ಪ್ರಧಾನಿಗೆ ರಾಹುಲ್‌ ತಿರುಗೇಟು:ಮಣಿಪುರದಲ್ಲಿ ಭಾರತದ ಕಲ್ಪನೆ ಪುನರ್‌ ನಿರ್ಮಾಣ 

ನವದೆಹಲಿ: ಇಂಡಿಯಾ ನೇತತ್ವದಲ್ಲಿ ವಿರೋಧ ಪಕ್ಷಗಳು ಮಣಿಪುರದಲ್ಲಿ ಭಾರತದ ಕಲ್ಪನೆ ಪುನರ್‌ ನಿರ್ಮಿಸಲಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಟ್ವೀಟ್‌ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು , ನಮ್ಮನ್ನು ಏನೂ ಬೇಕಾದರೂ ಕರೆಯಿರಿ ಆದರೆ ನಾವು ಇಂಡಿಯಾ ಆಗಿದ್ದು ಮಣಿಪುರದಲ್ಲಿ ಭಾರತದ ಕಲ್ಪನೆಯನ್ನು ಪುನರ್‌ ನಿರ್ಮಿಸಲಿದ್ದೇವೆ ಎಂದು ಹೇಳಿದ್ದಾರೆ.

ಮಣಿಪುರದಲ್ಲಿ ಪರಿಸ್ಥಿತಿ ಸುಧಾರಿಸಲು ನಾವು ನೆರವಾಗಲಿದ್ದೇವೆ.ಪ್ರತಿಯೊಬ್ಬ ಮಹಿಳೆ ಮತ್ತು ಮಗುವಿನ ಕಣ್ಣೀರು ಒರೆಸುತ್ತೇವೆ.ನಾವು ಮಣಿಪುರದಲ್ಲಿ ಪ್ರೀತಿ ಮತ್ತು ಶಾಂತಿಯನ್ನು ಮರಳಿ ತರಲಿದ್ದೇವೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ:ಇಂಟರ್‌ನೆಟ್ ನಿರ್ಬಂಧ: ಇರಾನ್ ಮೊದಲು, ಭಾರತಕ್ಕೆ 2ನೇ ಸ್ಥಾನ!

ಈ ಮೊದಲು ಭಾರತೀಯ ರಾಷ್ಟ್ರೀಯ ಅಭಿವೃದ್ಧಿಶೀಲ ಎಲ್ಲರನ್ನೂ ಒಳಗೊಳ್ಳವ ಮೈತ್ರಿಕೂಟ (INDIA)ವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರಧಾನಿ ಎದುರಾಗಿದ್ದು,ಈಸ್ಟ್‌ ಇಂಡಿಯಾ ಕಂಪನಿ, ಇಂಡಿಯಾನ್‌ ಮುಜಾಹಿದ್ದೀನ್‌ದಲ್ಲೂ ಇಂಡಿಯಾ ಅಡಗಿತ್ತು.ಹಾಗಾಗಿ ದೇಶದ ಹೆಸರನ್ನು ಬಳಸಿ ಜನರನ್ನು ದಾರಿ ತಪ್ಪಿಸಲಾಗದು ಎಂದು ಟ್ವೀಟ್‌ ಮೂಲಕ ಟೀಕಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *