ಮೈಸೂರು : ಖ್ಯಾತ ಇತಿಹಾಸಕಾರ ಮತ್ತು ಹಿರಿಯ ಪತ್ರಕರ್ತ ಈಚನೂರು ಕುಮಾರ್ ನಿಧನ

ಮೈಸೂರು: ಮೈಸೂರಿನ ಖ್ಯಾತ ಇತಿಹಾಸಕಾರ ಮತ್ತು ಹಿರಿಯ ಪತ್ರಕರ್ತಈಚನೂರು ಕುಮಾರ್, ಇಂದು ಬೆಳಗ್ಗೆ 11.30ಕ್ಕೆ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ತಮ್ಮ ಇಬ್ಬರು ಮಕ್ಕಳು ಅಕ್ಷರಾ ಹಾಗೂ ಪತ್ರಕರ್ತ ಅಜಿತ್ ರನ್ನು ಅಗಲಿದ್ದಾರೆ. ಕಳೆದ ಒಂದೆರೆಡು ವರ್ಷಗಳಿಂದ ತೀವ್ರ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಕುಮಾರ್, ಇಂದು ನಿಧನರಾಗಿದ್ದಾರೆ.

ಇದನ್ನೂ ಓದಿ: ನಿರಂತರ ಮಳೆಗೆ ಕೊಡಗು ತತ್ತರ ; ವಿದ್ಯುತ್‌ ಸಂಪರ್ಕ ಸಂಪೂರ್ಣ ಕಡಿತ

ಹಿರಿಯ ಪತ್ರಕರ್ತರಾದ ಈಚನೂರು ಕುಮಾರ್ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ ) ಸಂತಾಪ ವ್ಯಕ್ತಪಡಿಸಿದೆ. ಮೈಸೂರು ರಾಜ್ಯದ ಕಥೆಗಳು, ಅರಮನೆ, ರಾಜವಂಶಸ್ಥರ ಬಗ್ಗೆ ಬಹಳ ಸೊಗಸಾಗಿ ವಿವರಿಸುತ್ತಿದ್ದ ಅವರು, ಬಹಳ ಆತ್ಮೀಯತೆಯಿಂದಲೇ ಎಲ್ಲರನ್ನು ಮಾತನಾಡಿಸುತ್ತಿದ್ದರು. ಮೈಸೂರು ಸಂಸ್ಥಾನ ಹುಟ್ಟಿದ್ದು ಹೇಗೆ ಎಂಬುದನ್ನು ಇವರು ಸವಿವರವಾಗಿ ತಿಳಿಸಿದ್ದು, ಎಲ್ಲರಿಗೂ ಕೂಡ ಅರ್ಥವಾಗುವ ರೀತಿಯಲ್ಲಿ ಮಾಹಿತಿ ನೀಡುತ್ತಿದ್ದರು.

ಈಚನೂರು ಕುಮಾರ್‌ ನಿಧನಕ್ಕೆ ಪತ್ರಕರ್ತರು ಸೇರಿದಂತೆ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದು, ಕಂಬನಿ ಮಿಡಿದಿದ್ದಾರೆ.

ಇದನ್ನೂ ನೋಡಿ: ಎರಡು ಸಾವಿರ ಹುದ್ದೆಗೆ ಮೂವತ್ತು ಸಾವಿರ ಅರ್ಜಿ – ನೋಡಿ ಮೋದಿ ಸಾಹೇಬ್ರೆ ಎಷ್ಟುಂದು ನಿರುದ್ಯೋಗಿಗಳುJanashakthi Media

Donate Janashakthi Media

Leave a Reply

Your email address will not be published. Required fields are marked *