ಸಕಲೇಶಪುರ| ದಲಿತ ಕುಟುಂಬ ಬೆಳೆದಿದ್ದ ಕಾಫಿ, ಬಾಳೆ ಗಿಡಗಳನ್ನು ನಾಶ ಮಾಡಿ ಜಾತಿ ನಿಂದನೆ; ಆರೋಪ

ಸಕಲೇಶಪುರ: ದಲಿತ ಕುಟುಂಬ ಬೆಳೆದಿದ್ದ ಕಾಫಿ ಮತ್ತು ಬಾಳೆ ಗಿಡವನ್ನು ನಾಶ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 7 ಸವರ್ಣೀಯರ ವಿರುದ್ಧ ಯಸಳೂರು ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ.

ಶಾಸಕ ಮಂಜು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸಿ. ಈ ಜಾಗ ದಲಿತ ಕುಟುಂಬದ್ದು ಎಂದು ತೀರ್ಮಾನಿಸಿದ್ದರು. ಆದರೂ ಸವರ್ಣೀಯರು ಅಭಿಜಿತ್ ಬೆಳದಿದ್ದ ಕಾಫಿ ಹಾಗೂ ಬಾಳೆಗಿಡಗಳನ್ನು ಉದ್ದೇಶಪೂರ್ವಕವಾಗಿ ನಾಶಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣ ಹಿನ್ನೆಲೆ : ವನಗೂರು ಎಸ್ಟೇಟ್ ಸರ್ವೇ ನಂ.2ರಲ್ಲಿ ವೆಂಕಟೇಶ್ ಬಿನ್ ನಿಂಗಯ್ಯ ಎಂಬವರಿಗೆ 4 ಎಕರೆ ಜಮೀನು ಸರಕಾರದಿಂದ ಮಂಜೂರಾಗಿತ್ತು. ವೆಂಕಟೇಶ್ ಅವರ ಮಗ ಅಭಿಜಿತ್ ಮನೆ ಎದುರು ಇದ್ದ ಖಾಲಿ ಜಾಗವನ್ನು ಉಳುಮೆ ಮಾಡಿ ಕಾಫಿ ಗಿಡ ಮತ್ತು ಬಾಳೆ ಗಿಡಗಳನ್ನು ಹಾಕಿದ್ದರು. ಆದರೆ, ಮಕ್ಕಳು ಆಟ ಆಡಲು ಈ ಜಾಗವನ್ನು ಮೀಸಲಿಡಲು ತೀರ್ಮಾನ ಮಾಡಲಾಗಿತ್ತು ಎಂದು ಗ್ರಾಮಸ್ಥರ ವಾದವಾಗಿದೆ.

ಇದನ್ನೂ ಓದಿ:ಕೋಲಾರ| ದಲಿತ ವ್ಯಕ್ತಿಯ ಮೇಲೆ ಸವರ್ಣೀಯರಿಂದ ಮಾರಣಾಂತಿಕ ಹಲ್ಲೆ; ಅವಾಚ್ಯ ಶಬ್ದಗಳಿಂದ ನಿಂದನೆ

ಅಭಿಜಿತ್ ಇತ್ತೀಚೆಗೆ ತಹಶೀಲ್ದಾರ್, ಆರ್.ಐ ಮತ್ತು ಗ್ರಾಮ ಲೆಕ್ಕಾಧಿಕಾರಿಯನ್ನು ಸಂಪರ್ಕಿಸಿ ನಾಲ್ಕು ಎಕರೆ ಜಾಗವನ್ನು ಗುರುತಿಸಿ ಕೊಡುವಂತೆ ಮನವಿ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಆರ್ ಐ, ವಿಎ. ಮತ್ತು ಶಾಸಕ ಸಿಮೆಂಟ್ ಮಂಜು ಸ್ಥಳ ಪರಿಶೀಲನೆ ಮಾಡಿದ್ದರು. ಆದರೆ ಕೆಲವು ಗ್ರಾಮಸ್ಥರು ಅಧಿಕಾರಿಗಳನ್ನು ಲೆಕ್ಕಿಸದೆ ಅಭಿಜಿತ್ ಹಾಕಿರುವ ಕಾಫಿ ಗಿಡ ಮತ್ತು ಬಾಳೆ ಗಿಡಗಳನ್ನು ಕಡಿದು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಯಸಳೂರು ಪೊಲೀಸ್ ಠಾಣೆ ಯಲ್ಲಿ 7 ಜನರ ಮೇಲೆ ಅಟ್ರಾಸಿಟಿ ಕೇಸ್ ದಾಖಲಾಗಿದೆ.

ವಿಡಿಯೋ ನೋಡಿ:ಮಹಿಳಾ ಮೀಸಲಾತಿ ಲೆಕ್ಕಾಚಾರ ಏನು? ಎತ್ತ? ಕೆ.ಎಸ್.‌ ವಿಮಲಾ ಜೊತೆ ಮಾತುಕತೆ #womensreservationbill

Donate Janashakthi Media

Leave a Reply

Your email address will not be published. Required fields are marked *