ಮಾನವೀಯತೆ ಮರೆತ ಬ್ಯಾಂಕ್: ಸಾಲ ಮರುಪಾವತಿ ಮಾಡಲ್ಲವೆಂದು 35 ಮನೆಗಳಿಗೆ ಬೀಗ ಜಡಿದಿದೆ

ತುಮಕೂರು: ಸಾಲ ಮರುಪಾವತಿ ಮಾಡಿಲ್ಲವೆಂದು ರಾತ್ರೋರಾತ್ರಿ ಬ್ಯಾಂಕ್​ ಸಿಬ್ಬಂದಿ 35 ಮನೆಗಳಿಗೆ ಬೀಗ ಜಡಿದು, ಮನೆಗಳನ್ನು ಜಪ್ತಿ ಮಾಡಿರುವ ಘಟನೆ ನಗರದ ಬನಶಕರಿ ನಗರದಲ್ಲಿ ನಡೆದಿದೆ.

ಕೆನರಾ ಬ್ಯಾಂಕ್ ಹಾಗೂ ಮಹಿಳಾ ಕೋ ಆಪರೇಟಿವ್ ಬ್ಯಾಂಕ್ ಅಧಿಕಾರಿಗಳು ಮನೆ ಜಪ್ತಿ​ ಮಾಡಿದ್ದಾರೆ. ಸಾಲ ಪಾವತಿ ಮಾಡಿಲ್ಲವೆಂದು ಆರೋಪಿಸಿ ಮನೆ ಮಾಲೀಕರು ಸೇರಿದಂತೆ ಬಾಡಿಗೆ ಮನೆಯಲ್ಲಿದ್ದವರನ್ನೂ ಸಹ ಸತತವಾಗಿ ಸುರಿಯುತ್ತಿರುವ ಮಳೆಯ ನಡುವೆಯೇ ಹೊರಗೆ ದಬ್ಬಿ ಮನೆಗೆ ಬೀಗ ಹಾಕಿರುವ ಘಟನೆ ನಡೆದಿದೆ.

ಹಣ ಕಟ್ಟಲು ಬ್ಯಾಂಕಿಗೆ ಹೋದರೂ ಸಹ ಕಟ್ಟಿಸಿಕೊಳ್ಳದೆ ಬೇಕು ಅಂತಾನೆ ಹೀಗೆ ಮಾಡಿದ್ದಾರೆ ಎಂದು ಮನೆ ಮಾಲೀಕರು‌ ಆರೋಪ ಮಾಡಿದ್ದಾರೆ. ಮಕ್ಕಳು,‌ ಮಹಿಳೆಯರು, ವೃದ್ಧರು ಅನಾರೋಗ್ಯ ಪೀಡಿತರು ಅಂತಾನೂ ನೋಡದೇ ಬ್ಯಾಂಕ್ ಅಧಿಕಾರಿಗಳು ಕಗ್ಗತ್ತಲಲ್ಲಿ ಹೊರಹಾಕಿ ಕ್ರೌರ್ಯ ಮರೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *