ಹರಪನಹಳ್ಳಿ: ನರೇಗಾ ಕೆಲಸಕ್ಕೆ ಹೋದ ವೇಳೆ ಕೂಲಿ ಕಾರ್ಮಿಕನೊಬ್ಬ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಅರೇಮಜ್ಜಿಗೆರೆ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಡಿ.ಭರಮಪ್ಪ (65) ಮೃತ ಕೂಲಿ ಕಾರ್ಮಿಕ. ಕೆ.ಕಲ್ಲಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಅರೇಮಜ್ಜಿಗೇರಿ ಗ್ರಾಮದ ಹಳ್ಳವೊಂದರಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹೂಳೆತ್ತುವ ಕೆಲಸ ನಿರ್ವಹಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಇದನ್ನೂ ಓದಿ : ವಿಧಾನ ಪರಿಷತ್ತಿನ ನಾಮನಿರ್ದೇಶನ: ಕಾಂಗ್ರೆಸ್ ಹೈಕಮಾಂಡ್ ತಾತ್ಕಾಲಿಕ ತಡೆ
ಸ್ಥಳಕ್ಕೆ ತಾ.ಪಂ ಇಒ ವೈ.ಎಚ್.ಚಂದ್ರಶೇಖರ, ನರೇಗಾ ಸಹಾಯಕ ನಿರ್ದೇಶಕ ಸೋಮಶೇಖರ್, ಗ್ರಾ.ಪಂ ಅಧ್ಯಕ್ಷೆ ನೇತ್ರಾವತಿ ವೀರುಪಾಕ್ಷಪ್ಪ, ನೀಲಗುಂದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅರ್ಪಿತ ಪಿಡಿಒ ಅನಂದನಾಯ್ಕ್, ಇಂಜಿನಿಯರ್ ಹರೀಶ್ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸರ್ಕಾರದಿಂದ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದರು.
ಮೃತರಿಗೆ ಪತ್ನಿ ಸೇರಿದಂತೆ ನಾಲ್ಕು ಜನ ಮಕ್ಕಳಿದ್ದರು, ಇದರಲ್ಲಿ ಇಬ್ಬರು ಮಕ್ಕಳು ತೀರಿಕೊಂಡಿದ್ದರಿಂದ ಕುಟುಂಬಕ್ಕೆ ಭರಮಪ್ಪ ಆಸರೆಯಾಗಿದ್ದರು.
ಇದನ್ನೂ ನೋಡಿ : ಭಾರತದ ರಾಜಕೀಯ ಮತ್ತು ಹಣಕಾಸು ಒಕ್ಕೂಟ ಸವಾಲುಗಳು ಮತ್ತು ಸಾಧ್ಯತೆಗಳು Janashakthi Media