ಅವ್ವ – ಸಾವಿತ್ರಿಬಾಯಿ ಫುಲೆ

– ಆದಿತ್ಯ

ಅ ಆ ಕಾರಗಳ ಕಲಿಸಿದ
ಅವ್ವ, ಅನಂತ
ಕತ್ತಲೆಯ ಗೋಡೆಯೊಡೆದು
ಬಾಗಿಲ ನೆಟ್ಟೆ.
ಹುಳುಗಳೆದ್ದ ಹಾದಿಯಲೂ
ಹೆಜ್ಜೆಯಿಟ್ಟೆ.

ಕಲ್ಲೆಸೆದವರ ಕಣ್ಣಿಗೂ
ಬೆಳಕ ಕೊಟ್ಟು
ಅಕ್ಷರ ಹಂಚಿ
ಮುಚ್ಚಿದೆ ಗಾಯವ
ತಂದ ಜೋಡಿ ಬಟ್ಟೆಯಲಿ

ಇದನ್ನೂ ಓದಿ: ಪಾಠ ಕೇಳುತ್ತಿದ್ದ ಮಕ್ಕಳನ್ನು ಹೊರಗೆ ಕಳುಹಿಸಿ ಶಾಲೆ ತೆರವುಗೊಳಿಸಿದ ದಾವಣಗೆರೆ ಪಾಲಿಕೆ ಸಿಬ್ಬಂದಿ

ಮಣ್ಣು, ನಿಂದೆ, ರಕ್ತ , ಇವನೇ
ಆತ್ಮದ ಕಿಡಿಯಾಗಿಸಿ ಹೊಳೆದೆ
ಸಾತ್ವಿಕ ತೇಜದಿ..

ಅವ್ವ, ನಿನ್ನ ಕಣ್ಣುಗಳು
ಬಂಡಾಯವಲ್ಲ
ದಯೆಯ, ಆಶಾವಾದದ ಹಣತೆ

ಜಗ ಮರೆತರೂ
ದಾರಿ ಧೂಳಾಗದಂತೆ
ನಡೆಯುತ್ತಲೇ ಇರುವ ನಿರಂತರತೆ ನೀನು..
ದಾರಿ ದೀರ್ಘವಾಗಲಿ.. ಕಲಿಯಬೇಕಾದ ಕುಡಿಗಳು ತುಂಬಲಿ ದಾರಿಪೂರ..

ಇದನ್ನೂ ನೋಡಿ: ಕುವೆಂಪು ಜನ್ಮ ದಿನ | ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ – ಓದು : ಎಚ್.ವಿ. ನಟರಾಜ Janashakthi Media

Donate Janashakthi Media

Leave a Reply

Your email address will not be published. Required fields are marked *