ಅರಳುವ ಮುನ್ನವೇ ಅನಾಥವಾದ ಹಾಸನ ವಿಶ್ವ ವಿದ್ಯಾಲಯ

ಒಂದು ದೇಶದ ಅಭಿವೃದ್ದಿ ಆದೇಶದ ಉನ್ನತ ಶಿಕ್ಷಣಮಟ್ಟವನ್ನ ಅವಲಂಬಿಸಿರುತ್ತೆ ಎನ್ನೋ ಮಾತಿದೆ. ಉನ್ನತ ಶಿಕ್ಷಣ ಗುಟ್ಟಮಟ್ಟ ಹೆಚ್ಚಿದಂತೆಲ್ಲಾ ಉತ್ತಮ ಸಂಶೋದನೆಗಳು, ನಡೆದು ಸಮಾಜಕ್ಕೆ ಅಪಾರ ಕೊಡುಗೆ ಸಿಕ್ಕಿದ್ರೆ ದೇಶದ ಅಭ್ಯದಯಕ್ಕು ನೆರವಾಗುತ್ತೆ, ಹಾಗಾಗಿಯೇ ವಿಶ್ವ ವಿದ್ಯಾಲಯಗಳು ಉನ್ನತ ಶಿಕ್ಷಣವನ್ನ ಉನ್ನತೀಕರಿಸೊ ಕೇಂದ್ರಗಳಾಗಿ ಗುರ್ತಿಸಿಕೊಂಡಿವೆ, ಆದ್ರೆ ಇತ್ತೀಚೆಗೆ ಸರ್ಕಾರಗಳ ನಿರ್ಲಕ್ಷ್ಯವೋ ಅಥವಾ ಖಾಸಗಿ ಲಾಭಿಯೋ ಸಾಕಷ್ಟು ವಿವಿ ಗಳು ಹೆಸರಿಗಷ್ಟೇ ಘೋಷಣೆಯಾಗಿದೆಯಾ ಎನ್ನೊ ಅನುಮಾನ ಮೂಡುತ್ತೆ, ಇಂತಹ ಅನುಮಾನಕ್ಕೆ ಕಾರಣ ಹಾಸನದ ವಿಶ್ವವಿದ್ಯಾಯಲ, 2023ರ ಮಾರ್ಚ್ ನಿಂದ ಕಾರ್ಯಾರಂಬಮಾಡಿರೊ ಹಾಸನದ ವಿಶ್ವ ವಿದ್ಯಾಲಯ ಅಕ್ಷರಶಃ ಅನಾಥವಾಘಿದೆ. ಅನಾಥ

ಎರಡು ವರ್ಷಗಳ ಹಿಂದೆ ಮೈಸೂರು ವಿವಿ ವ್ಯಾಪ್ತಿಯಲ್ಲಿದ್ದ ಹಾಸನ ವಿವಿ ಕೇಂದ್ರವನ್ನ ಪ್ರತ್ಯೇಕೀಕರಿಸಿ ಹೊಸ ವಿಶ್ವ ವಿದ್ಯಾಯಲವನ್ನ ಸೃಜನೆ ಮಾಡಲಾಗಿದೆ, ಸಹಜವಾಗಿಯೇ ಹಾಸನದ ವಿವಿ ಸ್ಥಾಪನೆ ಆದಾಗ ಎಲ್ಲರಿಗೂ ಖುಷಿಯಾಗಿತ್ತು, ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿಯತ್ತ ಸಾಗುತ್ತಿರೊ ಹಾಸನಕ್ಕೆ ಆಡಳಿತಾತ್ಮಕ ದೃಷ್ಟಿಯಿಂದ ಈ ವಿವಿ ನೆರವಾಗುತ್ತೆ ಎಂದೇ ಎಲ್ಲರು ಭಾವಿಸಿದ್ರು. ಆದ್ರೆ ವಾಸ್ತವವೇ ಬೇರೆಯಾಗಿದೆ, ಈ ಹಿಂದಿನ ಬಿಜೆಪಿ ಸರ್ಕಾರದ ಕೊನೆ ಬಜೆಟ್ ನಲ್ಲಿ ಘೋಷಣೆಯಾದ ಹಾಸನ ವಿವಿ ಹೆಸರಿಗಷ್ಟೇ ಸೀಮಿತವಾಗಿ ಯಾವುದೇ ಅಭಿವೃದ್ದಿ ಇಲ್ಲದೆ, ಅಭಿವೃದ್ದಿಗೆ ಅನುದಾನ ಇಲ್ಲದೆ ಸೊರಗುತ್ತಿದೆ, ಕನಿಷ್ಟ ಆಡಳಿತಾತ್ಮಕ ಸೌಲಭ್ಯಗಳು ಇಲ್ಲದೆ ಅನಾಥವಾಗಿದ್ದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಭೀರುತ್ತಿದೆ. ಅನಾಥ

ಬಾರದ ಅನುದಾನ ಸಿಗದ ಸೌಲಭ್ಯ..

2023ರ ಮಾರ್ಚ್ ವರೆಗೂ ಮೈಸೂರು ವಿವಿ ವ್ಯಾಪ್ತಿಗೆ ಸೇರಿದ್ದ ಹಾಸನ ಜಿಲ್ಲೆ ಪದವಿ ಹಾಗು ಸ್ನಾತಕೋತ್ತರ ಕಾಲೇಜುಗಳು ಹಾಸನ ವಿವಿ ಸ್ಥಾಪನೆ ಬಳಿಕ ಹಾಸನ ವಿವಿ ವ್ಯಾಪ್ತಿಗೆ ಸೇರಿಕೊಂಡಿದೆ, 22 ಸರ್ಕಾರಿ, 20 ಖಾಸಗಿ, 2 ಸ್ವಾಯತ್ತ ಪದವಿ ಕಾಲೇಜುಗಳು, 2 ವಿವಿ ಕೇಂಧ್ರಗಳು, ಸೇರಿ 54 ಪದವಿ ಕಾಲೇಜುಗಳು, 16 ಸ್ಣಾತಕೋತ್ತರ ಕಾಲೇಜು ಸೇರಿ ಒಟ್ಟು 70 ಕಾಲೇಜುಗಳು ಈ ವಿವಿ ಕೇಂಧ್ರದ ವ್ಯಾಫ್ತಿಗೆ ಬರುತ್ತವೆ. ಸರಿ ಸುಮಾರು 20 ಸಾವಿರಕ್ಕು ಅಧಿಕ ವಿದ್ಯಾರ್ಥಿಗಳು ಅಬ್ಯಾಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಪಿಂಕ್ ಲೈನ್ ಮೆಟ್ರೋ: ಶೇ.95ರಷ್ಟು ಕಾಮಗಾರಿ ಪೂರ್ಣ, ಮುಂದಿನ ವರ್ಷ ಸಂಚಾರ ಆರಂಭ..?

ಇಷ್ಟೆಲ್ಲ ಕಾಲೇಜುಗಳು ಈ ವಿವಿ ವ್ಯಾಪ್ತಿಗೆ ಸೇರಿದ್ರು ಕೂಡ ಆಡಳಿತಾತ್ಮಕವಾಗಿ ಯಾವುದೇ ಸೌಲಭ್ಯಗಳನ್ನು ಸರ್ಕಾರ ಮಾಡಿಕೊಟ್ಟಿಲ್ಲ, ಕೇವಲ ಉಪ ಕುಲಪತಿಗಳನ್ನ ನೇಮಿಸಿ, ಕುಲ ಸಚಿವರೊಬ್ಬರನ್ನು ನೇಮಕ ಮಾಡಿ ಕೈತೊಳೆದುಕೊಂಡಿದ್ದು ಇಲ್ಲಿಗೆ ನೇಮಕವಾಗಿರೊ ಉಪ ಕುಲಪತಿಗಳು ಹಾಗು ಕುಲ ಸಚಿವರು ದಿಕ್ಕೆಟ್ಟು ಹೋಗಿದ್ದಾರೆ, ವಿವಿ ಆಡಳಿತ ಕೇಂದ್ರವಿರೊ ಹಾಸನದಲ್ಲಿ ಆಡಳಿತಾತ್ಮಕ ದೃಷ್ಟಿಯಿಂದ ಕನಿಷ್ಟ 300 ಸಿಬ್ಬಂದಿ ಬೇಕು, ಆದ್ರೆ ಹಾಸನ ವಿವಿ ಕೇಂದ್ರದಲ್ಲಿ ಇರೋ ಸಿಬ್ಬಂದಿ ಕೇವಲ 10 ಜನರು ಅದೂ ಇವರೆಲ್ಲಾ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರು, ಎರಡು ವರ್ಷಗಳಿಂದ ಕನಿಷ್ಟ ಸೌಲಭ್ಯಗಳು ಇಲ್ಲದೆ, ಪರೀಕ್ಷೆಗಳನ್ನು ನಡೆಸಯಲಾಗದೆ, ಕಾಲೇಜುಗಳ ಆಡಳಿತಾತ್ಮಕ ಹೊಣೆಗಾರಿಕೆ ನಿರ್ವಹಣೆ ಮಾಡಲಾಗದೆ ವಿವಿ ಕೇಂದ್ರ ನಲುಗುತ್ತಿದೆ. ಅನಾಥ

ಆಡಳಿತಾತ್ಮಕ ವಿಭಾಗಕ್ಕೆ ಸೌಲಭ್ಯಗಳ ಕೊರತೆ..

ಜಿಲ್ಲಾ ಕೇಂದ್ರ ಹಾಸನದ ಬೆಂಗಳೂರು ರಸ್ತೆಯಲ್ಲಿರೊ ಹೇಮ ಗಂಗೋತ್ರಿ ಸ್ನಾತಕೋತ್ತರ ಕೇಂದ್ರವನ್ನೆ ಕೇಂದ್ರವಾಗಿರಿಸಿ ಸರ್ಕಾರ ಹಾಸನ ವಿವಿಯನ್ನ ಘೋಷಣೆ ಮಾಡಿತ್ತು, ಆದ್ರೆ ಹೊಸದಾಗಿ ಸ್ಥಾಪನೆಯಾದ ವಿವಿ ಕೇಂದ್ರಕ್ಕೆ ಓರ್ವ ಉಪ ಕುಲಪತಿಗಳು, ಕುಲ ಸಚಿವರು, ಪರಿಕ್ಷಾಂಗದ ಕುಲ ಸಚಿವರು ಹೀಗೆ ಹಲವು ಹುದ್ದೆಗಳು ಸೃಷ್ಟಿಯಾಧ್ರು ಈವರೆಗೆ ಒಂದೇ ಒಂದು ಹೊಸ ಕಟ್ಟಡ ನಿರ್ಮಾಣವಾಗಿಲ್ಲ, ಬೋದನ ಕೊಠಡಿಗಳೇ ಇಲ್ಲಿನ ಅದಿಕಾರಿಗಳಿಗೆ ಕಛೇರಿಗಳಾಗಿವೆ ಕನಿಷ್ಟ ಕೂರಲು ಒಂದು ಖಛೇರಿಗಳಿಲ್ಲ, ಕಂಪ್ಯೂಟರ್ ಗಳಿಲ್ಲದೆ, ಅದಿಕಾರಿಗಳು ತಮ್ಮ ಪರ್ಸನಲ್ ಲ್ಯಾಪ್ ಟಾಪ್ ಗಳನ್ನ ಬಳಸಿ ಕೆಲಸ ಮಾಡುತ್ತಿದ್ದಾರೆ, ಸಿಬ್ಬಂದಿಗಳಿಲ್ಲದೆ ತಾವೇ ಅದಿಕಾರಿಗಳಾಗಿ, ಕ್ಲರ್ಕ್ ಗಳಾಗಿ ದುಡಿಯಬೇಕಾದ ಅನಿವಾರ್ಯತೆ ನಿರ್ಮಾನವಾಗಿದೆ, ಕೇವಲ ಯೂನಿವರ್ಸಿಟಿ ಘೋಷಣೆ ಮಾಡಿದ ಸರ್ಕಾರ ಯಾವುದೇ ಸೌಲಭ್ಯ ನೀಡಿಲ್ಲ ಈಗಾಗಲೆ ನಾಲ್ಕು ಸೆಮಿಸ್ಟರ್ ಗಳನ್ನ ನಡೆಸಿರೊ ಈ ವಿವಿಗೆ ಪರಿಕ್ಷಾಂಗವಿಭಾಗಕ್ಕೆ ಈವರೆಗೆ ಓರ್ವ ಪರಿಕ್ಷಾಂಗ ವಿಭಾಗದ ಕುಲ ಸಚಿವರ ನೇಮಕವೇ ಆಗಿಲ್ಲ, ಎಲ್ಲರನವನು ಕುಲ ಸಚಿವರೇ ಮಾಡಿ ಆಡಳಿತ ನಡೆಸುತ್ತಿದ್ಧಾರೆ. ಅನಾಥ

ಪರೀಕ್ಷೆ ನಡೆಸಲು ವ್ಯವಸ್ಥೆ ಇಲ್ಲ, ನಡೆದ ಪರೀಕ್ಷಾ ಪತ್ರಿಕೆ ಮೌಲ್ಯಮಾಪನಕ್ಕೆ ವ್ಯವಸ್ಥೆಯೂ ಇಲ್ಲ

ಒಂದು ವಿವಿ ಕೇಂಧ್ರ ಎಂದರೆ ಆಡಳಿತಾತ್ಮಕವಾಘಿ ಬೇಕಾದ ಎಲ್ಲಾ ವ್ಯವಸ್ಥೆಗಳು ಇರಬೇಕು, ಯಾವುದೇ ಸಿದ್ದತೆ ಇಲ್ಲದೆ ವಿವಿಯನ್ನ ಘೋಷಣೆ ಮಾಡಲಾಗಿದೆ, ಆದ್ರೆ ವಿವಿ ಕಾರ್ಯಾರಂಬವಾದಬಳಿಕವಾದ್ರು ಸರ್ಕಾರ ಅಗತ್ಯ ಸೌಲಭ್ಯಕ್ಕಾಗಿ ಅನುದಾನ ನೀಡಿಲ್ಲ, ಎರಡು ವರ್ಷಗಳಿಂದ ಇಲ್ಲಿನ ಜವಾಬ್ದಾರಿ ವಹಿಸಿಕೊಂಡ ಉನ್ನತಾದಿಕಾರ ಹೊಂಧಿದವರು ವಿವಿ ಆಡಳಿತ ನಡೆಸಲು ಹೆಣಗಾಡುತ್ತಿದ್ದಾರೆ, 20 ಸಾವಿರ ವಿದ್ಯಾರ್ಥಿಗಳು ಪ್ರತಿ ಸೆಮಿಸ್ಟರ್ ಗೆ ಪರೀಕ್ಷೆ ಬರೆಯುತ್ತಾರೆ, ಪರೀಕ್ಷೆ ನಡೆಸಿದ ಪತ್ರಿಕೆಗಳನ್ನ ಸಂಗ್ರಹಿಸಿ ಇಟ್ಟುಕೊಳ್ಳಲು ಸ್ಟ್ರಾಂಗ್ ರೂಂ ವ್ಯವಸ್ಥೆ ಕೂಡ ವಿವಿಗೆ ಇಲ್ಲ, ಇಷ್ಟಲ್ಲದೆ ಇಷ್ಟೊ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳ ಪರಿಕ್ಷಾ ಉತ್ತರ ಪತ್ರಿಕೆಗಳನ್ನ ಮೌಲ್ಯಮಾಪನ ಮಾಡಲು ಬೇಕಾದ ದೊಡ್ಡ ಕೊಠಡಿಯಾಗಲಿ ಅಥವಾ ಇನ್ಯಾವುದೆ ಪರ್ಯಾಯ ವ್ಯವಸ್ಥೆಯಾಗಲಿ ಇಲ್ಲ, ಆದ್ರು ಇದೊಂದು ಪ್​ರತ್ಯೇಕ ವಿವಿ ಆಗಿರುವ ಕಾರಣಕ್ಕೆ ಇವೆಲ್ಲವನ್ನು ಮಾಡಲೇ ಬೇಕಿದೆ. ಅನಾಥ

