ಸುದ್ದಿವಾಹಿನಿಗಳಿಂದ ಮಾನಸಿಕ ಹಿಂಸೆಯಾಗಿದೆ: ಪವಿತ್ರಾ ಲೋಕೇಶ್ ಪೊಲೀಸ್‌ ಠಾಣೆಗೆ ದೂರು

ಮೈಸೂರು: ತೆಲುಗು ನಟ ನರೇಶ್ -ರಮ್ಯಾ ರಘುಪತಿ ನಡುವಣ ಕೌಟುಂಬಿಕ ಕಲಹ ಬೀದಿಗೆ ಬಂದಿದ್ದು, ಕನ್ನಡ ಮೂಲದ ಬಹುಭಾಷಾ ನಟಿ ಪವಿತ್ರಾ ಲೋಕೋಶ್ ಕಳೆದೊಂದು ತಿಂಗಳಿನಿಂದ ನರೇಶ್ ನೊಂದಿಗೆ ಸಂಬಂಧವಿದ್ದು ಮದುವೆಯಾಗಲು ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.

ಈ ಸುದ್ದಿ ದಿನಕ್ಕೊಂದು ಸರಣಿಯಂತೆ ಪ್ರಸಾರವಾಗುತ್ತಿದೆ. ಹೊಸ ಹೊಸ ಸುದ್ದಿಗಳು, ಗಾಳಿ ಸುದ್ದಿಗಳು ಹರಿಬಿಡಲಾಗುತ್ತಿದೆ. ಈ ನಡುವೆ, ನಟಿ ಪವಿತ್ರಾ ಲೋಕೇಶ್‌ ಇದೀಗ ಸುದ್ದಿ ವಾಹಿನಿಗಳು ನನ್ನನ್ನು ಹಿಂಬಾಲಿಸುತ್ತಿದ್ದು, ನನ್ನ ನೆಮ್ಮದಿ ಭಂಗಗೊಳಿಸಿ, ಮಾನಸಿಕವಾಗಿ ಘಾಸಿ ಮಾಡಿವೆ. ಈ ಸಂಬಂಧ ಅಂತಹ ವಾಹಿನಿಗಳ ವಿರುದ್ಧ ಕ್ರಮಜರುಗಿಸುವಂತೆ ಕೋರಿ ಮೈಸೂರಿನ ವಿವಿ ಪುರಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಕೆಲವು ಮಾಧ್ಯಮ ಪ್ರತಿನಿಧಿಗಳು ನನ್ನನ್ನು ನಿರಂತರವಾಗಿ ಹಿಂಬಾಲಿಸುತ್ತಿದ್ದು, ಮಾನಸಿಕವಾಗಿ ಹಾನಿ ಉಂಟಾಗುತ್ತಿದೆ ಎಂದಿರುವ ಪವಿತ್ರಾ ಲೋಕೇಶ್ ಇದು ತನಗೆ ಅಪಾರವಾದ ನೆಮ್ಮದಿಗೆ ಭಂಗ ತಂದಿದೆ. ಎಂದೂ ವಿವರಿಸಿದ್ದಾರೆ. ಈ ಕೃತ್ಯದಲ್ಲಿ ತೊಡಗಿರುವ ಮಾಧ್ಯಮ ಸಂಸ್ಥೆಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ತೆಲಗು ನಟ ನರೇಶ್ ಬಾಬು ಜೊತೆ ನಟಿ ಪವಿತ್ರಾ ಲೋಕೇಶ್ ಅವರು ಮದುವೆಯಾಗಿದ್ದಾರೆಂಬ ಸುದ್ದಿ ಇತ್ತೀಚೆಗೆ ಸದ್ದು ಮಾಡುತ್ತಿದೆ. ಅದಕ್ಕೆ ಪುಷ್ಟಿ ಎಂಬಂತೆ ಭಾನುವಾರ ಬೆಳಗ್ಗೆ ಮೈಸೂರಿನ ಖಾಸಗಿ ಹೊಟೇಲ್ ನ ಕೊಠಡಿಯಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ತಂಗಿದ್ದು ನರೇಶ್‌ ಮೂರನೇ ಪತ್ನಿ ರಮ್ಯಾ ರಘುಪತಿ ಎದುರು ಸಿಕ್ಕಿಬಿದ್ದಿದ್ದಾರೆ. ಇದು ಎಲ್ಲಾ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಕೊನೆಗೆ ಪೊಲೀಸರ ರಕ್ಷಣೆಯಲ್ಲಿ ಅವರು ಅಲ್ಲಿಂದ ಹೊರಹೋಗಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೆ ಪವಿತ್ರಾ ಲೋಕೇಶ್ ಮೈಸೂರಿನ ಸೈಬರ್‌ ಠಾಣೆಯಲ್ಲಿ ತಮ್ಮ ಹೆಸರಲ್ಲಿ ಯಾರೋ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಅನುಚಿತವಾಗಿ ವರ್ತಿಸುತ್ತಿದ್ದಾರೆ. ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ಕೋರಿ ದೂರು ದಾಖಲಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *