ನಮ್ಮ ದೇವರುಗಳ ಇತಿಹಾಸ ಪುಸ್ತಕ ಬಿಡುಗಡೆ

ಬೆಂಗಳೂರು: ದ್ವಂದ್ವಮುಖಿ ಪ್ರಕಾಶನ ಪ್ರಕಟಿಸಿರುವ ಹಾಗೂ ಎಂ.ಜಿ. ಗೋವಿಂದರಾಜು ರಚನೆಯ ʻನಮ್ಮ ದೇವರುಗಳ ಇತಿಹಾಸʼ – ಮೂರನೇ ಕಣ್ಣು ಕಂಡಂತೆ! ಪುಸ್ತಕ ಬಿಡುಗಡೆ ಸಮಾರಂಭ ಅಕ್ಟೋಬರ್‌ 3, 2021ರಂದು ನಡೆಯಲಿದೆ.

ಭಾನುವಾರ ಬೆಳಿಗ್ಗೆ 10.30ಕ್ಕೆ ನಗರದ ಪ್ರೆಸ್‌ ಕ್ಲಬ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಯನ್ನು ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ|| ಪ್ರಧಾನ್‌ ಗುರುದತ್ತ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮೈಸೂರಿನವರಾದ ದೇವಾಲಯ ವಾಸ್ತು ತಜ್ಞರಾದ ಎಂ.ಎನ್.‌ ಪ್ರಭಾಕರ್‌,  ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಗೌರವ ಕಾರ್ಯದರ್ಶಿ ಕೆ. ರಾಜಕುಮಾರ್‌ ಭಾಗವಹಿಸಲಿದ್ದಾರೆ.

ಕೃತಿ ಪರಿಚಯವನ್ನು ಕವಿ ಮತ್ತು ನಾಟಕಕಾರ ಎಲ್‌.ಎನ್.‌ ಮುಕುಂದರಾಜ್‌ ಮಾಡಲಿದ್ದು, ಟಿ.ಎಸ್.‌ ನಾಗರಾಜ ಶೆಟ್ಟಿ ಹಾಗೂ ಜಿ.ವಿ. ಅರುಣ ಉಪಸ್ಥಿತರಿರುವರು.

Donate Janashakthi Media

Leave a Reply

Your email address will not be published. Required fields are marked *