ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಕುಪಕಡ್ಡಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ರೈತರು ಈರುಳ್ಳಿ ದರ ತೀವ್ರ ಕುಸಿತ ಹಿನ್ನೆಲೆ ಈರುಳ್ಳಿ ರಾಶಿ ಸುರಿದು ಪ್ರತಿಭಟನೆ ಮಾಡಿದ್ದಾರೆ. ವಿಜಯಪುರ
ಕುಪಕಡ್ಡಿ ಬಳಿಯ ತೋಟಗಾರಿಕೆ ಎಫ್ಪಿಒ (ಫಾರ್ಮರ್ಸ್ ಪ್ರೊಡ್ಯೂಸರ್ ಆರ್ಗನೈಜೇಷನ್) ಆವರಣದಲ್ಲಿ ಈರುಳ್ಳಿ ಸುರಿದು ಪ್ರತಿಭಟನೆ ಮಾಡಲಾಗಿದೆ. ಉತ್ತಮ ಗುಣಮಟ್ಟದ ಈರುಳ್ಳಿ ಕ್ವಿಂಟಾಲ್ಗೆ ಕೇವಲ 200 ರೂಪಾಯಿಗೆ ಹರಾಜಾಗುತ್ತಿದೆ.
ಇದನ್ನೂ ಓದಿ: ಬ್ರೆಜಿಲ್| ತನಗೆ ತಾನೇ ಬೆಂಕಿ ಹಚ್ಚಿಕೊಂಡ ವ್ಯಕ್ತಿ
ಕಡಿಮೆ ದರಕ್ಕೆ ಹರಾಜಾದ ಕಾರಣ ಈರುಳ್ಳಿ ಬೆಳೆಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಮೇಲೆ ಈರುಳ್ಳಿ ಸುರಿದು ಬಿದ್ದು ಮಲ್ಲಿಕಾರ್ಜುನ ಬೋಲಗೊಂಡ ಎಂಬ ರೈತ ಹೊರಳಾಡಿದ್ದಾರೆ.
ಇದೇ ಈರುಳ್ಳಿ ಬಾಗಲಕೋಟೆಯಲ್ಲಿ ಕ್ವಿಂಟಾಲ್ಗೆ 1000 ರೂಪಾಯಿಗೆ ಮಾರಾಟವಾಗಿತ್ತು. ಡಿಎಪಿ ರಸಗೊಬ್ಬರ 1200 ರೂ., ಯೂರಿಯಾ 300 ರೂ. ಇದೆ. ನಾವು ಕಷ್ಟಪಟ್ಟು ಬೆಳೆದ ಈರುಳ್ಳಿಗೆ ಕೇವಲ 200 ರೂ. ಯಾಕೆಂದು ಪ್ರಶ್ನೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಈ ಕುರಿತು ಗಮನ ಹರಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ನೋಡಿ: ‘ಬೂಕರ್’ ಅನುಭವವನ್ನು ಬಿಚ್ಚಿಟ್ಟ ಬಾನು ಮುಷ್ತಾಕ್ Janashakthi Media