ಬಾಲಕನನ್ನು ಬಲಿ ಪಡೆದ ಮೊಸಳೆ – ರೊಚ್ಚಿಗೆದ್ದು ಮೊಸಳೆಯನ್ನು ಕೊಂದ ಜನ

ಪಾಟ್ನಾ: 14 ವರ್ಷದ ಬಾಲಕನನ್ನು ಕೊಂದು ತಿಂದ ಮೊಸಳೆಯನ್ನು, ನದಿ ದಡದಲ್ಲಿದ್ದ ಜನ ದೊಣ್ಣೆ, ರಾಡ್‍ನಿಂದ ಹೊಡೆದು ಹತ್ಯೆ ಮಾಡಿದ ಘಟನೆ ವೈಶಾಲಿ ಜಿಲ್ಲೆಯ ರಾಘೋಪುರ ದಿಯಾರಾ ದ್ವೀಪದ ಖಾಲ್ಸಾ ಘಾಟ್‌ನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ:ರೈಲು ದುರಂತ ಬೆನ್ನಲ್ಲೇ ಬಿಹಾರದಲ್ಲಿ ಸೇತುವೆ ಕುಸಿತ; 1,700 ಕೋಟಿ ರೂ. ಗಂಗಾ ನದಿ ಪಾಲು

ವೈಶಾಲಿ ಜಿಲ್ಲೆಯ ರಾಘೋಪುರ ದಿಯಾರಾದ 5 ನೇ ತರಗತಿ ವಿದ್ಯಾರ್ಥಿ ಅಂಕಿತ್ ಕುಮಾರ್ ಮೊಸಳೆ ಬಾಯಿಗೆ ಆಹಾರವಾದ ಬಾಲಕ ಎಂದು ಗುರುತಿಸಲಾಗಿದೆ. ಮೃತನ ಪೋಷಕರು ಮಗನಿಗಾಗಿ ಬೈಕ್ ಖರೀದಿಸಿದ್ದರು. ಅದೇ ಖುಷಿಯಲ್ಲಿ ಅಂಕಿತ್ ಬೈಕ್ ಪೂಜೆ ಮಾಡಲು ಗಂಗಾ ನದಿಗೆ ತೆರಳಿ ಗಂಗಾಜಲ ತರಲು ನೀರಿಗಿಳಿದಿದ್ದಾಗ ಮೊಸಳೆ ಆತನನ್ನು ತಿಂದು ಹಾಕಿದೆ.

ಒಂದು ಗಂಟೆಯ ನಂತರ ಗಂಗಾ ನದಿಯಿಂದ ಅಂಕಿತ್ ಅವರ ಅವಶೇಷಗಳನ್ನು ಹೊರತೆಗೆಯಲು ಕುಟುಂಬವು ಯಶಸ್ವಿಯಾಗುವ ಹೊತ್ತಿಗೆ, ನದಿಯ ದಡದಲ್ಲಿ ಜನಸಮೂಹ ಜಮಾಯಿಸಿತ್ತು. ನಂತರ ಕುಟುಂಬ ಮತ್ತು ಜನಸಮೂಹವು ಮೊಸಳೆಯನ್ನು ನೀರಿನಿಂದ ಹೊರಕ್ಕೆ ಎಳೆದು ಮನಬಂದಂತೆ ಬಡಿದು ಕೊಂದಿದ್ದಾರೆ.

ಅಂಕಿತ್‍ನ ತಾತ ಸಕಲದೀಪ್ ದಾಸ್ ಅವರು, ನಾವು ಹೊಸ ಮೋಟಾರ್‍ಸೈಕಲ್ ಖರೀದಿಸಿದ್ದೇವೆ ಮತ್ತು ಸ್ನಾನ ಮಾಡಲು ಮತ್ತು ಗಂಗಾಜಲವನ್ನು ಪೂಜೆಗೆಂದು ತರಲು ಗಂಗಾ ನದಿಗೆ ಹೋಗಿದ್ದೆವು. ಮೊಸಳೆಯು ಅವನನ್ನು ಹಿಡಿದು ನೀರಿನಲ್ಲಿ ಕೊಂದಿತು. ನಾವು ಅಂಕಿತ್‍ನ ಅವಶೇಷಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದೇವೆ.  ನಂತರ ಮೊಸಳೆಯನ್ನು ಹೊರತೆಗೆದು ಕೊಲ್ಲಲಾಯಿತು ಎಂದು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *