ಮೈಸೂರಿನಲ್ಲಿ ಸಿಪಿಐ(ಎಂ) ವತಿಯಿಂದ ಪರಿಹಾರ ಸಾಮಗ್ರಿ ವಿತರಣೆ

ಮೈಸೂರು: ಕೋವಿಡ್ ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ಜಟಕಾಬಂಡಿ ಓಡಿಸುವವರಿಗೆ(ಟಾಂಗಾವಾಲಗಳಿಗೆ) ಭಾರತ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ದಿನಬಳಕೆಯ ಅಗತ್ಯ ವಸ್ತುಗಳಿರುವ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.

ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ.ಬಸವರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಲ.ಜಗನ್ನಾಥ್, ಎನ್.ವಿಜಯ್‌ಕುಮಾರ್, ಜಯರಾಂ, ಜಗದೀಶ್ ಸೂರ್ಯ, ಚಿಂತಕರಾದ ನಾ.ದಿವಾಕರ, ಕಾರ್ಮಿಕ ಮುಖಂಡರಾದ ಬಸವಯ್ಯ, ಮೆಹಬೂಬ್ ಪಾಷಾ, ಬಲರಾಂ, ಸೋಮಶೇಖರ್, ಸಿ.ಆರ್.ಕೃಷ್ಣಮೂರ್ತಿ ಉಮಾಪತಿ, ಟಿ.ಎನ್.ರಾಜು, ಜಜಟಕಾಬಂಡಿಯ ಚಾಲಕರ ಮುಖಂಡರಾದ ಪ್ರಕಾಶ್, ದೌಲತ್ , ಸುರೇಶ್, ನೌಷದ್, ನಯಾಝ್, ಸಾದಿಕ್, ಅಕ್ರಂ ಮುಂತಾದವರಿದ್ದರು.

Donate Janashakthi Media

Leave a Reply

Your email address will not be published. Required fields are marked *