ಅತ್ಯಾಚಾರವೆಸಗಿದ ಸವರ್ಣಿಯ ಯುವಕನ ವಿರುದ್ಧ ದೂರು: ದಲಿತ ಕುಟುಂಬವನ್ನು ಬಹಿಷ್ಕಾರಿಸಿದ ಗ್ರಾಮಸ್ಥರು

ಬೆಂಗಳೂರು: ಅತ್ಯಾಚಾರವೆಸಗಿದ ಸವರ್ಣಿಯ ಯುವಕನ ವಿರುದ್ಧ ದೂರು ನೀಡಿದಕ್ಕೆ ದಲಿತ ಕುಟುಂಬವನ್ನು ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಮಾಡಿರುವ ಘಟನೆ ನಡೆದಿದೆ.

ಸವರ್ಣಿಯ ಯುವಕನೊಬ್ಬ ಅಪ್ರಾಪ್ತ ವಯಸ್ಸಿನ ದಲಿತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ವಿರುದ್ಧ ದೂರು ದಾಖಲಿಸಿದಕ್ಕೆ, ದಲಿತ ಕುಟುಂಬವೊಂದನ್ನು ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿರುವ ಆತಂಕಕಾರಿ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದ್ದು, ಶುಕ್ರವಾರ ತಡವಾಗಿ ಬೆಳಕಿಗೆ ಬಂದಿದೆ.

ಇದನ್ನು ಓದಿ : 6 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ತ್ರಿಪುರಾದಲ್ಲಿ ಇಬ್ಬರ ಬಂಧನ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಪ್ಪರಗಾ ಗ್ರಾಮದಲ್ಲಿ 14 ವರ್ಷದ ದಲಿತ ಸಮುದಾಯದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಆಕೆಯನ್ನು ಗರ್ಭಿಣಿ ಮಾಡಿದ್ದ ಸವರ್ಣೀಯ ಯುವಕನ ವಿರುದ್ಧ ಪೋಷಕರು ಆಗಸ್ಟ್ 12 ರಂದು ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿದ್ದರು.

ಸರ್ವಣೀಯ ಸಮುದಾಯದ ನಾಯಕರು ದಲಿತ ಕುಟುಂಬಕ್ಕೆ ಸಂಧಾನವಾಗುವಂತೆ ಕೇಳಿಕೊಂಡಿದ್ದಾರೆ. ಆದರೆ, ಅವರ ಮಾತನ್ನು ಒಪ್ಪದ ದಲಿತ ಕುಟುಂಬ ಆರೋಪಿ ವಿರುದ್ಧ ದೂರು ದಾಖಲಿಸಿದ್ದು, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಇದನ್ನು ನೋಡಿ : ದುರ್ಬಲವಾಗುತ್ತಿರುವ ಸರ್ಕಾರಿ ಶಾಲೆಗಳು : ಸರ್ಕಾರ ಏನು ಮಾಡುತ್ತಿದೆ? – ಕೃಷ್ಣಮೂರ್ತಿ ಬಿಳಿಗೆರೆJanashakthi Media

Donate Janashakthi Media

Leave a Reply

Your email address will not be published. Required fields are marked *