ಪತ್ರಗಳ ಮೂಲಕ ಪ್ರೇಮಲೋಕ ಸೃಷ್ಟಿಸಿದ “ಲವ್ ಲೆಟರ್ಸ್ ! ನಿನ್ನ ಪ್ರೀತಿಯ ನಾನು”

“ನನ್ನನ್ನು ನನ್ನ ಅಪ್ಪ ಅಮ್ಮ ಇಬ್ಬರೂ ತುಂಬಾ ಪ್ರೀತಿಸುತ್ತಾರೆ, ಆದರೆ ಅವರಿಬ್ಬರೂ ಯಾವಾಗಲೂ ಕಿತ್ತಾಡುತ್ತಾರೆ”. ನಾಟಕದಲ್ಲಿನ ಈ ಮಾತುಗಳು ನಾವು ಬದುಕಿನಲ್ಲಿ ಕಳೆದುಕೊಂಡದ್ದನ್ನು ಮತ್ತೊಂದು ಕಡೆ ಹುಡುಕುವ ಮತ್ತು ಅದನ್ನು ಪಡೆಯುವ ಪ್ರಯತ್ನ ಮಾಡುತ್ತಿರುತ್ತೇವೆ. ಆದರೆ ಅದನ್ನು ಕಳೆದುಕೊಂಡ ಕಡೆ ಹುಡುಕುವ ಪ್ರಾಮಾಣಿಕ ಪ್ರಯತ್ನವನ್ನೇ ಮಾಡುವುದಿಲ್ಲ. ಇದೇ ಮನುಷ್ಯ ಸಹಜಗುಣವಾಗಿದ್ದು ನಿಜವಾದ ಪ್ರೀತಿಗೆ ಯಾವುದೇ ಅರ್ಥವಿಲ್ಲದಂತಾಗಿದೆ. ಪ್ರೇಮ

– ಎಚ್.ಆರ್. ನವೀನ್ ಕುಮಾರ್

ತಮ್ಮ ಭಾವನೆಗಳಿಗೆ ಪೂರಕವಾಗಿ ಒಬ್ಬರನ್ನೊಬ್ಬರು ಇಷ್ಟಪಡುತ್ತಿದ್ದರೂ ಅದನ್ನೇ ಬದುಕಾಗಿಸಿಕೊಳ್ಳುವ ಧೈರ್ಯ ಮಾಡದೇ, ಆ ನಂತರ ಪರಸ್ಪರರು ಅಗಲಿ ಬೇರೆಯಾಗಿಯೂ ಇರಲಾಗದೆ, ನಿನಗೆ ನಾನು, ನನಗೆ ನೀನು ಎಂಬಂತಿದ್ದೂ ಇಬ್ಬರೂ ಪ್ರತ್ಯೇಕ ಬದುಕನ್ನು ಕಟ್ಟಿಕೊಂಡು, ಅಲ್ಲಿ ಸಂತೋಷವಾಗಿದ್ದಂತಿದ್ದು, ಇಲ್ಲಿ ನೆಮ್ಮದಿ ಹುಡುಕುವ ತೊಳಲಾಟಗಳನ್ನು ನಾಟಕದಲ್ಲಿ ಅದ್ಭುತವಾಗಿ ಹಿಡಿದಿಡಲಾಗಿದೆ. ಪ್ರೇಮ

ಕರ್ನಾಟಕದಲ್ಲಿರುವ ರಂಗಮಂದಿರಗಳಲ್ಲೇ ಅತ್ಯಂತ ವಿಶಿಷ್ಟ ಮತ್ತು ಶಿಸ್ತುಬದ್ಧ ಸಮಯಪಾಲನೆ, ಅಷ್ಟೇ ಗಂಭೀರವಾದ ಪ್ರೇಕ್ಷಕರನ್ನು ಹೊಂದಿರುವ ರಂಗಶಂಕರದಲ್ಲಿ ನಾಟಕ ನೋಡುವುದೆಂದರೆ ಅದೊಂದು ರೀತಿಯ ರೋಮಾಂಚನ. ಪ್ರೇಮ

ಇಡೀ ಆವರಣ ಸಂಪೂರ್ಣ ಕತ್ತಲೆ ಆವರಿಸಿದಾಗ ರಂಗಮಂಚದ ಮೇಲೆ ಎರಡು ಮೇಜು ಮತ್ತು ಕುರ್ಚಿ ಅದರ ಮೇಲಿನ ಸ್ಪಾಟ್ ಲೈಟ್, ಹಿಂಭಾಗದಲ್ಲಿ ನವ ನಕ್ಷತ್ರಗಳು ಮಿನುಗುವಂತಹ ದೀಪಗಳು, ಒಂದೇ ಒಂದು ಬೆಡ್ ಕ್ಯಾಂಪ್, ಅತ್ಯಂತ ನಿಶ್ಯಬ್ದದಿಂದ ಆರಂಭವಾಗುವ ಲವ್ ಲೆಟರ್ಸ್ ! ನಿನ್ನ ಪ್ರೀತಿಯ ನಾನುನಾಟಕ, ಕೇವಲ ಎರಡೇ ಪಾತ್ರಗಳು ತಮ್ಮಗಳ ಪತ್ರಗಳನ್ನು ಓದುವುದರ ಮೂಲಕ ಆರಂಭವಾಗಿ ಓದುತ್ತಲೇ ಮುಕ್ತಾಯವಾಗುತ್ತದೆ. ಪ್ರೇಮ

ಇದನ್ನೂ ಓದಿ: ಕಬ್ಬು ಕಟಾವು ಮಾಡಲು ಬಲವಂತವಾಗಿ 843 ಮಹಿಳಾ ಕಾರ್ಮಿಕರ ಗರ್ಭಕೋಶ ತೆಗೆದ ದುರುಳರು..!

1 ಗಂಟೆ 20 ನಿಮಿಷಗಳ ಕಾಲ ಸಿದ್ದು (ಸಿದ್ದಾರ್ಥ್) ಆಗಿ ನಟ ಕಿಶೋರ್ ಮತ್ತು ರಶ್ಮಿಯಾಗಿ ನಟಿ ಸಿರಿ ರವಿಕುಮಾರ್ ಒಬ್ಬರಿಗೊಬ್ಬರು ಬರೆದ ಪತ್ರಗಳನ್ನು ಓದುತ್ತಾ ಹೋಗುತ್ತಾರೆ. ಇದರಲ್ಲಿ ಬಾಲ್ಯದಲ್ಲಿನ ಆ ಮಾತುಗಳು ಪ್ರೌಢಾವಸ್ಥೆಗೆ ಬಂದಾಗಿನ ಮಾತುಗಳು, ಜವಾಬ್ದಾರಿ ಸ್ಥಾನಕ್ಕೆ ಬಂದಾಗಿನ ಮಾತುಗಳು, ಮದುವೆಯಾದಾಗಿನ ಮಾತುಗಳು, ಸಂಕಷ್ಟದ ಸಮಯದ ಮಾತುಗಳು, ಸರಸದ ಮಾತುಗಳು, ಖುಷಿಯ ಸಮಯದ ಮಾತುಗಳು, ಅಂತಿಮ ವಿದಾಯದ ಮಾತುಗಳು, ಇವೆಲ್ಲವೂ ಪತ್ರದ ಮೂಲಕ ತೆರೆದುಕೊಳ್ಳುತ್ತಾ ನಮ್ಮನ್ನು ಆ ಕಲ್ಪನಾ ಪ್ರಪಂಚಕ್ಕೆ ಹೊತ್ತೊಯ್ಯುತ್ತವೆ. ಮಾತ್ರವಲ್ಲ ಇಬ್ಬರೂ ಕುರ್ಚಿಗಳ ಮೇಲೆ ಕುಳಿತಲ್ಲಿಯೇ ಪತ್ರಗಳನ್ನು ಓದಿದ ಶೈಲಿ, ಧ್ವನಿಯ ಮೂಲಕವೇ ಭಾವಗಳ ಏರಿಳಿತಗಳು ಮತ್ತು ಭಾವನೆಗಳನ್ನು ಧಾಟಿಸುವ ರೀತಿ, ಅವರ ಮುಖಭಾವ ಇದೇ ಎಲ್ಲರನ್ನು ಮಂತ್ರಮುಗ್ದರನ್ನಾಗಿಸುತ್ತದೆ.

ನಾಟಕಗಳ ಬಗ್ಗೆ ಇರುವ ಎಲ್ಲ ಸಿದ್ದಮಾದರಿಗಳನ್ನು ಮುರಿದು ಹೊಸದೊಂದನ್ನು ಕಟ್ಟುವ ಪ್ರಯತ್ನವನ್ನು ಇಲ್ಲಿ ಕಾಣಬಹುದಾಗಿದೆ. ಅತ್ಯಂತ ಕಡಿಮೆ ರಂಗ ಪರಿಕರ, ಕೊನೆಯ ದೃಶ್ಯವೊಂದನ್ನು ಹೊರತುಪಡಿಸಿ ಚಲನೆಯೇ ಇಲ್ಲದೆ, ಕುಳಿತಲ್ಲಿಯೇ ಇಬ್ಬರ ಪತ್ರಗಳ ಆಂತರ್ಯವನ್ನು ಎಲ್ಲರ ಹೃದಯಗಳಿಗೆ ಧಾಟಿಸುವ ರೀತಿ ವಿಶೇಷವಾಗಿತ್ತು. ಒಂದೇ ಮಾತಲ್ಲಿ ಹೇಳುವುದಾದರೆ, ಪತ್ರಗಳ ಮೂಲಕ ಪ್ರೇಮಲೋಕ ಸೃಷ್ಟಿಸಿದ ನಾಟಕವಿದು. ಇಡೀ ನಾಟಕದಲ್ಲಿ ಪತ್ರಗಳ ಮೂಲಕ ಸೃಷ್ಠಿಯಾಗುವ ಪಾತ್ರಗಳು, ಸನ್ನಿವೇಶಗಳು ರಂಗದ ಮೇಲೆ ಬಂದಿದ್ದರೂ ನಮ್ಮ ನಮ್ಮ ಕಲ್ಪನೆಗೆ ತಕ್ಕಂತೆ ನಾವು ಕಟ್ಟಿಕೊಂಡ ದೃಶ್ಯಕಾವ್ಯಕ್ಕೆ ಸರಿಸಾಟಿಯಾಗಿರಲು ಸೋಲುತಿತ್ತೇನೋ ಎನಿಸುತ್ತದೆ.

ಬಾಲ್ಯದಿಂದ ಇಬ್ಬರು ಗೆಳೆಯರು ಪತ್ರಗಳ ಮೂಲಕ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾ.. ಬದುಕಿನ ಎಲ್ಲ ಘಟ್ಟಗಳನ್ನೂ ಪತ್ರಗಳ ಮೂಲಕವೇ ಸ್ಪಂದಿಸುತ್ತಾ… ಬೆಳೆಯುವ ಸಿದ್ದು ಮತ್ತು ರಶ್ಮಿ ಇಬ್ಬರೂ ವಿಭಿನ್ನ ಆಲೋಚನೆಯವರಾಗಿದ್ದರೂ, ಹಲವು ಕಾರಣಗಳಿಗಾಗಿ ಒಳ್ಳೆಯ ಸ್ನೇಹಿತರಾಗಿರುತ್ತಾರೆ. ಸ್ನೇಹದ ಆಚೆಗೆ ಅವರಿಬ್ಬರ ನಡುವೆ ಒಂದು ಬಾಂಧವ್ಯ ಬೆಳೆಯುತ್ತದೆ. ಆದರೆ ಅವರು ಅವರವರದ್ದೇ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಹೆಜ್ಜೆ ಇಡುತ್ತಿರುವಾಗಲೂ ಪರಸ್ಪರ ಒಬ್ಬರಿಗೊಬ್ಬರೂ ಪ್ರೋತ್ಸಾಹದಾಯಕವಾಗಿಯೂ ನಡೆದುಕೊಳ್ಳುತ್ತಾರೆ.

ವಯೋಸಹಜ ಚಂಚಲತೆ, ರಶ್ಮಿಗೆ ಚಿತ್ರಕಲೆಯಲ್ಲಿ ಆಸಕ್ತಿ, ಆತನಿಗೆ ಕ್ರೀಡೆಯಲ್ಲಿ ಆಸಕ್ತಿ, ಆದರೆ ಇವರಿಬ್ಬರೂ ಒಬ್ಬರ ಆಸಕ್ತಿಯನ್ನು ಮತ್ತೊಬ್ಬರು ವಿರೋಧಾಭಾಸದಿಂದ ನೋಡದೇ, ಅದನ್ನು ಗೌರವಿಸುತ್ತಾ ಸ್ನೇಹವನ್ನು ಮುಂದುವರೆಸುತ್ತಾರೆ. ರಶ್ಮಿ ತನ್ನ ಮನೆಯಲ್ಲಿನ ಸಾಂಸಾರಿಕ ಜಂಜಾಟದಿಂದ ಬೇಸತ್ತು, ಅಪ್ಪ ಅಮ್ಮನಿಂದ ಸಿಗದ ಪ್ರೀತಿ ನೆಮ್ಮದಿಯನ್ನು ಸ್ನೇಹಿತ ಸಿದ್ದುವಿನಲ್ಲಿ, ಅವನ ಮಾತುಗಳು ಮತ್ತು ಕಾಳಜಿಯಲ್ಲಿ ಕಾಣುತ್ತಿರುತ್ತಾಳೆ.

ತಮ್ಮ ಭಾವನೆಗಳಿಗೆ ಪೂರಕವಾಗಿ ಒಬ್ಬರನ್ನೊಬ್ಬರು ಇಷ್ಟಪಡುತ್ತಿದ್ದರೂ ಅದನ್ನೇ ಬದುಕಾಗಿಸಿಕೊಳ್ಳುವ ಧೈರ್ಯಮಾಡದೇ, ಆ ನಂತರ ಪರಸ್ಪರರು ಅಗಲಿ ಬೇರೆಯಾಗಿಯೂ ಇರಲಾಗದೆ, ನಿನಗೆ ನಾನು, ನನಗೆ ನೀನು ಎಂಬಂತಿದ್ದೂ ಇಬ್ಬರೂ ಪ್ರತ್ಯೇಕ ಬದುಕನ್ನು ಕಟ್ಟಿಕೊಂಡು, ಅಲ್ಲಿ ಸಂತೋಷವಾಗಿದ್ದಂತಿದ್ದು, ಇಲ್ಲಿ ನೆಮ್ಮದಿ ಹುಡುಕುವ ತೊಳಲಾಟಗಳನ್ನು ನಾಟಕದಲ್ಲಿ ಅದ್ಭುತವಾಗಿ ಹಿಡಿದಿಡಲಾಗಿದೆ.

ಬದುಕಿನ ಎಲ್ಲಾ ಜಂಜಾಟಗಳಾಚೆಗೂ, ಪ್ರೀತಿಸಿದವರು ಪರಸ್ಪರ ಒಟ್ಟಿಗಿರಲು ಇಂದಿನ ಪಟ್ಟಭದ್ರ ಹಿತಾಸಕ್ತಿಗಳನ್ನೊಳಗೊಂಡ ಸಮಾಜ ಇಬ್ಬರ ಪ್ರೀತಿಯನ್ನು ಹೇಗೆ ಅರ್ಥೈಸುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಹೆಣೆಯಲಾಗಿದೆ.

“ನನ್ನನ್ನು ನನ್ನ ಅಪ್ಪ ಅಮ್ಮ ಇಬ್ಬರೂ ತುಂಬಾ ಪ್ರೀತಿಸುತ್ತಾರೆ, ಆದರೆ ಅವರಿಬ್ಬರೂ ಯಾವಾಗಲೂ ಕಿತ್ತಾಡುತ್ತಾರೆ”. ಈ ಮಾತುಗಳು ನಾವು ಬದುಕಿನಲ್ಲಿ ಕಳೆದುಕೊಂಡದ್ದನ್ನು ಮತ್ತೊಂದು ಕಡೆ ಹುಡುಕುವ ಮತ್ತು ಅದನ್ನು ಪಡೆಯುವ ಪ್ರಯತ್ನ ಮಾಡುತ್ತಿರುತ್ತೇವೆ. ಆದರೆ ಅದನ್ನು ಕಳೆದುಕೊಂಡ ಕಡೆ ಹುಡುಕುವ ಪ್ರಾಮಾಣಿಕ ಪ್ರಯತ್ನವನ್ನೇ ಮಾಡುವುದಿಲ್ಲ. ಇದೇ ಮನುಷ್ಯ ಸಹಜಗುಣವಾಗಿದ್ದು ನಿಜವಾದ ಪ್ರೀತಿಗೆ ಯಾವುದೇ ಅರ್ಥವಿಲ್ಲದಂತಾಗಿದೆ.

ಆಧುನಿಕತೆ ಬೆಳೆಯುತ್ತಿದ್ದರೂ, ಇಬ್ಬರೂ ಉನ್ನತ ಸ್ಥಾನಗಳಿಗೆ ಹೋಗಿದ್ದರೂ, ಆರ್ಥಿಕವಾಗಿ ಸಶಕ್ತವಾಗಿದ್ದರೂ, ಇವರಿಬ್ಬರ ಭಾವನೆಗಳ ನಡುವಿನ ಸೇತುವೆಯಾಗುವ ಸಾಮರ್ಥ್ಯ ಇದ್ದದ್ದು ಪತ್ರಗಳಿಗೆ ಮಾತ್ರ. ಬರೆದ ಪತ್ರಗಳನ್ನು ಇಬ್ಬರೂ ಪರಸ್ಪರರು ಓದುತ್ತಾ ಅವರದೇ ಪ್ರೇಮ ಲೋಕದಲ್ಲಿ ಕಳೆದುಹೋಗುತ್ತಿದ್ದರು. ಒಬ್ಬ ವ್ಯಕ್ತಿಯ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ಥಾನಮಾನಗಳು ಹೇಗೆ ಒಬ್ಬ ವ್ಯಕ್ತಿಯ ವೈಯಕ್ತಿಕ ವಿಚಾರಗಳನ್ನು ನಿರ್ಧರಿಸುತ್ತವೆ ಎಂಬುದನ್ನು ಸೂಕ್ಷ್ಮವಾಗಿ ಹೇಳಲು ಪ್ರಯತ್ನಿಸಲಾಗಿದೆ.

ನಿಜಜೀವನದಲ್ಲಿ ಬಹುತೇಕರಿಗೆ ಅದರಲ್ಲೂ ಪತ್ರ ವ್ಯವಹಾರಗಳನ್ನು ಹೊಂದಿದ್ದವರಿಗೆ ಈ ಅನುಭವ ಖಂಡಿತಾ ಇರುತ್ತದೆ. ಪತ್ರಗಳನ್ನು ಓದುವಾಗ ಭಾವನೆಗಳು ಉದ್ರೇಕವಾದಂತೆ, ಮತ್ತು ಹೊಸ ಹೊಸ ರೂಪ, ಆಯಾಮಗಳನ್ನು ಪಡೆದಂತೆ ದೂರವಾಣಿ, ಈ ಮೈಲ್, ಮೆಸೇಜ್ ಮುಂದುವರೆದು ಪರಸ್ಪರ ಭೇಟಿಯಾದಾಗಲೂ, ಅದು ಪತ್ರ ಓದುವಾಗಿನ ಬೆಚ್ಚನೆಯ ಅನುಭವವನ್ನು ನೀಡುವುದಿಲ್ಲ.

ಒಟ್ಟಾರೆ ನಾಟಕ ಒಂದು ವಿಭಿನ್ನ ಅನುಭವ. ಎ.ಆರ್. ಗರ್ನಿಯವರ ಮೂಲ ಬರಹವನ್ನು ವೆಂಕಟೇಶ್ ಪ್ರಸಾದ್ ಅಚ್ಚುಕಟ್ಟಾಗಿ ರೂಪಾಂತರಿಸಿ ನಿರ್ದೇಶಿಸಿದ್ದಾರೆ. ಈ ಹಿಂದೆ ಇವರು ನಿರ್ದೇಶಿಸಿದ್ದ ‘ಕಾಕದೋಷ’ ನಾಟಕವೂ ಬಹಳ ಸದ್ದು ಮಾಡಿತ್ತು. ಅತ್ಯಂತ ಅನುಭವಿ ನಟ ಕಿಶೋರ್ ಕುಮಾರ್ ಮತ್ತು ಸಿರಿ ರವಿಕುಮಾರ್ ಧ್ವನಿಗಳ ಏರಿಳಿತ, ಮುಖಭಾವನೆಗಳಲ್ಲೇ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಬೆಂಗಳೂರು ಥಿಯೇಟರ್ ಕಲೆಕ್ಟಿವ್ ನಾಟಕವನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಿದೆ.

ಇದನ್ನೂ ನೋಡಿ: ಹೊಟ್ಟೆಗೆ ಹಿಟ್ಟಿಲ್ಲದ ಭಾರತವೂ, ಆರ್ಥಿಕವಾಗಿ 4ನೆ ಸ್ಥಾನ ಎನ್ನುವ ಜುಟ್ಟಿಗೆ ಮಲ್ಲಿಗೆ ಹೂವೂ.. Janashakthi Media

Donate Janashakthi Media

Leave a Reply

Your email address will not be published. Required fields are marked *