MLA Ravikumar Ganiga | ಮಂಡ್ಯ ಕಾಂಗ್ರೆಸ್ ಶಾಸಕ ರವಿಕುಮಾರ್ ಸ್ಪೋಟಕ ಹೇಳಿಕೆ

ದಾವಣಗೆರೆ: ಮಂಡ್ಯ ಕಾಂಗ್ರೆಸ್ ಶಾಸಕ ರವಿಕುಮಾರ್ ಗಾಣಿಗ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ರವಿಕುಮಾರ್, ಯಾರು ಸಮ್ಮಿಶ್ರ ಸರ್ಕಾರ ಕೆಡವಿದ್ರೊ ಅವರೇ ಮತ್ತೆ ಇದೀಗ ಕಾಂಗ್ರೆಸ್ ಶಾಸಕರನ್ನ ಸಂಪರ್ಕ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ  ಅವರ ಪಿಎ ಆಗಿದ್ದ ಸಂತೋಷ್ ಹೆಸರು ಹೇಳಿದರು.

ಕೆಲ ಶಾಸಕರ‌ನ್ನ ಭೇಟಿ ಮಾಡಿರುವ ವಿಡಿಯೋ ಮತ್ತು ಆಡಿಯೋ ನಮ್ಮ ಬಳಿ ಇದೆ. ಸೂಕ್ತ ಸಮಯದಲ್ಲಿ ಆಡಿಯೋ ಮತ್ತು ವಿಡಿಯೋಗಳನ್ನು ಮಾಧ್ಯಮಕ್ಕೆ ಬಿಡುಗಡೆಗೊಳಲಾಗುವುದು ಎಂದು ಶಾಸಕರು ಹೇಳಿದರು.

ದೆಹಲಿಗೆ ಬನ್ನಿ ವಿಶೇಷ ವಿಮಾನ ಇದೆ. ಅಲ್ಲಿ ಅಮಿತ್ ಶಾ ಅವರನ್ನು‌ ಭೇಟಿ ಮಾಡಿಸ್ತಿನಿ ಅಂತ ಹೇಳ್ತಾರೆ. ಅವನೊಬ್ಬ ಮೂರ್ಖ ಎಂದು ರವಿಕುಮಾರ್ ವಾಗ್ದಾಳಿ ನಡೆಸಿದರು. ಎಲ್ಲ ಶಾಸಕರನ್ನ ಸಂಪರ್ಕ ಮಾಡಿ ದೆಹಲಿಗೆ ಬರುವಂತೆ ಕರೆಯುತ್ತಿದ್ದಾರೆ. ಬರದಿದ್ದರೂ ಒತ್ತಾಯಿಸುತ್ತಿದ್ದು, ಆದರೆ ನಮ್ಮವರು ಯಾರೂ ಹೋಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: 20ಕ್ಕೂ ಅಧಿಕ ಶಾಸಕರೊಂದಿಗೆ ಮೈಸೂರಿಗೆ| ಸಚಿವ ಸತೀಶ್ ಜಾರಕಿಹೊಳಿ ನಡೆಗೆ ಹೈಕಮಾಂಡ್ ತಡೆ

ಡಿ.ಕೆ ಶಿವಕುಮಾರ್ ಸಿಎಂ ಆಗ್ತಾರೆ:

ಎರಡೂವರೆ ವರ್ಷದ ಬಳಿಕ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಅವರು ರಾಜ್ಯಾಧ್ಯಕ್ಷರಾಗಿ ಪಕ್ಷಕ್ಕಾಗಿ ದುಡಿದಿದ್ದಾರೆ. ಹೈಕಮಾಂಡ್ ನಲ್ಲಿ ಏನು ತೀರ್ಮಾನ ಆಗಿದೆಯೋ ಗೊತ್ತಿಲ್ಲ. ಆದರೆ ಸಿಎಂ ಆಗೋದು ಮಾತ್ರ ಖಚಿತ ಎಂದು ಹೇಳಿದರು.

ಈಗಿರುವ ಸಿಎಂ ಒಳ್ಳೆಯ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಸುಮ್ಮನೆ ಬಿಜೆಪಿಯವರು ಇಲ್ಲಸಲ್ಲದ ಹೇಳ್ಕೊಂಡು ಓಡಾಡುತ್ತಿದ್ದಾರೆ. ನಮ್ಮ ಸರ್ಕಾರ 5 ಕಲ್ಯಾಣ ಯೋಜನೆಗಳನ್ನ ಕೊಟ್ಟಿದ್ದು, ಜನರಿಗೆ ತಲುಪಿವೆ ಎಂದರು.

ಈ ಬಾರಿ ಲೋಕಸಭಾ ಚುನಾವಣೆ ವೇಳೆ ಮಂಡ್ಯದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಸಂಸದೆ ಸುಮಲತಾ ಅಂಬರೀಶ್ ನಮ್ಮ ಪಕ್ಷದಲ್ಲಿ ಇಲ್ಲ ಬಿಜೆಪಿಗೆ ಹೋಗಿದ್ದಾರೆ. ಹಾಗಾಗಿ ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ಹೇಳಿದರು.

ಉಳಿದವರನ್ನು ಹಿಡ್ಕೊಂಡು ಬರಬೇಕು:

ಇದೇ ವೇಳೆ ಹುಲಿ ಉಗುರು ವಿಚಾರಕ್ಕೆ ಪ್ರತಿಕ್ರಿಯಿಸಿದ ರವಿಕುಮಾರ್ ಗಾಣಿಗ, ರೈತ ಸಂತೋಷ್ ವರ್ತೂರು ಅಮಾಯಕ ಹುಡುಗನಾಗಿದ್ದು ಬಿಗ್​ಬಾಸ್​ ಮನೆಯಲ್ಲಿದ್ದವನನ್ನು ಹಿಡಿದುಕೊಂಡು ಬರಲಾಗಿದೆ. ಅದೇ ರೀತಿ ಉಳಿದವರನ್ನು ಹಿಡ್ಕೊಂಡ ಬರಬೇಕು ಎಂದು ಆಗ್ರಹಿಸಿದರು.

ಅಮಾಯಕರನ್ನು ಹಿಡಿದು ಒಳಗಡೆ ಹಾಕುವುದು ತಪ್ಪು ಎಂದ ಶಾಸಕರು, ಅವನೊಬ್ಬ ರೈತ ಅವನಿಗೆ ಕಾನೂನು ಅರಿವು ಇತ್ತೋ ಇಲ್ಲ ಎಂಬುವುದು ಗೊತ್ತಿಲ್ಲ. ಜಗ್ಗೇಶ್, ದರ್ಶನ್, ರಾಕ್​​ಲೈನ್ ವೆಂಕಟೇಶ್ ಸೇರಿದಂತೆ ಉಳಿದವರನ್ನು ಬಂಧಿಸಿ. ರೈತರಿಗೊಂದು, ಸೆಲೆಬ್ರಿಟಿಗೆ ಒಂದು ನ್ಯಾಯ ಆಗಬಾರದು ಎಂದು ಹೇಳಿದರು.

ವಿಡಿಯೋ ನೋಡಿ:ವಿಷವಟ್ಟಿ ಸುಡುವಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ಪುಸ್ತಕ ಕುರಿತು ದಲಿತ ನಾಯಕ ಮಾವಳ್ಳಿ ಶಂಕರ್‌ ಮಾತುಗಳು

Donate Janashakthi Media

Leave a Reply

Your email address will not be published. Required fields are marked *