ನೆಲಮಂಗಲ: ಪುನೀತ್ ಕೆರೆಹಳ್ಳಿಯನ್ನು ಅಕ್ರಮ ಗೋ ಸಾಗಾಟ ಸೇರಿದಂತೆ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಹಲವು ಬಾರಿ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡ ಹಿನ್ನೆಲೆಯಲ್ಲಿ ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ವಿಚಾರಣೆ
ಅಕ್ರಮ ಬಾಂಗ್ಲಾದೇಶಿ ವಲಸಿಗರು ವಾಸಿಸುತ್ತಿದ್ದಾರೆ ಆರೋಪಿಸಿ ಪುನೀತ್ ಕೆರೆಹಳ್ಳಿ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಾಪುರಕ್ಕೆ ತೆರಳಿದ್ದಲ್ಲದೆ ಈ ಬಗ್ಗೆ ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದ.
ಇದನ್ನೂ ಓದಿ: ದೇವನಹಳ್ಳಿ | ರ್ಯಾಗ್ ಮಾಡಿದ ಆರೋಪದ ಹಿನ್ನಲೇ 23 ವಿದ್ಯಾರ್ಥಿಗಳ ಬಂಧನ
ದೂರು ನೀಡಿ ಠಾಣೆಯಿಂದ ಹೊರಬರುತ್ತಿದ್ದ ವೇಳೆ ಬಾಗಲಗುಂಟೆ ಪೊಲೀಸ್ ಠಾಣೆಯ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಇದಕ್ಕೂ ಮುನ್ನ ವಲಸಿಗರಿದ್ದ ಶೆಡ್ಗಳಿಗೆ ತೆರಳಿ ಬಾಂಗ್ಲಾದೇಶಿಗರೆಂದು ದಾಖಲೆ ತೋರಿಸುವಂತೆ ಒತ್ತಾಯಿಸಿ ಗಲಾಟೆ ನಡೆಸಿದ ಆರೋಪದಲ್ಲಿ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ ಬಳಿಕ ಆತನ ಬಂಧನ ಮತ್ತು ಬಿಡುಗಡೆಯಾಗಿತ್ತು.
ಇದನ್ನೂ ನೋಡಿ: ನಾಲ್ಕು ಕಾರ್ಮಿಕ ಸಂಹಿತೆಗಳ ಹಿಂದಿನ ವಂಚನೆ ಏನು ? ವಿಶ್ಲೇಷಣೆ – ಕೆ. ಮಹಾಂತೇಶ್ Janashakthi Media
