ಸಿಂದನೂರು : ಖಾಸಗಿ ಶಾಲೆಗಳ 5 ವಾಹನಗಳನ್ನು ರಸ್ತೆೆ ಸುರಕ್ಷಿತಾ ನಿಯಮಗಳನ್ನು ಪಾಲಿಸದೆ ಸಾರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆೆ ಪಡೆದುಕೊಂಡಿದ್ದಾಾರೆ.
ನಗರದ ಅಕ್ಷರ ಸ್ಮಾಾರ್ಟ್ ಶಾಲೆಯ 2 ವಾಹನ, ಅರಗಿನಮರದ ವೆಂಕಟೇಶ್ವರ ಶಾಲೆಯ 2 ವಾಹನ, ಇಂದಿರಾಪ್ರಿಿಯದರ್ಶಿನಿಯ ಶಾಲೆಯ 1 ವಾಹನಗಳನ್ನು ಜಪ್ತಿಿ ಮಾಡಲಾಗಿದೆ. ಎಂಡಿಎನ್ ಪ್ಯೂೂಚರ್ ಶಾಲೆ, ಅರಗಿನಮರದ ಜ್ಞಾಾನಜ್ಯೋೋತಿ ಸೇರಿದಂತೆ ವಿವಿಧ ಶಾಲೆಗಳ 9 ವಾಹನಗಳ ವಿರುದ್ಧ ದೂರು ದಾಖಲಿಸಿದ್ದಾಾರೆ.
ಇದನ್ನೂ ಓದಿ : ಬೆಂಗಳೂರು | ಮನರೇಗಾ ಹೆಸರು ಬದಲಿಸಿದ ಬಿಜೇಪಿಗರು ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡಬೇಡಿ – ಡಿ.ಕೆ. ಶಿವಕುಮಾರ್
ಚಾಲನಾ ಪರವಾನಿಗೆ, ಅಗ್ನಿಿಶಾಮಕ ನಂದಕ, ತುರ್ತು ಬಾಗಿಲು, ಪ್ಯಾಾನಿಕ್ ಬಟನ್, ಪ್ರಥಮ ಚಿಕಿತ್ಸಾಾ ಪೆಟ್ಟಿಿಗೆ, ಸಂಚರಿಸುವ ಮಕ್ಕಳ ವಿವರ, ಚಾಲಕರ ಸಮವಸ ಸೇರಿದಂತೆ ಇನ್ನಿಿತರ ನಿಯಮಗಳನ್ನು ಪಾಲಿಸದ ಶಾಲಾ ವಾಹನಗಳ ವಿರುದ್ಧ ಮಕ್ಕಳ ಹಿತರಕ್ಷಣೆಗಾಗಿ ಕಠಿಣಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ. ನೊಂದಣಿ ಪತ್ರ, ವಾಹನದ ವಿಮೆ, ಹೊಗೆ ಪ್ರಮಾಣ ಪತ್ರ, ವಾಹನ ಪರವಾನಿಗೆ ಕಡ್ಡಾಯ
ಈ ಬಗ್ಗೆೆ ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕ ರಾಕೇಶ ಎಂ. ಪತ್ರಿಿಕೆಯೊಂದಿಗೆ ಮಾತನಾಡಿ, ಜಂಟಿ ಆಯುಕ್ತರ ಸೂಚನೆ ಹಿನ್ನಲೆಯಲ್ಲಿ ಸಾರಿಗೆ ನಿಯಮ ಪಾಲಿಸದ ಸಿಂಧನೂರಿನ ವಿವಿಧ ಖಾಸಗಿ ಶಾಲಾ ವಾಹನಗಳ ತಪಾಸಣೆ ನಡೆಸಿ ಶಾಲಾ ಮುಖ್ಯಸ್ಥರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಶೀಘ್ರವೇ ನಿಯಮಾನುಸಾರ ಆಡಳಿತ ಮಂಡಳಿ ಕ್ರಮಕೈಗೊಳ್ಳಬೇಕು. ನಿರ್ಲಕ್ಷ್ಯ ತಾಳಿದರೆ ಇಲಾಖೆಯಿಂದ ಕಠಿಣ ಕ್ರಮಕೈಗೊಳ್ಳಲಾಗುವುದು ತಿಳಿಸಿದರು.
ಇದನ್ನೂ ನೋಡಿ : ಏನಿದು ದ್ವೇಷ ಅಪರಾಧಗಳ ಮಸೂದೆ? ದ್ವೇಷಾಪರಾಧಕ್ಕೆ ಶಿಕ್ಷೆಯೇನು? Janashakthi Media
