆ ಎಂದು ಹೇಳಿದರು.
ವೈಜ್ಞಾನಿಕವಾಗಿ ಸಾರಿಗೆ ದರ ನಿಗದಿ:
ಸರ್ಕಾರಿ ಬಸ್ ದರಗಳ ಏರಿಕೆಯನ್ನು ಸರಿಯಾದ ಕ್ರಮದಲ್ಲಿ ಮಾಡಲು ಸರ್ಕಾರ ಇದೀಗ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಹೀಗಾಗಿ ಸಾರಿಗೆ ದರ ನಿಯಂತ್ರಣ ಸಮಿತಿಯನ್ನು ರಚಿಸಿ ಅಧಿಕೃತವಾಗಿ ಸೋಮವಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
ವೈಜ್ಞಾನಿಕ ಆಧಾರದ ಮೇಲೆ ಟಿಕೆಟ್ ಬೆಲೆ ಹೆಚ್ಚಳ ಹಾಗೂ ಕಡಿಮೆ ಮಾಡಲು ಈ ಸಮಿತಿ ರಚಿಸಿದೆ. ಹೀಗಾಗಿ ಇನ್ಮುಂದೆ ಯಾರೋ ಒಬ್ಬರ ಒಳಿತಿಗಾಗಿ ಬಸ್ ದರ ಹೆಚ್ಚಳ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಕರ್ನಾಟಕ ಮೋಟಾರು ವಾಹನ ನಿಯಮಗಳು 1989 ರಲ್ಲಿ ತಿದ್ದುಪಡಿ ಮಾಡಲಾಗಿದೆ.
ಇದನ್ನೂ ನೋಡಿ: ದ್ವೇಷ ಭಾಷಣ| ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದೂರು ದಾಖಲು Janashakthi Media
