ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವಲ್ಲಿ ವಿಫಲವಾದ ಬಿಜೆಪಿ ಸರ್ಕಾರ: ಸಿದ್ದರಾಮಯ್ಯ

ಕೊಟ್ಟಿಗೆಹಾರ: ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವಲ್ಲಿ ರಾಜ್ಯದ ಬಿಜೆಪಿ ಸರ್ಕಾರವು ವಿಫಲವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮೂಡಗೆರೆ ವಿಧಾನಸಭಾ ಕ್ಷೇತ್ರದ ಕೊಟ್ಟಿಗೆಹಾರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ‘ಶೃಂಗೇರಿಯಲ್ಲಿ ಗೋ ಬ್ಯಾಕ್ ಸಿದ್ದರಾಮಯ್ಯ ಎಂದು ಕೆಲವರು ಘೋಷಣೆ ಕೂಗಿದ್ದಾರೆ. ಈ ಘೋಷಣೆಗಳಿಗೆ ಹೆದರುವುದಿಲ್ಲ. ಇಂತಹವುಗಳನ್ನು ಹಲವು ವರ್ಷಗಳಿಂದ ನೋಡುತ್ತಾ ಬಂದಿದ್ದೇನೆʼʼ ಎಂದು ಹೇಳಿದರು.

ಮರ ಬಿದ್ದು ಮೃತಪಟ್ಟ ಕೆ ತಳಗೂರಿನ ಸರಿತಾ ಮತ್ತು ಚಂದ್ರಮ್ಮ ಅವರ ಕುಟುಂಬಗಳಿಗೆ ಭೇಟಿ ನೀಡಿದ ಸಿದ್ದರಾಮಯ್ಯ  ಕುಟುಂಬಸ್ಥರಿಗೆ ಧನಸಹಾಯ ಮಾಡಿದರು.

ಶಾಸಕರಾದ ಟಿ.ಡಿ ರಾಜೇಗೌಡ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಮುಖಂಡರಾದ ಗಾಯತ್ರಿ ಶಾಂತೇಗೌಡ, ಎಚ್.ಎಚ್.ದೇವರಾಜ್, ಸಚಿನ್ ಮೀಗ, ಸುರೇಂದ್ರ ಗೌಡ, ಪ್ರಭಾಕರ್ ಬಿನ್ನಡಿ, ನಯನಾ ಮೋಟಮ್ಮ, ಕೆ.ಸಿ ಮಹೇಂದ್ರ, ರವಿ ವಾಟೆಖಾನ್, ಶ್ರೀನಾಥ್, ರಾಜೇಂದ್ರ, ಟಿ.ಎಂ.ಸುಬ್ರಹ್ಮಣ್ಯ, ಸಬ್ಲಿ ದೇವರಾಜ್, ಬಿ.ಎಂ ಸತೀಶ್, ಪ್ರಭಾಕರ್, ಮೆಲ್ವಿನ್, ರೆಹಮಾನ್, ತಹಶೀಲ್ದಾರ್ ಎಂ.ಎ.ನಾಗರಾಜ್ ಇದ್ದರು.

Donate Janashakthi Media

Leave a Reply

Your email address will not be published. Required fields are marked *