ಮಣಿಪುರ ಹಿಂಸಾಚಾರ: ತಂದೆ ಮಗ ಸೇರಿದಂತೆ ಮೂವರು ಹತ್ಯೆ

ಇಂಫಾಲ:  ಶುಕ್ರವಾರ ಮಧ್ಯರಾತ್ರಿ ನಡೆದ ಹಿಂಸಾಚಾರದಲ್ಲಿ ತಂದೆ ಮಗ ಸೇರಿದಂತೆ ಮೂವರು ಹತ್ಯೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ವಿಷ್ಣುಪುರ ಜಿಲ್ಲೆಯ ಕ್ವಾಕ್ಟಾದಲ್ಲಿ ಈ  ಘಟನೆ ನಡೆದಿದೆ.

ಚುರಾಚಂದ್‌ಪುರದಿಂದ ಬಂದಿದ್ದ ಬಂಡುಕೋರರು ಮಲಗಿದ್ದ ಮೂವರಿಗೆ ಗುಂಡೇಟು ಹಾರಿಸಿ ಕತ್ತಿಯಿಂದ ಕಡಿದು ಅಮಾನುಷವಾಗಿ ಹತ್ಯೆ ಮಾಡಿದ್ದಾರೆ.

ಕೊಲೆಯಾದ ಮೂವರು ಪರಿಹಾರ ಶಿಬಿರದಲ್ಲಿ ಇರುತ್ತಿದ್ದರು. ಜಿಲ್ಲೆ ಮತ್ತು ಇಡೀ ರಾಜ್ಯದಲ್ಲಿ ಪರಿಸ್ಥಿತಿ ಸ್ವಲ್ಪ ಶಾಂತವಾಗಿದೆ ಎಂದು ತಿಳಿದ ನಂತರ ನಿನ್ನೆ ಕ್ವಾಕ್ಟಾದಲ್ಲಿನ ತಮ್ಮ ನಿವಾಸಗಳಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಇದನ್ನೂ ಓದಿ:ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ | ರಾಷ್ಟ್ರಪತಿಗೆ ವರದಿ ಸಲ್ಲಿಸಿದ ದೆಹಲಿ ಮಹಿಳಾ ಆಯೋಗ

ಘಟನೆಯ ಬಳಿಕ ಉದ್ರೀಕ್ತಗೊಂಡ ಗುಂಪೊಂದು ಚುರಾಚಂದ್‌ಪುರಕ್ಕೆ ಹೋಗಲು ಅಣಿಯಾಗಿದ್ದು ಗುಂಪನ್ನು ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಫೌಗಕ್ಚಾವೊ ಮತ್ತು ಕ್ವಾಕ್ಟಾದ ಸುತ್ತಮುತ್ತ ಪರಿಸ್ಥಿತಿ ಬಿಗಾಡಿಸುತ್ತಿದ್ದು,ಭದ್ರತಾ ಸಿಬ್ಬಂದಿ ಮತ್ತು ಬಂಡುಕೋರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ.

Donate Janashakthi Media

Leave a Reply

Your email address will not be published. Required fields are marked *