ಮಾದರಿ ಎಂ.ಎಸ್‍.ಪಿ.  ಮಸೂದೆಯನ್ನು  ಪ್ರಸ್ತುತಪಡಿಸಿದ ಅಖಿಲ ಭಾರತ ಕಿಸಾನ್‍ ಸಭಾ

ದೆಹಲಿ : ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂ.ಎಸ್‌.ಪಿ.) ಕುರಿತಂತೆ ಒಂದು ಕಾನೂನು ಬೇಕೆಂಬ ರೈತರ ಆಗ್ರಹವನ್ನು ಅಖಿಲ ಭಾರತ ಕಿಸಾನ್ ಸಭಾ(ಎ.ಐ.ಕೆ.ಎಸ್.) ಒಂದು ಹೆಜ್ಜೆ ಮುಂದಕ್ಕೆ ಒಯ್ದಿದೆ. ಫೆಬ್ರುವರಿ 19ರಂದು ಪತ್ರಿಕಾಗೋಷ್ಠಿಯಲ್ಲಿ ಅದು ಸ್ವಾಮಿನಾಥನ್ ಆಯೋಗದ. ಶಿಫಾರಸುಗಳಿಗೆ ಅನುಗುಣವಾಗಿ ಉತ್ಪಾದನಾ ವೆಚ್ಚಕ್ಕಿಂತ 50% ಹೆಚ್ಚುವರಿಯನ್ನು ಖಚಿತಪಡಿಸುವ ಮತ್ತು ಎಂ.ಎಸ್‌.ಪಿ ಉಲ್ಲಂಘನೆಯನ್ನು ಅಪರಾಧವನ್ನಾಗಿ ಮಾಡುವ ಒಂದು ಮಾದರಿ ಎಂಎಸ್‌ಪಿ ಮಸೂದೆಯನ್ನು ಬಿಡುಗಡೆ ಮಾಡಿದೆ.

ಮೂರು ಕೃಷಿ ಕಾಯ್ದೆಗಳ ವಿರುದ್ಧ  ಮತ್ತು ಎಂಎಸ್‌ಪಿಯ ಕಾನೂನು ಖಾತರಿಯ ಬೇಡಿಕೆಯೊಂದಿಗೆ ಸುಮಾರು ಮೂರು ತಿಂಗಳಿಂದ ದಿಲ್ಲಿಯ ಗಡಿಗಳಿಂದ  ರೈತರು ನಡೆಸಿರುವ ಆಂದೋಲನದ ನಡುವೆ ಪ್ರಸ್ತುತ ಪಡಿಸಿರುವ  ಈ ಮಸೂದೆಯು ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಮತ್ತು ಫಲದಾಯಕ ಬೆಲೆಯನ್ನು ಖಚಿತಪಡಿಸುತ್ತದೆ. ಇದು ಎಂ.ಎಸ್‌.ಪಿ.ಯನ್ನು ಸಮಗ್ರ ವೆಚ್ಚ (ಸಿ 2) ಕ್ಕೆ 50% ವನ್ನು ಸೇರಿಸುತ್ತದೆ. ಡಾ. ಎಂ.ಎಸ್. ಸ್ವಾಮಿನಾಥನ್ ನೇತೃತ್ವದ ರೈತರ ರಾಷ್ಟ್ರೀಯ ಆಯೋಗವು ಎಂ.ಎಸ್‌.ಪಿ. ಗೆ 50% + ಸಿ 2 ಸೂತ್ರವನ್ನು ಶಿಫಾರಸು ಮಾಡಿತ್ತು. ಇಲ್ಲಿ, ಸಿ 2 ಕುಟುಂಬ ಶ್ರಮ, ಸ್ವಂತ ಜಮೀನಿನ ಬಾಡಿಗೆ ಮತ್ತು ಸ್ವಂತ ಬಂಡವಾಳದ ಮೇಲಿನ ಬಡ್ಡಿಯ ಅಂಶಗಳನ್ನು ಒಳಗೊಂಡಿದೆ.

ಪ್ರಸಕ್ತ ಬಜೆಟ್ ಅಧಿವೇಶನದ ಎರಡನೇ ಭಾಗದಲ್ಲಿ ಮಸೂದೆಯನ್ನು ಖಾಸಗಿ ಸದಸ್ಯರ ಮಸೂದೆಯಾಗಿ ಸಂಸತ್ತಿನಲ್ಲಿ ಮಂಡಿಸಬೇಕೆಂದಿದ್ದೇವೆ ಎಂದು   ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಎ.ಐ.ಕೆ.ಎಸ್. ಮುಖಂಡರು ತಿಳಿಸಿದ್ದಾರೆ.

ಇದನ್ನೂ ಓದಿ : ಎಂಎಸ್‌ಪಿ ಎಂಬೊಂದು ತಮಾಷೆ-ಕನಿಷ್ಟ ಏರಿಕೆ, ಗರಿಷ್ಟ ಸದ್ದು

ಪ್ರಧಾನಿಗಳಿಂದ ದಾರಿ ತಪ್ಪಿಸುವ ಪ್ರಯತ್ನ : ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ಮಾತನಾಡಿದ ಪ್ರಧಾನಿ, ಪ್ರತಿಭಟನಾ ನಿರತ ರೈತರು ಸುಧಾರಣೆಗೆ ಸಿದ್ಧರಿಲ್ಲ ಮತ್ತು ಯಥಾಸ್ಥಿತಿ ಕಾಯ್ದುಕೊಳ್ಳಬಯಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕಿಂತ ಸತ್ಯದೂರವಾದ ಮಾತು  ಇನ್ನೇನೂ ಇರಲಿಕ್ಕಿಲ್ಲ ಎಂದಿರುವ  ಈ ಸಂದರ್ಭದಲ್ಲಿ ಎ.ಐ.ಕೆ.ಎಸ್‍. ಪ್ರಕಟಿಸಿರುವ ಪತ್ರಿಕಾ ಹೇಳಿಕೆ, ರೈತರು ವಿರೋಧಿಸುತ್ತಿರುವುದು  ಕಾರ್ಪೊರೇಟ್ ಪರ ಸುಧಾರಣೆಗಳನ್ನೇ  ಹೊರತು ಒಟ್ಟು ಕೃಷಿ ಸುಧಾರಣೆಗಳನ್ನಲ್ಲ ಎಂದು ಸ್ಪಷ್ಟಪಡಿಸಿದೆ.  ಕಾರ್ಪೊರೇಟ್ ಪರವಾದ ಪಕ್ಷಪಾತದಿಂದಾಗಿ ಪ್ರಧಾನಿ ಉದ್ದೇಶಪೂರ್ವಕವಾಗಿ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅದು ಹೇಳಿದೆ.

ಜನರನ್ನು ದಾರಿ ತಪ್ಪಿಸುವ ಉದ್ದೇಶಪೂರ್ವಕ ಅಭಿಯಾನದ ಒಂದು ಭಾಗ. ‘ಎಂ.ಎಸ್‌.ಪಿ.ಇತ್ತು, ಇದೆ ಮತ್ತು ಇರುತ್ತದೆ’ ಎಂದು ಪ್ರಧಾನ ಮಂತ್ರಿಗಳು ಟಿಪ್ಪಣಿ ಮಾಡಿದ್ದರು. ನರೇಂದ್ರ ಮೋದಿ ಮತ್ತು ಬಿಜೆಪಿ 2014 ರ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಉತ್ಪಾದನಾ ವೆಚ್ಚದ ಮೇಲೆ  50% ಲಾಭವನ್ನು ಖಾತರಿಪಡಿಸುವ ಮೂಲಕ ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಎಂ.ಎಸ್‍.ಪಿ.ಯ ವಚನ ನೀಡಿದ್ದರು.  . ಕಳೆದ 7 ವರ್ಷಗಳ ಅಧಿಕಾರಾವಧಿಯಲ್ಲಿ, ಪ್ರಧಾನಿ ಈ ಭರವಸೆಯನ್ನು ಜಾರಿಗೆ ತಂದಿಲ್ಲ ಮತ್ತು ಆದ್ದರಿಂದ ನಡೆಯುತ್ತಿರುವ ರೈತರ ಹೋರಾಟಕ್ಕೆ ನೇರವಾಗಿ ಕಾರಣವಾಗಿದೆ.