ಇಷ್ಟೆಲ್ಳಾ ಸಮಸ್ಯೆಗಳು ಇದ್ದಾಗ್ಯ, ಪ್ರತಿಭಾರಿ ಸಭೆಗಳಲ್ಲಿ ಇದನ್ನ ಗಮನಕ್ಕೆ ತಂದಾಗ್ಯು ಕೂಡ ಇವರೆಗೆ ಯಾವುದೇ ವ್ಯವಸ್ಥೆಗಳು ಆಗಿಲ್ಲ ಎನ್ನೋದು ದುರಂತ.ಈಗ ಮತ್ತೆ ಪರೀಕ್ಷೆ ಸಮಯ ಬಂದಿದೆ, ಪರೀಕ್ಷೆ ನಡಸಲು ಉತ್ತರ ಪತ್ರಿಕೆಗಳ ಖರೀದಿಯೂ ಆಗಿದೆ, ಆದ್ರೆ ಉತ್ತರ ಬರೆದ ವಿದ್ಯಾರ್ಥಿಗಳ ಉತ್ತರ ಪತ್ರಿಗೆ ಇಡೋದು ಎಲ್ಲಿ, ಮೌಲ್ಯ ಮಾಪನ ಮಾಡೋದು ಎಲ್ಲಿ ಎನ್ನೋ ಟೆನ್ಷನ್ ಮತ್ತೆ ಶುರುವಾಗಿದೆ, 20 ಸಾವಿರ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯ ಮಾಪನ ದೊಡ್ಡ ಸವಾಲಾಗಿ ಪರಿಣಮಿಸಿದೆ.

ನೇಮಕವಾಗದ ಪೂರ್ಣ ಪ್ರಮಾಣದ ಸಿಂಡಿಕೇಟ್, ಉನ್ನತ ಶೀಕ್ಷಣ ಸಂಸ್ಥೆಗಳು ಅಂದ್ರೆ ಶೈಕ್ಷಣಿಕವಾಗಿ ಬಹುತೇಕ ಸ್ವಾಯತ್ತತೆ ಹೊಂದಿರೊ ಕೇಂದ್ರಗಳು, ಇದರ ಆಡಳಿತ ವ್ಯವಸ್ಥೆಯನ್ನ ಉಪ ಕುಲಪತಿಗಳು, ಕುಲ ಸಚಿವರು ನೋಡಿಕೊಂಡರೂ ಕೂಡ ವಿವಿಗಳ ಸಿಂಡಿಕೇಟ್ ಗಳು ಇದರ ಅತ್ಯುನ್ನತ ಆಡಳಿತ ಮಂಡಳಿ ಆಗಿರುತ್ತವೆ, ವಿವಿಯ ಎಲ್ಲಾ ವಿಚಾರಗಳು ಇಲ್ಲಿ ಚರ್ಚೆಯಾಗಿಯೇ ಅಂತಿಮವಾಗ್ತವೆ, ದುರಂತ ಎಂದರೆ ಹಾಸನದ ವಿವಿ ಸ್ಥಾಫನೆಯಾಗಿ 2 ವರ್ಷ ಆದ್ರು ಕೂಡ ಹಾಸನ ವಿವಿಗೆ ಪೂರ್ಣ ಪ್ರಮಾಣದ ಒಂದು ಸಿಂಡಿಕೇಟ್ ಕೂಡ ರಚನೆ ಆಗಿಲ್ಲ, ರಾಜ್ಯಪಾಲರಿಂದ ನೇಮಕವಾದ ಇಬ್ಬರು ಸಿಂಡಿಕೇಟ್ ಮೆಂಬರ್ ಬಿಟ್ಟರೆ ನಾಲ್ವರು ಪ್ರಾಂಶುಪಾಲರು ಹಾಗು ಉಪಕುಲಪತಿ ಹಾಗು ಕುಲ ಸಚಿವರು ಮಾತ್ರ ಇದ್ದು ಇನ್ನೂ ನಾಲ್ವರು ಸಿಂಡಿಕೇಟ್ ಮೆಂಬರ್ ಗಳ ನೇಮಕವಾಗದೆ ಸಿಂಡಿಕೇಟ್ ಸಬೆಗಳು ಕೂಡ ಸರಿಯಾಗಿ ಆಗ್ತಿಲ್ಲ, ಹಾಗಾಗಿಯೇ ವಿವಿ ಕೂಡ ಅಭಿವೃದ್ದಿ ಪಥದಲ್ಲಿ ಸಾಗುತ್ತಿಲ್ಲ ಎನ್ನೋ ಮಾತು ಕೇಳಿ ಬರ್ತಿದೆ.

ಹಾವನದ ವಿವಿ ಬಗ್ಗೆ ತಲೆ ಕೆಡಿಸಿಕೊಳ್ಳದ ಜಿಲ್ಲೆಯ ಜನ ಪ್ರತಿನಿಧಿಗಳು ಹಾಸನಕ್ಕೆ ಒಂದು ವಿವಿ ಬರಬೇಕು, ಹಾಸನದಲ್ಲಿರೊ ದೊಡ್ಡ ಸಂಖ್ಯೆಯ ಕಾಲೇಜುಗಳ ಆಡಳಿತಾತ್ಮಕ ದೃಷ್ಟಿಯಿಂದ ಇದು ಅನುಕೂಲ ಎನ್ನೋ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉನ್ನತ ಶೀಕ್ಷಣ ಪಡೆಯಲು ಇದು ನೆರವಾಗುತ್ತೆ ಎಂದೇ ಎಲ್ಲರು ಭಾವಿಸಿದ್ರು, ಆದ್ರೆ ವಿವಿ ಘೊಷಣೆಯಾಗಿ ಕಾರ್ಯಾರಂಬಮಾಡಿದ ಬಳಿಕ ಆಗ್ತಿರೋದೆ ಬೇರೆ, ವಿವಿಯ ಅಭಿವೃದ್ದಿ ಆಗೋದಿರಲಿ, ಅರಳುವ ಮುನ್ನವೇ ವಿವಿ ಕೇಂಧ್ರ ನಲುಗಿ ಹೋಗ್ತಿದೆ, ಅಭಿವೃದ್ದಿ ಆಗೋ ಬದಲು ಮತ್ತೆ ಹಾಸನ ವಿವಿ ರದ್ದು ಮಾಡಿ ಹಾಸನ ಜಿಲ್ಲೆಯನ್ನ ಮೈಸೂರು ವಿವಿ ವ್ಯಾಪ್ತಿಗೆ ಸೇರಿಸಬೇಕೇ ಎನ್ನೋ ಚರ್ಚೆ ಕೂಡ ಆರಂಬವಾಗಿದೆ ಎನ್ನೋ ಮಾತುಗಳು ಕೇಳಿ ಬರ್ತಿದೆ.

ಹಾಸನದ ವಿವಿಯಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ದರು ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿಗಳಾಗಲಿ, ಸಂಘ ಸಂಸ್ಥೆಗಳಾಗಲಿ, ಉನ್ನತ ಶಿಕ್ಷಣದ ಬಗ್ಗೆ ಆಸಕ್ತಿ ಇರೋರಾಗಲಿ ಈ ಬಗ್ಗೆ ತಲೆ ಕೆಡಿಸಿಕೊಳ್ತಿಲ್ಲ, ಊರ ಹೊರಗಿರೊ ವಿವಿ ಕೇಂಧ್ರ ಅನಾಥವಾಗಿ ದಿನದಿಂದ ದಿನಕ್ಕೆ ಯಾವುದೇ ಸೌಲಭ್ಯಗಳಿಲ್ಲದೆ, ಕನಿಷ್ಟ ಅಭಿವೃದ್ದಿ ಇಲ್ಲದೆ ನರಳುತ್ತಿದ್ದು ಇನ್ನಾದ್ರು ಸರ್ಕಾರ ಹಾಸನದ ವಿಶ್ವ ವಿದ್ಯಾಲಯ ಅಭಿವೃದ್ದಿಗೆ ಆಧ್ಯತೆ ನಿಡುತ್ತಾ ಕಾದು ನೋಡಬೇಕಿದೆ.

ಇದನ್ನೂ ನೋಡಿ: ಬಹುರೂಪಿ : ಶರಣ ಚಳವಳಿಯ ಕನ್ನಡಿಯಲ್ಲಿ ವರ್ತಮಾನದ ಬಿಕ್ಕಟ್ಟುಗಳು ಹಾಗೂ ಬಿಡುಗಡೆಯ ದಾರಿ Janashakthi Media

Donate Janashakthi Media

Leave a Reply

Your email address will not be published. Required fields are marked *