ಮೈಸೂರಿನಲ್ಲಿ ʻಪರ್ವʼ

ಪದ್ಮಶ್ರೀ ಡಾ. ಎಸ್‌.ಎಲ್‌.ಭೈರಪ್ಪರವರ ಕಾದಂಬರಿ ʻಪರ್ವʼ ರಂಗರೂಪಕ್ಕೆ ಸಿದ್ಧಗೊಳಿಸಿ ಮೂರು ದಿನಗಳ ವಿಶೇಷ ಪ್ರದರ್ಶನವನ್ನು ರಂಗಾಯಣ ಮೈಸೂರು ಇಲ್ಲಿ ಏರ್ಪಡಿಸಲಾಗಿದೆ.

ಈ ಬೃಹತ್ ಕಾದಂಬರಿಯ ವಸ್ತು ವಿಷಯವು ಮಹಾಭಾರತದ ಕತೆಯನ್ನು ಧರಿಸಿದೆ. ಮಹಾಭಾರತವನ್ನು ತನ್ನದೇ ವಿಶಿಷ್ಟ ಮತ್ತು ವಿಭಿನ್ನ ನೆಲೆಯಲ್ಲಿ ಚಿತ್ರಿಸಲಾಗಿದೆ. ಇಡೀ ಭಾರತೀಯ ಪರಂಪರೆಯಲ್ಲೇ ಮೌಖಿಕ ಹಾಗೂ ಅಕ್ಷರಸ್ಥ ಸಮಾಜಗಳೆರಡರಲ್ಲೂ ಹಾಸುಹೊಕ್ಕಾಗಿ ಬಂದಿರುವ ಮಹಾಭಾರತದ ಕಥೆಯಾಗಿದ್ದು, ಆ ಮೂಲಕ ಮನುಷ್ಯ ಜೀವನದ ನೂರಾರು ಬಗೆಯ ವ್ಯಕ್ತಿತ್ವಗಳ ಸಂಕೀರ್ಣತೆಯನ್ನು ಬಿಂಬಿಸುವ, ಆ ಮೂಲಕ ಪ್ರತಿಯೊಬ್ಬ ವ್ಯಕ್ತಿಯೂ ಆತ್ಮಶೋಧ ಮಾಡಿಕೊಳ್ಳುವಂತೆ ಪ್ರೇರೇಪಿಸುವ ಕೃತಿಯಾಗಿದೆ.

ನಾಟಕದ ನಿರ್ದೇಶನ ಪ್ರಕಾಶ ಬೆಳವಾಡಿ ಮಾಡಿದ್ದಾರೆ.

ಮಾರ್ಚ್‌ 12, 13, 14ರ ಮೂರು ದಿನಗಳು ಬೆಳಿಗ್ಗೆ 10 ಗಂಟೆಗೆ ನಾಟಕ ಆರಂಭವಾಗಲಿದೆ. ನಾಟಕದ ಅವಧಿ 7 ಗಂಟೆ 30 ನಿಮಿಷಗಳಾಗಿದೆ. ನಾಟಕದ ಮಧ್ಯೆ ಮಧ್ಯಾಹ್ನ ಊಟಕ್ಕೆ ಹಾಗೂ ಎರಡು ಬಾರಿ ಟೀ ವಿರಾಮ ವಿರುತ್ತದೆ. ಟಿಕೇಟ್‌ ದರ ರೂ.500 ಹಾಗೂ ರೂ.250 ಆಗಿದೆ.

Donate Janashakthi Media

One thought on “ಮೈಸೂರಿನಲ್ಲಿ ʻಪರ್ವʼ

  1. How come janashakthi giving publicity for RSS -BJP ideologue S.Bairappa’s parva?What logic is this? One hand you’re projecting as opposed to rightist ideas and other hand giving publicity for his book.

Leave a Reply

Your email address will not be published. Required fields are marked *