ಪಟಾಕಿ ಕಾರ್ಖಾನೆ ಸ್ಪೋಟ; 6 ಮಂದಿ ದಾರುಣ ಸಾವು, 20 ಜನರ ಗಾಯ

ತಮಿಳುನಾಡು : ಶಿವಕಾಶಿಯಲ್ಲಿನ ಕಲೈಯರ್ಕುರಿಚಿ ಗ್ರಾಮದ ಥಾಂಕಾರಜ್‌ಪಾಂಡಿಯನ್ ಪಟಾಕಿ ಕಾರ್ಖಾನೆ ಸ್ಪೋಟ ಸಂಭವಿಸಿದೆ. ಈ ದುರಂತದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 20 ಮಂದಿಗೆ ಗಾಯವಾಗಿದೆ. ನಿನ್ನೆ ಸಂಜೆ ಪಟಾಕಿ ಕಾರ್ಖಾನೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು, ಪಟಾಕಿ ಬಾಕ್ಸ್ ಗಳು ಸಿಡಿದ ಪರಿಣಾಮವಾಗಿ ಈ ಅವಗಡ ಸಂಭವಿಸಿದೆ ಎಂದು ಹೇಳಿಲಾಗುತ್ತಿದೆ.

ಪಟಾಕಿ ಉತ್ಪನ್ನ ಕಾರ್ಖಾನೆಯಲ್ಲಿ ಇತಂಹ ದುರಂತಗಳು ಹೊಸದೆನಲ್ಲ. ಕಳೆದ  ಒಂದೇ ತಿಂಗಳಲ್ಲಿ ಎರಡು ಬಾರಿ ಇಂತಹ ದುರಂತಗಳು ಸಂಭಂವಿಸಿದ್ದು, ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ. ಈ ಘಟನೆಯಲ್ಲಿ 6 ಜನ ಸಾವನಪ್ಪಿದ್ದು, 20 ಜನ ಗಂಭಿರವಾಗಿ ಗಾಯಗೊಂಡಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರಗೆ ಸೇರಿಸಲಾಗಿದೆ. ಈ ಸ್ಟೋಟದಿಂದ ಗ್ರಾಮ ನಿವಾಸಿಗಳು ಕಂಗಾಲಾಗಿದ್ದಾರೆ. ಇಂತಹ ದುರಂತಗಳಿಂದ ಅನೇಕ ಜೀವನಹಾನಿಗೊಳ್ಳಗಾಗುತ್ತಿವೆ. ಈ ದುರಂತಗಳು  ಮತ್ತೆ ಸಂಬಂವಿಸಿದಂತೆ ಸರ್ಕಾರ ಮುನ್ನೇಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಎಂದು ಗ್ರಾಮ ನಿವಾಸಿಗಳು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *