ಬಿಜೆಪಿಯವರು ಎಷ್ಟೇ ಕಿರುಕುಳ ನೀಡಿದರೂ ತಲೆ ಬಗ್ಗಿಸುವ ಪ್ರಶ್ನೆಯೇ ಇಲ್ಲ : ಲಾಲೂ ಪ್ರಸಾದ್ ಯಾದವ್

ನವದೆಹಲಿ  : ಬಿಜೆಪಿಯವರು ನನಗೆ ಹಾಗೂ ನನ್ನ ಕುಟುಂಬಕ್ಕೆ ಎಷ್ಟೇ ಕಿರುಕುಳ ನೀಡಿದರೂ ಅವರ ಮುಂದೆ ತಲೆ ಬಗ್ಗಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್‌ ಜೆ ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಸ್ಪಷ್ಟಪಡಿಸಿದ್ದಾರೆ.

ಜಮೀನು-ಉದ್ಯೋಗ ಪ್ರಕರಣದಲ್ಲಿ ಸಿಬಿಐ ಮತ್ತು ಇಡಿ ಅಕಾರಿಗಳು ಆಧಾರವಿಲ್ಲದ ಸೇಡಿನ ಪ್ರಕರಣದ ಮೇಲೆ ಅವರು ತಮ್ಮ ಮಗಳು, ಮೊಮ್ಮಗಳು ಮತ್ತು ಗರ್ಭಿಣಿ ಸೊಸೆಗೂ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜಕೀಯ ಕದನಕ್ಕಾಗಿ ಇಷ್ಟು ಕೆಳಮಟ್ಟಕ್ಕೆ ಇಳಯಬೇಕೇ ? 
ನಾವು ತುರ್ತು ಪರಿಸ್ಥಿತಿಯ ಕರಾಳ ಹಂತವನ್ನೂ ನೋಡಿದ್ದೇವೆ. ನಾವು ಆ ಯುದ್ಧವನ್ನೂ ಮಾಡಿದ್ದೇವೆ. ಇಂದು ನನ್ನ ಹೆಣ್ಣುಮಕ್ಕಳು, ಪುಟ್ಟ ಮೊಮ್ಮಗಳು ಮತ್ತು ಗರ್ಭಿಣಿ ಸೊಸೆಯನ್ನು ಬಿಜೆಪಿ ಇಡಿ ಆಧಾರರಹಿತ ಸೇಡಿನ ಪ್ರಕರಣಗಳಲ್ಲಿ 15 ಗಂಟೆಗಳ ಕಾಲ ಕೂರಿಸಿದೆ, ನಮ್ಮೊಂದಿಗೆ ರಾಜಕೀಯ ಕದನ ಮಾಡಲು ಇಷ್ಟು ಬಿಜೆಪಿ ಇಷ್ಟು ಕೆಳಮಟ್ಟಕ್ಕೆ ಇಳಿಯಬೇಕೇ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ವಿರುದ್ಧ ಸೈದ್ಧಾಂತಿಕ ಹೋರಾಟ ಮುಂದುವರಿಯುತ್ತದೆ : 
ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿ ವಿರುದ್ಧ ಸೈದ್ಧಾಂತಿಕ ಹೋರಾಟ ಮುಂದುವರಿಯುತ್ತದೆ. ನಾನು ಅವರ ಮುಂದೆ ಎಂದಿಗೂ ತಲೆಬಾಗಲಿಲ್ಲ, ಬಾಗುವುದು ಇಲ್ಲ ಮತ್ತು ನನ್ನ ಕುಟುಂಬ ಮತ್ತು ಪಕ್ಷದ ಯಾರೂ ನಿಮ್ಮ ರಾಜಕೀಯದ ಮುಂದೆ ತಲೆಬಾಗುವುದಿಲ್ಲ ಎಂದು ಅವರು ಮತ್ತೊಂದು ಹೇಳಿದ್ದಾರೆ.
ಯಾದವ್ ಅವರ ಪುತ್ರಿಯರಾದ ರಾಗಿಣಿ ಯಾದವ್, ಚಂದಾ ಯಾದವ್ ಮತ್ತು ಹೇಮಾ ಯಾದವ್ ಮತ್ತು ಪಾಟ್ನಾ, ಫುಲ್ವಾರಿ ಷರೀಫ, ದೆಹಲಿ-ಎನ್‍ಸಿಆರ್ ರಾಂಚಿ ಮತ್ತು ಮುಂಬೈನಲ್ಲಿನ ಮಾಜಿ  ಆರ್‌ಜೆಡಿ ಶಾಸಕ ಅಬು ದೋಜಾನಾ ಅವರಿಗೆ ಸಂಬಂಸಿದವರ ಮನೆಗಳ ಮೇಲೆ ಇಡಿ ದಾಳಿ ಮುಂದುವರೆದಿರುವ ಸಂದರ್ಭದಲ್ಲಿ ಲಾಲೂ ಮಾಡಿರುವ ಟ್ವಿಟ್ ಗಮನ ಸೆಳೆದಿದೆ.

ಸಿಬಿಐ ಮಾರ್ಚ್ 7 ರಂದು ಲಾಲು ಯಾದವ್ ಅವರನ್ನು ದೆಹಲಿಯಲ್ಲಿ ಐದು ಗಂಟೆಗಳ ಕಾಲ ಅವರ ಮಗಳು ಮಿಸಾ ಭಾರ್ತಿ ಅವರ ಪಂಡರ ರಸ್ತೆಯ ಮನೆಯಲ್ಲಿ ವಿಚಾರಣೆ ನಡೆಸಿತು, ಅವರು ಪ್ರಸ್ತುತ ಅವರ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯ ನಂತರ ವಾಸಿಸುತ್ತಿದ್ದಾರೆ. ಒಂದು ದಿನದ ಹಿಂದೆ, ತನಿಖಾ ಸಂಸ್ಥೆ ರಾಬ್ರಿ ದೇವಿ ಅವರನ್ನು ಅವರ ಪಾಟ್ನಾ ನಿವಾಸದಲ್ಲಿ ವಿಚಾರಣೆ ನಡೆಸಿತ್ತು. ಯಾದವ್ ದಂಪತಿಗಳು ಮತ್ತು ಅವರ ಪುತ್ರಿಯರಾದ ಮಿಸಾ ಮತ್ತು ಹೇಮಾ ಅವರನ್ನು ಹೆಸರಿಸುವ ಸಿಬಿಐ ಪ್ರಕರಣವು 2004 ರಿಂದ 2009 ರ ವರೆಗೆ ಕೇಂದ್ರ ರೈಲ್ವೆ ಸಚಿವರಾಗಿದ್ದ ಅವಯಲ್ಲಿ ಉದ್ಯೋಗಕ್ಕಾಗಿ ಬದಲಾಗಿ ಯಾದವ್ ಮತ್ತು ಅವರ ಕುಟುಂಬ ಸದಸ್ಯರು ಅಗ್ಗದ ದರದಲ್ಲಿ ಭೂಮಿ ಖರೀದಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *