ಭೂಸ್ವಾಧೀನ: ರೈತರ ಪ್ರತಿಭಟನಾ ಸ್ಥಳಕ್ಕೆ ಶಾಸಕ ಸತೀಶ್‌ ರೆಡ್ಡಿ ಭೇಟಿ

ನೇಕಲ್: ಭೂಸ್ವಾಧೀನ ವಿರೋಧಿಸಿ 51 ದಿನಗಳಿಂದ ರೈತರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನಾ ಸ್ಥಳಕ್ಕೆ ಆಗಸ್ಟ್‌ 28ರಂದು ಬೊಮ್ಮನಹಳ್ಳಿ ಶಾಸಕ ಸತೀಶ್‌ ರೆಡ್ಡಿ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು.

ಆನೇಕಲ್‌ ತಾಲ್ಲೂಕಿನ ಕೃಷಿ ಭೂಮಿಯ ಸ್ವಾಧೀನ ಹೆಚ್ಚಾಗಿದೆ. ಗೃಹ ಮಂಡಳಿ, ರಾಷ್ಟ್ರೀಯ ಹೆದ್ದಾರಿ, ರಿಂಗ್‌ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗೆ ಭೂಸ್ವಾಧೀನ ಮಾಡಲಾಗಿದೆ.

ಕೃಷಿ ಭೂಮಿಯನ್ನು ಕೆಐಎಡಿಬಿಗೆ ನೀಡಿದರೆ ರೈತರಿಗೆ ತೊಂದರೆಯಾಗುತ್ತದೆ. ಸರ್ಕಾರ ಈ ಬಗ್ಗೆ ಮರು ಪರಿಶೀಲನೆ ನಡೆಸಬೇಕು ಎಂದು ಸತೀಶ್‌ ರೆಡ್ಡಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಸಚಿವ ಶ್ರವಣ್‌ ಕುಮಾರ್‌ – ಶಾಸಕ ಕೃಷ್ಣ ಮುರಾರಿ ಶರಣ್‌ ಮೇಲೆ ಸಾರ್ವಜನಿಕರು ಹಲ್ಲೆ

ರೈತರ ಭೂಮಿಯನ್ನು ಯಾವುದೇ ಸರ್ಕಾರ ಸ್ವಾಧೀನ ಪಡಿಸಿಕೊಂಡರೂ ಅದು ತಪ್ಪೇ. ಭೂಸ್ವಾಧೀನಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕಾನೂನು ಹೋರಾಟ ಸೇರಿದಂತೆ ಎಲ್ಲಾ ರೀತಿಯ ಹೋರಾಟ ಮುಂದುವರೆಯಬೇಕು. ವಿಧಾನಸೌಧದಲ್ಲಿ ರೈತರ ಪರವಾಗಿ ಧ್ವನಿ ಎತ್ತುತ್ತೇವೆ. ಹೋರಾಟದಲ್ಲಿ ಯಾವುದೇ ರೀತಿಯ ರಾಜಿ ಆಗಬಾರದು. ರೈತರು ತಮ್ಮ ಭೂಮಿಯನ್ನು ಯಾವುದೇ ಕಾರಣಕ್ಕೂ ಕೈಗಾರಿಕೆಗಳಿಗೆ ನೀಡಬಾರದು ಎಂದರು.

ಸಚಿವ ಎಂ.ಬಿ.ಪಾಟೀಲ ಅವರನ್ನು ಭೇಟಿ ಮಾಡಿ ಭೂಸ್ವಾಧೀನ ಕೈಬಿಡುವಂತೆ ಮನವಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ರೈತರ ಸಮಸ್ಯೆ ಬಗ್ಗೆ ತಿಳಿಸಲಾಗುವುದು ಎಂದರು.

ಇಲ್ಲಿ ಐ.ಟಿ ಕೈಗಾರಿಕೆ ಸ್ಥಾಪಿಸಲು ಹೊರಟಿದ್ದಾರೆ. ಐ.ಟಿ ಪಾರ್ಕ್‌ ಸ್ಥಾಪಿಸಲು ನಂದಿಬೆಟ್ಟದ ಸಮೀಪ ಸಾಕಷ್ಟು ಜಾಗವಿದೆ. ರೈತರ ಆಕ್ರೋಶ ಹೆಚ್ಚಾಗುವ ಮುನ್ನ ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಅಭಿವೃದ್ಧಿಯ ಹೆಸರಿನಲ್ಲಿ ರೈತರ ಭೂಮಿ ಮತ್ತು ರೈತರ ಅಸ್ಮಿತೆಯನ್ನು ಹಾಳು ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ
ಎಂದರು.

ಎಸ್‌.ಆರ್‌.ಟಿ.ಅಶೋಕ್‌ ಮಾತನಾಡಿ ಆನೇಕಲ್‌ ತಾಲ್ಲೂಕಿನಲ್ಲಿರುವ ಕೈಗಾರಿಕ ಪ್ರದೇಶಗಳನ್ನು ಸರ್ಕಾರ ಅಭಿವೃದ್ಧಿ ಪಡಿಸಬೇಕು. ಈಗಾಗಲೇ ಐದು ಕೈಗಾರಿಕ ಪ್ರದೇಶಗಳಿವೆ. ಮತ್ತೊಂದು ಕೈಗಾರಿಕೆ ಮಾಡಿ ಈ ಭಾಗದ ರೈತರಿಗೆ, ಪರಿಸರಕ್ಕೆ ತೊಂದರೆ ಮಾಡಬಾರದು ಎಂದರು.

ರೆಡ್ಡಿ ಜನಸಂಘದ ರಾಜ್ಯ ನಿರ್ದೇಶಕ ಕೆ.ಸಿ.ಜಯಪ್ರಕಾಶ್‌, ದೊಡ್ಡಹಾಗಡೆ ಶಂಕರ್, ಚಿನ್ನಪ್ಪ ಚಿಕ್ಕಹಾಗಡೆ ದೇವರಾಜರೆಡ್ಡಿ, ಕೇಶವ, ಪುಷ್ಪಮ್ಮ, ಉಮಾ ಇದ್ದರು.

ಇದನ್ನೂ ನೋಡಿ: ಪಿಚ್ಚರ್‌ ಪಯಣ‌ – 161 – ‘ಸು ಫ್ರಾಮ್‌ ಸೋ’ ಜನಪ್ರಿಯತೆ ಏನನ್ನು ಸೂಚಿಸುತ್ತದೆ?.. ಕೆ.ಫಣಿರಾಜ್ Janashakthi Media

Donate Janashakthi Media

Leave a Reply

Your email address will not be published. Required fields are marked *