ಇದನ್ನೂ ಓದಿ: ಅಂಬಾನಿ ಕಂಪನಿ ಭತ್ತಕ್ಕೆ ಎಂ.ಎಸ್‍.ಪಿ.ಗಿಂತ ಹೆಚ್ಚುಕೊಡುತ್ತಿದೆಯೇ?

ಎ 2 + ಎಫ್ಎಲ್ ಲೆಕ್ಕಾಚಾರದ ಆಧಾರದ ಮೇಲೆ ಅಸ್ತಿತ್ವದಲ್ಲಿರುವ ಎಂ.ಎಸ್‍.ಪಿ. ದರವು ಫಲದಾಯಕ ಬೆಲೆಯನ್ನು ಒದಗಿಸುವುದಿಲ್ಲ. ಅಲ್ಲದೆ ಬಹುಪಾಲು ರೈತರು ಇಂತಹ ಎಂ.ಎಸ್‌.ಪಿ. ದರಕ್ಕಿಂತಲೂ ಕಡಿಮೆ ದರಗಳಲ್ಲಿ ಮಾರಾಟ ಮಾಡಬೇಕಾಗಿ ಬರುತ್ತಿದೆ. , ಇದರಿಂದಾಗಿ ಎಂ.ಎಸ್‌.ಪಿ. ಬಹುಪಾಲು ರೈತರಿಗೆ ಕೇವಲ ಕನಸೇ ಆಗುಳಿದಿದೆ.. ಉದಾಹರಣೆಗೆ ಭತ್ತಕ್ಕೆ ಎಂ.ಎಸ್‌.ಪಿ. ದರ ಕ್ವಿಂಟಲ್‌ಗೆ 1868 ರೂ. ಆದರೆ ಬಿಹಾರ, ಜಾರ್ಖಂಡ್ ಮತ್ತು ಇತರ ಹಲವು ರಾಜ್ಯಗಳ ರೈತರಿಗೆ ಕ್ವಿಂಟಲ್‌ಗೆ 800 ರಿಂದ 1200 ರೂ. ಆದರೆ ಕೇರಳದ ಎಲ್‌.ಡಿ.ಎಫ್. ಸರ್ಕಾರವು ಸಹಕಾರಿ ವಲಯದ ಬೆಂಬಲದೊಂದಿಗೆ ಭತ್ತಕ್ಕಾಗಿ ಕ್ವಿಂಟಲ್‌ಗೆ 2850 ರೂ.ನ ಖಾತರಿ ಕೊಟ್ಟಿದೆ ಎಂಬುದು ಗಮನಾರ್ಹ ಎನ್ನುತ್ತದೆ ಎ.ಐ.ಕೆ.ಎಸ್‍. ಹೇಳಿಕೆ.

ಹೆಚ್ಚುವರಿ ಗಳಿಕೆಯ ಪ್ರಯೋಜನ ಪಾರ್ಪೊರೇಟ್‍ಗಳಿಗೇ : ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಿಂದ ಸೃಷ್ಟಿಯಾದ ಹೆಚ್ಚುವರಿ ಗಳಿಕೆಯ ಪ್ರಯೋಜನವನ್ನು  ಕಂಪನಿಗಳು ತೆಗೆದುಕೊಳ್ಳುತ್ತವೆ ಎಂದು ಎ.ಐ.ಕೆ.ಎಸ್‍. ಪ್ರಧಾನ ಕಾರ್ಯದರ್ಶಿ  ಹನ್ನನ್ ಮೊಲ್ಲಾ ಮತ್ತು ಅಧ್ಯಕ್ಷ ಅಶೋಕ್ ಧವಳೆ ಹೇಳಿದ್ದಾರೆ. ಬಾಸ್ಮತಿ ಭತ್ತದ ಉದಾಹರಣೆಯನ್ನು ಉಲ್ಲೇಖಿಸಿ, ರೈತರು ಬಾಸ್ಮತಿ ಭತ್ತಕ್ಕೆ ಮಧ್ಯವರ್ತಿಗಳಿಂದ ಕಿಲೋಗ್ರಾಂಗೆ 18 ರಿಂದ 30 ರೂ.ಗಳನ್ನು ಪಡೆದರೆ, ಅದಾನಿ ಗುಂಪಿನ ಬ್ರಾಂಡೆಡ್ ಫಾರ್ಚೂನ್ ವಿಶೇಷ ಬಾಸ್ಮತಿ ಅಕ್ಕಿಯನ್ನು ಪ್ರತಿ ಕಿಲೋಗೆ 208 ರೂ.ಗೆ, ಮಾರಾಟ ಮಾಡಲಾಗುತ್ತಿದೆ. ಇತರ  ಕೆಲವು ಬ್ರಾಂಡ್‌ಗಳು ಕಿಲೋಗೆ 700 ರಿಂದ 2200 ರೂ.ಗೆ ಮಾರಾಟವಾಗುತ್ತಿವೆ ಎಂದು ಅವರು ಹೇಳಿದರು.

ಇದೇ ರೀತಿ,  ಕಾಫಿ ಬೆಳೆಯುವ ಪ್ರದೇಶಗಳಲ್ಲಿ  ರೈತರು ಕಾಫಿ ಬೀಜಗಳಿಗೆ ಕಿಲೋಗೆ 120 ರಿಂದ 130 ರೂ. ಪಡೆದರೆ,  ಕಾರ್ಪೊರೇಟ್ ವಲಯವು ಇನ್‍ಸ್ಟಂಟ್ ಕಾಫಿ ಪುಡಿಯನ್ನು ಕಿಲೋಗೆ ಸರಾಸರಿ 3000 ರೂ.ಗೆ ಮಾರುತ್ತಿದೆ. ಕೆಲವು ಬ್ರಾಂಡ್‌ಗಳ, ಉದಾ: ನೆಸ್ಲೆ ಬ್ಲೆಂಡ್ 37 ಮತ್ತು ನೆಸ್ಕ್ಯಾಫ್ ಗೋಲ್ಡ್ ಆರ್ಗ್ಯಾನಿಕ್ ಅನ್ನು ಕೆಲವು ತಿಂಗಳ ಹಿಂದೆ ಸುಮಾರು 12,000 / ಕೆ.ಜಿ.ಗೆ ಮಾರಾಟ ಮಾಡಲಾಗುತ್ತಿತ್ತು, ಈಗಲೂ ಸಹ ರೂ .8,000 ದಿಂದ 10,000 ಗೆ ಮಾರಾಟವಾಗುತ್ತಿವೆ ಎಂಬ ಸಂಗತಿಯತ್ತ ಗಮನ ಸೆಳೆಯುತ್ತ ಎ.ಐ.ಕೆ.ಎಸ್. ಪತ್ರಿಕಾ ಹೇಳಿಕೆ,ಕಾರ್ಪೊರೇಟ್ ವಲಯ ಮತ್ತು ಮಾರುಕಟ್ಟೆಯಲ್ಲಿ ಅವರ ಮಧ್ಯವರ್ತಿಗಳ ಈ ರೀತಿಯ ಲೂಟಿ ಮತ್ತು ಶೋಷಣೆ ರೈತ ಕುಟುಂಬಗಳ ಮೇಲೆ ಹೊರಿಸಿರುವ ಸಾಲಗಳ ಹೊರೆ ದೊಡ್ಡ ಪ್ರಮಾಣದಲ್ಲಿ ರೈತ ಆತ್ಮಹತ್ಯೆಗಳಿಗೆ ಒಂದು ಪ್ರಮುಖ ಕಾರಣವಾಗಿದೆ ಎಂದಿದೆ.  ಪ್ರತಿ ಗಂಟೆಗೆ ಇಬ್ಬರು ರೈತರು ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಮತ್ತು ದಿನಕ್ಕೆ 2468 ರೈತರು ಕೃಷಿಯನ್ನು ತ್ಯಜಿಸಬೇಕಾಗಿ ಬರುತ್ತಿದೆ ಎಂದು ಅದು ಹೇಳಿದೆ.

ರೈತರಿಂದ ಉತ್ಪನ್ನಗಳನ್ನು ಸಂಗ್ರಹಿಸುವ  ಘಟಕಗಳು ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ಸಂಸ್ಕರಣೆ ಮತ್ತು ಮೌಲ್ಯವರ್ಧಿತ ಗ್ರಾಹಕ ಉತ್ಪನ್ನಗಳ ಮಾರಾಟದಿಂದ ತಮ್ಮ ವ್ಯವಹಾರಗಳನ್ನು ನಡೆಸುತ್ತವೆ ಮತ್ತು ಲಾಭ ಗಳಿಸುತ್ತವೆ. ಆದ್ದರಿಂದ ಸಿ 2 + 50% ಸೂತ್ರದಂತೆ ಖರೀದಿಸುವ  ಪ್ರಾಥಮಿಕ ಜವಾಬ್ದಾರಿ ಅವುಗಳ ಮೇಲೆ ಇರುತ್ತದೆ.  ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತಾಡುತ್ತ  ಎ.ಐ.ಕೆ.ಎಸ್‍.  ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲಾ, ಎಂ.ಎಸ್‍.ಪಿ.ಗೆ ಖಾತರಿ ನೀಡುವ ಕಾನೂನನ್ನು ಜಾರಿಗೊಳಿಸಬೇಕು ಎಂದರೆ  ಸರ್ಕಾರವು ಇದರ ಸಂಪೂರ್ಣ ಆರ್ಥಿಕ ಹೊಣೆಯನ್ನು ಹೊರಬೇಕಾಗುತ್ತದೆ ಎಂದೇನಿಲ್ಲ ಎಂದರು. ರೈತರಿಂದ ಖರೀದಿಸುವ ಯಾರಾದರೂ, ಅದು ಸರ್ಕಾರ ಅಥವಾ ಒಬ್ಬ ಖಾಸಗಿ ವ್ಯಾಪಾರಿ ಆಗಿರಬಹುದು,  ಎಂ.ಎಸ್‌.ಪಿ. ಕಾನೂನು ಉತ್ಪಾದಕರೊಂದಿಗೆ ಕೆಲವು ಶೇಕಡಾವನ್ನು ಹಂಚಿಕೊಳ್ಳಲು ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಎ.ಐ.ಕೆ.ಎಸ್. ಹೇಳಿದೆ. ಘೋಷಿತ ಕನಿಷ್ಠ ಬೆಲೆಯನ್ನು ಪಾವತಿಸಬೇಕೆಂದು ವಿಧಿಸಬೇಕು. ಆದರೆ ಸರ್ಕಾರವು ಅಂತಹ ಕಾನೂನನ್ನು ತರಲು ಬಯಸುವುದಿಲ್ಲ, ಏಕೆಂದರೆ ಅದು ಕಾರ್ಪೊರೇಟ್ ಸಂಸ್ಥೆಗಳಿಗೆ ಗರಿಷ್ಟ ಲಾಭಗಳನ್ನು  ಖಚಿತಪಡಿಸಿಕೊಳ್ಳ ಬಯಸುತ್ತದೆ  ಎಂದು ಅವರು ಆರೋಪಿಸಿದರು.

ಎಂ.ಎಸ್‍.ಪಿ. ಮುಂದುವರಿಯುವ ಬಗ್ಗೆ ಸರ್ಕಾರದ ಮೌಖಿಕ ಭರವಸೆಯ ಕುರಿತು ಟಿಪ್ಪಣಿ ಮಾಡುತ್ತ ಹನ್ನನ್ ಮೊಲ್ಲಾ, “ನಾವು ಇದನ್ನು ಏಕೆ ಸ್ವೀಕರಿಸಬೇಕು? 90% ಕ್ಕಿಂತ ಹೆಚ್ಚು ರೈತರು ಎಂ.ಎಸ್‍.ಪಿ. ಪಡೆಯುವುದಿಲ್ಲ ಮತ್ತು ಅವರು ತಮ್ಮ ಉತ್ಪನ್ನಗಳನ್ನು ಸ್ಥಳೀಯ ವ್ಯಾಪಾರಿಗಳಿಗೆ ಮೂರನೇ ಒಂದು ಬೆಲೆಗೆ ಮಾರಾಟ ಮಾಡಬೇಕಾಗಿ ಬರುತ್ತಿದೆ ” ಎಂದರು. “ಸರ್ಕಾರ ಮತ್ತು ಅದರ ‘ಉನ್ನತ ಬುದ್ಧಿಜೀವಿಗಳು’ ಕೇವಲ 6% ರೈತರು ಮಾತ್ರ ಎಂ.ಎಸ್‍.ಪಿ. ಪಡೆಯುತ್ತಾರೆ ಎಂಬ ಅಂಶವನ್ನು ಮರೆಮಾಚುತ್ತಿದ್ದಾರೆ.  “ಎಂ.ಎಸ್‍.ಪಿ.  ಇಲ್ಲದೆ, ರೈತರು ಕಳೆದುಕೊಳ್ಳುತ್ತಿದ್ದಾರೆ ಮತ್ತು ಕಳೆದುಕೊಳ್ಳುತ್ತಿದ್ದಾರೆ, ಮತ್ತು ನಂತರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ” ಎಂದ ಅವರು ಸರಕಾರ  23 ಬೆಳೆಗಳಿಗೆ ಎಂ.ಎಸ್‍.ಪಿ. ಘೋಷಿಸುತ್ತದೆ, ಅಧರೆ   ಕೇವಲ ಎರಡನ್ನು – ಭತ್ತ ಮತ್ತು ಗೋಧಿಯನ್ನಷ್ಟೇ  ಖರೀದಿಸುತ್ತದೆ ಎಂಬ ಸಂಗತಿಯತ್ತವೂ ಗಮನ ಸೆಳೆದರು

ಮಾದರಿ ಮಸೂದೆ ಏನು ಹೇಳುತ್ತದೆ? : ಎಂ.ಎಸ್‌.ಪಿ.ಮಟ್ಟವನ್ನು ನಿಗದಿ ಪಡಿಸುವುದರ ಜೊತೆಗೆ ಈ ಮಾದರಿ ಮಸೂದೆ  “ಕಾಲಕಾಲಕ್ಕೆ ಎಲ್ಲಾ  ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಉಸ್ತುವಾರಿ ಮಾಡುವ  ಮತ್ತು ನಿಗದಿಪಡಿಸುವ ಒಂದು ಅಧಿಕಾರ ವ್ಯವಸ್ಥೆಯನ್ನು ಖಾತ್ರಿಪಡಿಸಲಾಗುತ್ತದೆ ” ಎನ್ನುತ್ತದೆ. ಎಂ.ಎಸ್‍.ಪಿ. ಗಿಂತ ಕಡಿಮೆ ದರದಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸುವುದು ಅಪರಾಧವೆಂದು ಪರಿಗಣಿಸಬೇಕು ಎಂದು ಅದು ಹೇಳಿದೆ.

“ಪ್ರಾಥಮಿಕ ಕೃಷಿ ಸ್ವಸಹಾಯ ಗುಂಪುಗಳಿಗೆ” ಕೃಷಿ ಉತ್ಪನ್ನಗಳನ್ನು ಎಂ.ಎಸ್‌.ಪಿ. ದರಗಳಲ್ಲಿ ಪೂರೈಸುವ ಸಲುವಾಗಿ ಕಾರ್ಮಿಕರು ಮತ್ತು ರೈತರ ಸಾಮಾಜಿಕ ಸಹಕಾರ ಸಂಘಗಳನ್ನು ರಚಿಸಲು  ಈ ಮಾದರಿ ಎಂ.ಎಸ್‌.ಪಿ. ಮಸೂದೆ ಸೂಚಿಸುತ್ತದೆ. ಪ್ರಾಥಮಿಕ ಕೃಷಿ ಉತ್ಪನ್ನಗಳಿಂದ ಸಂಸ್ಕರಿಸಿದ ಮೌಲ್ಯವರ್ಧಿತ ಉತ್ಪನ್ನಗಳಿಂದ ಗಳಿಸಿದ ಹೆಚ್ಚುವರಿ ಆದಾಯಗಳಿಂದ ಒಂದು ನಿರ್ದಿಷ್ಟ ಶೇಕಡಾವನ್ನು ರೈತರಿಗೆ ಹೆಚ್ಚುವರಿ ಬೆಲೆಯಾಗಿ ನೀಡುವ ಯೋಜನೆಯನ್ನು ರಚಿಸಲು ಕೂಡ ಮಸೂದೆಯು ಶಿಫಾರಸು ಮಾಡಿದೆ.

ರೈತರ ಸ್ವಸಹಾಯ ಗುಂಪುಗಳನ್ನು ರಚಿಸಬೇಕು ಎಂದು  ಈ ಮಾದರಿ ಮಸೂದೆ ಶಿಫಾರಸು ಮಾಡುತ್ತದೆ. ಸ್ಥಳೀಯ ಸಂಸ್ಥೆಗಳ ಕನಿಷ್ಟ 20 ಮತ್ತು ಗರಿಷ್ಟ 40 ರೈತರನ್ನೊಳಗೊಂಡ  ಸ್ವಸಹಾಯ ಗುಂಪುಗಳನ್ನು ಆಯಾ ‘ಬ್ಲಾಕ್ ಕೃಷಿ ಸಾಮಾಜಿಕ ಸಹಕಾರೀ ಸಂಸ್ಕರಣ ಮತ್ತು ಮಾರುಕಟ್ಟೆ ಕೇಂದ್ರ’ ಗಳ ಮಂಜೂರಾತಿ ಮತ್ತು ನಿರ್ದೇಶನದಲ್ಲಿ  ಇವನ್ನು ರಚಿಸಬೇಕು ಎಂದು ಅದು ಸೂಚಿಸಿದೆ.

ರೈತರು ಮತ್ತು ಇತರರ ಕೊಡುಗೆಯೊಂದಿಗೆ ಮತ್ತು ವಿವಿಧ ಸರಕಾರೀ ಯೋಜನೆಗಳು, ಸರ್ಕಾರದ ಖಾತರಿಯೊಂದಿಗೆ ಹಣಕಾಸು ಸಂಸ್ಥೆಗಳಿಂದ ಬಡ್ಡಿರಹಿತ ಸಾಲ ಮತ್ತು ಸಾಮಾಜಿಕ ಸಹಕಾರಿ ಸಂಸ್ಥೆಗಳ ಹೆಚ್ಚುವರಿ ಆದಾಯದ ಪಾಲಿನ ನೆರವಿನೊಂದಿಗೆ ‘ಬೆಲೆ ಸ್ಥಿರೀಕರಣ ನಿಧಿ (ಪಿಎಸ್‌ಎಫ್)  ಯನ್ನು ಸ್ಥಾಪಿಸಬೇಕು ಎಂಬ ಪ್ರಸ್ತಾವವನ್ನು ಕೂಡ ಈ ಮಾದರಿ ಮಸೂದೆ ಮುಂದಿಟ್ಟಿದೆ.

Donate Janashakthi Media

Leave a Reply

Your email address will not be published. Required fields are marked *