ನಟ ಚೇತನ್ ಅವರನ್ನು ಕಿಡ್ನಾಪ್ ಮಾಡಿದ್ದಾರೆ : ಪತ್ನಿ ಮೇಘಾ ಆರೋಪ

ಬೆಂಗಳೂರು : ನಟ ಚೇತನ್ ಅವರನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಎಂದು ಅವರ ಪತ್ನಿ ಮೇಘಾ ಅವರು ಆರೋಪಿಸಿದ್ದಾರೆ. ಪೊಲೀಸರೆಂದು ಹೇಳಿಕೊಂಡು ಮನೆಗೆ ಬಂದಿದ್ದ ಕೆಲವರು, ಚೇತನ್ ಅವರನ್ನು ಕರೆದೊಯ್ದಿದ್ದಾರೆ. ಅವರು ಈಗ ಎಲ್ಲಿದ್ದಾರೆಂಬುದನ್ನು ಯಾರೂ ಹೇಳುತ್ತಿಲ್ಲ. ಇದೊಂದು ಅಹರಣ’ ಆರೋಪಿಸಿದ್ದಾರೆ.

ಚೇನತ್‌ ಅವರ ಅಧಿಕೃತ ಫೇಸ್‌ಬುಕ್‌ ಖಾತೆ ಮೂಲಕವೇ ಲೈವ್‌ ಬಂದಿರುವ ಮೇಘಾ, ‘ಪೊಲೀಸರೆಂದು ಹೇಳಿಕೊಂಡು ಮನೆಗೆ ಬಂದಿದ್ದ ಕೆಲವರು, ಚೇತನ್ ಅವರನ್ನು ಕರೆದೊಯ್ದಿದ್ದಾರೆ. ಅವರಿಗೆ ಫೋನ್​ ಮಾಡಿದೆ. ಫೋನ್​ ರೀಚ್ ಆಗಲಿಲ್ಲ. ಸ್ವಿಚ್ ಆಫ್ ಬರ್ತಿದೆ. ಆಮೇಲೆ ಮನೆ ಸಿಬ್ಬಂದಿ ಹೇಳಿದ್ರು, ಪೊಲೀಸ್ ಬಂದು ಕರೆದುಕೊಂಡು ಹೋದ್ರು ಅಂತ. ಅವರ ಗನ್ ಮ್ಯಾನ್ ಕೂಡ ಇದ್ರು. ನಾನು ಮಿಸ್ಸಿಂಗ್ ಕಂಪ್ಲೇಂಟ್ ಕೊಡ್ತೀನಿ ಎಂದು ಸ್ಪಷ್ಟಪಡಿಸಿದರು.

 

ಪೊಲೀಸ್​ ಠಾಣೆಯಲ್ಲಿ ಚೇತನ್​ ಕುರಿತಂತೆ ಮಾಹಿತಿ ಕೇಳಿದರೇ ಯಾರು ಉತ್ತರ ಕೊಡುತ್ತಿಲ್ಲ. ಇಲ್ಲಿ ಪೊಲೀಸರು ನನಗೆ ಗೊತ್ತಿಲ್ಲ ಅಂತ ಹೇಳ್ತಿದ್ದಾರೆ. ನನ್ನ ಗಂಡ ಎಲ್ಲಿ ಹೋಗಿದ್ದಾರೆ ಅಂತಾ ಗೊತ್ತಾಗ್ತಾ ಇಲ್ಲ. ಯಾವ ಠಾಣೆ ಪೊಲೀಸರು ಚೇತನ್​ರನ್ನು ಕರೆದುಕೊಂಡು ಬಂದಿದ್ದಾರೆ ಎಂಬ ಮಾಹಿತಿ ಕೂಡ ನನಗೆ ಇಲ್ಲ. ನಮ್ಮ ಮನೆ ಶೇಷಾದ್ರಿಪುರಂ ಠಾಣೆ ವ್ಯಾಪ್ತಿಯಲ್ಲಿ ಬರೋ ಕಾರಣ ಇಲ್ಲಿಗೆ ಬಂದಿದ್ದೇನೆ. ನನಗೆ ಪೊಲೀಸರ ಮೇಲೆ ನಂಬಿಕೆ ಇದೆ. ಆದರೆ ಚೇತನ್​​​ರನ್ನು ಕರೆದುಕೊಂಡು ಹೋಗುತ್ತಿರುವ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ಕೂಡ ನೀಡಿಲ್ಲ. ಯಾವುದೇ ನೋಟಿಸ್ ಕೂಡ ನೀಡಿಲ್ಲ. ನನಗೆ ಮನೆಯ ಸಿಬ್ಬಂದಿ ಪೊಲೀಸರು ಕರೆದುಕೊಂಡು ಹೋದರು ಅಂದಾಗ ವಿಚಾರ ತಿಳಿಯಿತು ಎಂದು ವಿವರಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *