ಬಿಜೆಪಿಯಿಂದ ಮತ್ತೆ ಪುಲ್ವಾಮಾ, ಬಾಲಕೋಟ್ ರೀತಿಯ ದಾಳಿಗೆ ಸಿದ್ಧತೆ: ಪ್ರಶಾಂತ್ ಭೂಷಣ್

ಲೋಕಸಭಾ ಚುನಾವಣೆ ಗೆಲ್ಲಲು ಪುಲ್ವಾಮಾ-2, ಬಾಲಾಕೋಟ್-2‌ ಗೆ ಸಿದ್ಧತೆ ನಡೆಯುತ್ತಿದೆ ಎಂದು ಹಿರಿಯ ವಕೀಲ, ಹೋರಾಟಗಾರ ಪ್ರಶಾಂತ್‌ ಭೂಷಣ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವರು, ಕಳೆದ ಬಾರಿಯಂತೆ ಚುನಾವಣೆ ಗೆಲ್ಲಲು ಈ ಬಾರಿ ಬಿಜೆಪಿ ಪುಲ್ವಾಮಾ-2, ಬಾಲಾಕೋಟ್-2 ಗೆ ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ ಎಂದಿದ್ದಾರೆ.

ಚುನಾವಣೆ ಗೆಲ್ಲುವುದಕ್ಕೆ ಭಾರತೀಯ ಜನತಾ ಪಾರ್ಟಿ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಏನೂ ಬೇಕಾದರೂ ಮಾಡಲಿದ್ದಾರೆ. 2024 ರ ಲೋಕಸಭಾ ಚುನಾವಣೆಯನ್ನು ಬಿಜೆಪಿ ಸೋಲುತ್ತದೆ ಎನ್ನುವುದು ಬಿಜೆಪಿಯವರಿಗೆ ಸ್ಪಷ್ಟವಾಗಿದ್ದು, ಅದಕ್ಕಾಗಿ ಪುಲ್ವಾಮಾ-2 ಮತ್ತು ಬಾಲಾಕೋರ್ಟ್-2‌ ನಡೆಯಲಿದೆ. ಸಿಕ್ಕ ಮೂಲಗಳ ಪ್ರಕಾರ, ಬಿಜೆಪಿ ಸರ್ಕಾರ 2024 ರ ಲೋಕಸಭಾ ಚುನಾವಣೆಯನ್ನು ಗೆಲ್ಲಲು ರಾಮಮಂದಿರದ ಮೇಲೆ ದಾಳಿ ಪುಲ್ವಾಮಾದಂತಹ ದಾಳಿ ನಡೆಸಬಹುದು ಎಂದಿದ್ದಾರೆ.

ಪುಲ್ವಮಾ-2 ರಾಮಮಂದಿರದ ಮೇಲೆ ಬಾಲಾಕೋಟ್-2‌ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಯಲಿದೆ. ಈಗಾಗಲೇ ಜೈಶೇ ಮಹ್ಮದ್‌ ಮತ್ತುಅಲ್ಖೈದಾ ದಾಳಿ ನಡೆಸಲಿದೆ. ಭದ್ರತೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ ಎಂದು ಬಿಜೆಪಿಯ ಮೀಡಿಯಾ ಆರ್ಗನೈಜಷನ್‌ ಮಾಧ್ಯಮಗಳಲ್ಲಿ ವರದಿಯಾಗಿದೆ.

ಪುಲ್ವಾಮಾ ದಾಳಿ ಎಲ್ಲಾಯಿತು ಬಾಂಬ್‌ ಎಲ್ಲಿ ಬಿತ್ತು ಎನ್ನುವುದಿನ್ನೂಗೊತ್ತೇ ಆಗಿಲ್ಲ. ಈ ಬಾರಿ ಬಾಂಬ್‌ ದಾಳಿ ಅಲ್ಲ ಗ್ರೌಂಡ್‌ ದಾಳಿ ಆಗಲಿದೆ. ಇಡೀ ದೇಶವನ್ನು ಮಣಿಪುರ ಮಾಡುವ ಹುನ್ನಾರ ನಡೆಯುತ್ತಿದೆ. ಅಬ್ಕೀ ಬಾರ್‌ ಗ್ರೌಂಡ್‌ ಟ್ರೂಪ್ಸ್‌ ಕಳಿಸಲಾಗುತ್ತಿದೆ. ಅದು ಜನರಿಗೆ ತೋರಿಸೋಕೆ ಮಾತ್ರವೇ ಕಳಿಸಲಾಗುತ್ತಿದೆ. ಸತ್ಯಪಾಲ್‌ ಮಲ್ಲಿಕ್‌ ಅವರು, ಬಿಜೆಪಿಯವರು ಚುನಾವಣೆ ಗೆಲ್ಲಲು ಏನೂ ಬೇಕಾದರೂ ಮಾಡುತ್ತಾರೆ ಅಂತ ಸಂದರ್ಶನವೊಂದರಲ್ಲಿ ಹೇಳಿದ್ದು ನಿಜ. ಪ್ರಧಾನ ಮಂತ್ರಿಯಾದವನು 3 ತಿಂಗಳಾದರೂ ಮಣಿಪುರದ ಬಗ್ಗೆಮಾತನಾಡುವುದಿಲ್ಲ. ಪುಲ್ವಾಮಾ ದಾಳಿಯಾಗಿ 3 ಗಂಟೆಯಾದರೂ ಯಾವುದೇ ಹೇಳಿಕೆ ನೀಡುವುದಿಲ್ಲ. 40 ಯುವ ಸೈನಿಕ ಹುತಾತ್ಮರಾದ ನಂತರ ಬಿಜೆಪಿಯ ಆಂಕರ್‌ಗಳು ಅರಚಲು ಆರಂಭಿಸದರು.

ದಾಳಿ ಮಾಡಿದ್ರೋ ಅಥವಾ ಮಾಡಿಸಲಾಯಿತೋ ಏನು ಅನ್ನೋದನ್ನ ನಾವು ತಿಳ್ಕೋಬೇಕು. ಇವರಿಗೆ ಇಡೀ ದೇಶವನ್ನು ಮಣಿಪುರ ಮಾಡಿದರೆ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯ ಅನ್ನೋದನ್ನ ಬಿಜೆಪಿಯವರು ತಿಳಿದಿದ್ದಾರೆ. ನಾವು ಅದನ್ನು ಸೋಲಿಸಬೇಕು ಎಂದು ಪ್ರಶಾಂತ್ ಭೂಷಣ್ ವಿಡಿಯೋದಲ್ಲಿ ಹೇಳಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *