ಪ್ಯಾಲೆಸ್ಟೈನ್‌ಗೆ ಬೆಂಬಲ ವ್ಯಕ್ತಪಡಿಸಿ ಎಡಪಕ್ಷಗಳಿಂದ ರಾಷ್ಟ್ರೀಯ ಸೌಹಾರ್ದತಾ ದಿನ ಆಚರಣೆ

ಪ್ಯಾಲೆಸ್ಟೈನ್‌ ಗಾಜಾದಲ್ಲಿ ಇಸ್ರೇಲಿನ ಮಾನವ ಹತ್ಯಾಕಾಂಡವನ್ನು ಖಂಡಿಸಿ ರಾಷ್ಟ್ರವ್ಯಾಪಿ ಕಾರ್ಯಕ್ರಮ
ಗಾಜಾದಲ್ಲಿ ಇಸ್ರೇಲಿನ ಮಾನವ ಹತ್ಯಾಕಾಂಡವನ್ನು ಖಂಡಿಸಿ, ಪ್ಯಾಲೆಸ್ತೀನಿಗೆ ಬೆಂಬಲವನ್ನು ವ್ಯಕ್ತಪಡಿಸಿ ಎಡಪಕ್ಷಗಳಿಂದ ರಾಷ್ಟ್ರೀಯ ಸೌಹಾರ್ದತಾ  ದಿನ ಆಚರಣೆ ಕಾರ್ಯಕ್ರಮಕ್ಕೆ ರಾಜ್ಯವ್ಯಾಪಿ ಉತ್ತಮ ಬೆಂಬಲ ವ್ಯಕ್ತವಾಗಿದೆ.  ಪ್ಯಾಲೆಸ್ಟೈನ್‌

ಬೆಂಗಳೂರಿನಲ್ಲಿ ಎಡಪಕ್ಷಗಳು ಘಾಟೆ ಭವನದಲ್ಲಿ ಕಾರ್ಯಕ್ರಮ ನಡೆಸುವ ಮೂಲಕ ಸೌಹಾರ್ದತಾ ದಿನ ಆಚರಿಸಿದರು. ಚಿಂತಕ ಜಿ ರಾಮಕೃಷ್ಣ ಗಾಜಾದಲ್ಲಿ ಇಸ್ರೇಲ್‌ ನಡೆಸುತ್ತಿರುವ ಹತ್ಯಾಕಾಂಡದ ಬಗ್ಗೆ ವಿವರಿಸಿದರು. ಈ ವೇಳೆ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ. ಕೆ.ಪ್ರಕಾಶ್‌, ಸಿಪಿಐ ಕಾರ್ಯದರ್ಶಿ ಸಾತೀ ಸುಂದರೇಶ್‌, ಸಿಪಿಐಎಂಎಲ್‌ನ ಕ್ಲಿಫ್ಟನ್ ಡಿ’ರೊಜಾರಿಯೊ, ಎಐಎಫ್‌ಬಿ ಶಿವಶಂಕರ್‌, ಎಸ್‌ಯುಸಿಐನ .ಶ್ರೀರಾಮ್ ಇದ್ದರು.

ಹಾಸನ, ಕಲಬುರ್ಗಿ, ದಾವಣಗೆರೆ, ಮೈಸೂರು, ಚಿಕ್ಕಬಳ್ಳಾಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಸೌಹಾರ್ದ ದಿನವನ್ನು ಆಚರಿಸಲಾಯಿತು.  ಎಡಪಕ್ಷಗಳು ಸೌಹಾರ್ದ ದಿನದ ಭಾಗವಾಗಿ ಬಿಡುಗಡೆ ಮಾಡಿರುವ ಹೇಳಿಕೆ ಈ ಕೆಳಗಿನಂತೆ ಇದೆ.

ಎರಡು ವರ್ಷಗಳಿಂದ ಸತತವಾಗಿ ಇಸ್ರೇಲ್ ನಡೆಸುತ್ತಿರುವ ಅನಾಗರಿಕ ಬಾಂಬುಗಳ ದಾಳಿ, ಮಿಲಿಟರಿ ಆಕ್ರಮಣದಿಂದ 55,000 ಸಾವಿರಕ್ಕೂ ಹೆಚ್ಚಿನ ಪ್ಯಾಲೆಸ್ತೀನಿಯರು ಕೊಲ್ಲಲ್ಪಟ್ಟಿದ್ದಾರೆ. ಲಕ್ಷಾಂತರ ಜನರು ಗಾಯಾಳುಗಳಾಗಿದ್ದಾರೆ. ಅಗತ್ಯ ಮೂಲಸಂರಚನೆ, ಆಸ್ಪತ್ರೆಗಳು, ಶಾಲೆಗಳು ಮತ್ತು ನಿರಾಶ್ರಿತ ವಸತಿ ಕೇಂದ್ರಗಳನ್ನು ಗುರಿಯಿಟ್ಟು ದಾಳಿ ಮಾಡಲಾಗುತ್ತಿದೆ. ಇದರಿಂದಾಗಿ ಪ್ಯಾಲೆಸ್ತೀನಿಯರು ಹಿಂದೆಂದೂ ಕಂಡರಿಯದ ಮಾನವ ದುರಂತವನ್ನು ಅನುಭವಿಸುವಂತಾಗಿದೆ. ಇದು ಜನಾಂಗ ಹತ್ಯೆಯಲ್ಲದೆ ಬೇರೇನೂ ಅಲ್ಲ. ಇಂತಹ ಸಂದರ್ಭದಲ್ಲಿ ಗಾಜಾ ಪ್ರದೇಶಕ್ಕೆ ಆಹಾರ ಪದಾರ್ಥಗಳನ್ನೂ ಇಸ್ರೇಲ್ ಬಿಡುತ್ತಿಲ್ಲ ಎಂಬುದು ಆತಂಕಕಾರಿಯಾಗಿದೆ.

ಮೊದಲ ಹಂತದಕದನ ವಿರಾಮ ಪೂರ್ಣಗೊಂಡ ಕೂಡಲೇ ಇಸ್ರೇಲಾ ಗಾಝಾ ಮೇಲಿನ ದಾಳಿಯನ್ನು ಪುನರಾರಂಭಿಸಿದೆ ಅಂದಿನಿಂದ, ಗಾಜಾಗೆ ಆಹಾರ, ನೀರು, ಇಂಧನ, ನೆರವು ಮತ್ತು ಇತರ ಎಲ್ಲಾ ಅಗತ್ಯ ವಸ್ತುಗಳ ಪೂರೈಕೆಯನ್ನು ಕಡಿತಗೊಳಿಸಿದೆ. ಗಾಝಾವನ್ನು ಕತ್ತು ಹಿಸುಕಿ ಹಸಿವಿನಿಂದ ಸಾಯುವಂತೆ ಮಾಡಲು ಇಸ್ರೇಲ್ ಉದ್ದೇಶಿಸಿದೆ. ಇದು ಆಸ್ಪತ್ರೆಗಳು, ಸಹಾಯ ಬೆಂಗಾವಲುಗಳು, ವಿಶ್ವಸಂಸ್ಥೆಯ ನಿರಾಶ್ರಿತರ ಆಶ್ರಯ ತಾಣಗಳು, ಶಾಲೆಗಳು, ಮಸೀದಿಗಳು ಮತ್ತು ಚರ್ಚುಗಳ ಮೇಲೆ ದಾಳಿ ನಡೆಸುತ್ತಿದೆ.

ಇಸ್ರೇಲ್ ದಾಳಿಯಲ್ಲಿ ಮೃತಪಟ್ಟವರಲ್ಲಿ ಶೇ.60ರಷ್ಟು ಮಹಿಳೆಯರು ಮತ್ತು ಮಕ್ಕಳು. ಪತ್ರಕರ್ತರು ಮತ್ತು ವಿಶ್ವಸಂಸ್ಥೆಯ ಸಹಾಯ ಕಾರ್ಯಕರ್ತರನ್ನು ಸಹಗುರಿಯಾಗಿಸಿ ಕೊಲ್ಲಲಾಗುತ್ತಿದೆ. ಬೆಳೆಗಳು ನಾಶವಾಗುತ್ತಿವೆ. ಈ ಎಲ್ಲಾ ದಾಳಿಗಳು ಇಸ್ರೇಲಿ ಪ್ರಭುತ್ವದ ನರಮೇಧದ ಗುಣವನ್ನು ತೆರೆದಿಟ್ಟಿದೆ. ಇದನ್ನೆಲ್ಲಾ ಗಮನಿಸಿ ಅಂತರರಾಷ್ಟ್ರೀಯ ನ್ಯಾಯಾಲಯವು (ಐಸಿಜೆ), ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಮತ್ತು ಇತರ ಇಸ್ರೇಲಿ ನಾಯಕರ ವಿರುದ್ಧ ಬಂಧನದ ವಾರೆಂಟ್ ಹೊರಡಿಸಿದೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಕಾರಿಗೆ ಅಡ್ಡ ಮಲಗಿ ಪ್ರತಿಭಟಿಸಿದ ರೈತ ಮುಖಂಡ ಪ್ಯಾಲೆಸ್ಟೈನ್‌

ಗಾಜಾದಲ್ಲಿ ಇಸ್ರೇಲಿನ ಮಾನವ ಹತ್ಯಾಕಾಂಡವನ್ನು ಖಂಡಿಸಿ, ಪ್ಯಾಲೆಸ್ತೀನಿಗೆ ಬೆಂಬಲವನ್ನು ವ್ಯಕ್ತಪಡಿಸಿ ಎಡಪಕ್ಷಗಳಿಂದ ರಾಷ್ಟ್ರೀಯ ಸೌಹಾರ್ಧತಾ ದಿನ ಆಚರಣೆ

ಪಶ್ಚಿಮ ದಂಡೆಯಲ್ಲಿ ಪ್ಯಾಲೆಸ್ತೀನಿ ಪ್ರದೇಶವನ್ನು ಆಕ್ರಮಿಸಲು ಮತ್ತು ಯೆಹೂದಿ ವಸತಿಗಳನ್ನು ಸ್ಥಾಪಿಸಲು ಜಿಯೋನಿಸ್ಟ್ ಆಕ್ರಮಣಕಾರರಿಗೆ ಇಸ್ರೇಲ್ ಎಲ್ಲ ರೀತಿಯ ಪ್ರೇರಣೆ ನೀಡುತ್ತಿದೆ. ಕ್ರಮೇಣವಾಗಿ ಪ್ಯಾಲೆಸ್ತೀನ್ ಭೂಪ್ರದೇಶವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಬೃಹತ್ ಇಸ್ರೇಲ್ ಸ್ಥಾಪನೆಯ ತನ್ನ ಉದ್ದೇಶವನ್ನು ಜಾರಿ ಮಾಡಿಕೊಳ್ಳುವ ಭಾಗವಾಗಿ, ಪ್ಯಾಲೆಸ್ತೀನಿಯರನ್ನು ತಮ್ಮ ತಾಯ್ನೆಲದಿಂದ ಹೊರಗೆ ಓಡಿಸಿ, ಪ್ಯಾಲೆಸ್ತೈನನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವ ಉದ್ದೇಶದಿಂದ ಈ ಕೃತ್ಯಗಳನ್ನು ನಡೆಸಲಾಗುತ್ತಿದೆ.

ಅಮೇರಿಕ ಮತ್ತು ಪಶ್ಚಿಮ ಯೂರೋಪಿನ ಅದರ ಮಿತ್ರ ಸಾಮ್ರಾಜ್ಯಶಾಹಿ ರಾಷ್ಟ್ರಗಳು ಇಸ್ರೇಲಿನ ಈ ದಾಳಿಗಳನ್ನು ಸಂಪೂರ್ಣವಾಗಿ ಬೆಂಬಲಿಸುತ್ತಿವೆ, ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿವೆ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಇಸ್ರೇಲಿಗೆ ಬೆಂಬಲ ನೀಡುತ್ತಿವೆ. ಗಾಜಾ ಪ್ರದೇಶವನ್ನು ಪ್ರವಾಸೋದ್ಯಮದ ಸ್ವರ್ಗವಾಗಿ ಮಾರ್ಪಡಿಸಲು ಅಲ್ಲಿ ವಾಸಿಸುತ್ತಿರುವ ಎಲ್ಲಾ ಪ್ಯಾಲೆಸ್ತೀನಿಯರನ್ನು ಓಡಿಸಬೇಕೆಂಬ ಟ್ರಂಪ್ʼನ ಘೋಷಣೆಯು, ಇಸ್ರೇಲಿನ ಹಿತಾಸಕ್ತಿಗಳಿಗೆ ಪೂರಕವಾದದ್ದೇ ಆಗಿದೆ.

ಅಂತರರಾಷ್ಟ್ರೀಯ ನೀರು ಗಡಿಯಲ್ಲಿ ಗಾಜಾಕ್ಕೆ ಆಹಾರ ಸಹಾಯವನ್ನು ಮಾಡಲು ತೆರಳುತ್ತಿದ್ದ ʼಮೆಡ್ಲೀನ್ ಆಫ್ ದಿ ಫ್ರೀಡಂ ಫ್ಲಾಟಿಲ್ಲಾ ಗಾಜಾʼ ಹಡಗಿನ ಮೇಲೆ ಇಸ್ರೇಲ್ ದಾಳಿ ಮಾಡಿರುವುದು ಅತ್ಯಂತ ಹೇಯ ಮತ್ತು ಖಂಡನೀಯವಾಗಿದೆ. ಅಮೇರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಬೆಂಬಲದಿಂದ ವಿಶ್ವಸಂಸ್ಥೆ ಮತ್ತು ಜಾಗತಿಕ ಸಮುದಾಯದ ಯಾವ ಎಚ್ಚರಿಕೆಗಳನ್ನೂ ಗೌರವಿಸದೆ ಇಸ್ರೇಲ್ ಮಾನವ ಹತ್ಯೆಗಳ ಚಟುವಟಿಕೆಗಳಲ್ಲಿ ತೊಡಗಿದೆ.

 

ಬಿಜೆಪಿ ಕೇಂದ್ರ ಸರ್ಕಾರವು ಪ್ಯಾಲೆಸ್ತೀನ್ ಕುರಿತು ಭಾರತದ ಧೀರ್ಘಕಾಲೀನ ಅಧಿಕೃತ ನಿಲುವಿಗೆ ಎಳ್ಳು ನೀರು ಬಿಟ್ಟಿದೆ. ಭಾರತ ಸರ್ಕಾರವು ತನ್ನ ಚಾರಿತ್ರಿಕವಾದ – ಪ್ಯಾಲೆಸ್ತೀನ್ಜನರ ಜೊತೆಗೆ ನಿರ್ಣಾಯಕವಾಗಿ ನಿಲ್ಲುವ – ಧೋರಣೆಯನ್ನು ಕೈಬಿಟ್ಟು ಇಸ್ರೇಲನ್ನು ಓಲೈಸುವ ಕೆಲಸವನ್ನು ಮಾಡುತ್ತಿದೆ. ಭಾರತದ ಸ್ವಾತಂತ್ರ‍್ಯ ಹೋರಾಟ ಮತ್ತು ಸಾಮ್ರಾಜ್ಯಶಾಹಿ-ವಿರೋಧಿ ನಿಲುವಿಗೆ ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ಭಾರತ ಸರ್ಕಾರದ ನಿಲುವು ಬದಲಾಗಿರುವುದು ಅವಮಾನಕರ ವಿಷಯವಾಗಿದೆ. ಪರಿಣಾಮವಾಗಿ, ಮೊದಲ ಬಾರಿಗೆ, ಇಸ್ರೇಲನ್ನು ಖಂಡಿಸುವ ಮತ್ತು ಯುದ್ಧ ವಿರಾಮವನ್ನು ಒತ್ತಾಯಿಸುವ ವಿಶ್ವಸಂಸ್ಥೆಯ ನಿರ್ಣಯಗಳಿಗೆ ವಿರೋಧ ಅಥವಾ ತಟಸ್ಥ ನಿಲುವನ್ನು ಪ್ರದರ್ಶಿಸಿದೆ. ಇಂತಹ ನಿಲುವುಗಳು ಅಭಿವೃದ್ಧಿಶೀಲ ದೇಶಗಳ ಪೈಕಿ ಭಾರತದ ಘನತೆಯನ್ನು ಕುಗ್ಗಿಸಿದೆ ಮತ್ತು ಭಾರತವನ್ನು ಇಸ್ರೇಲ್ ಮತ್ತು ಅಮೇರಿಕದ ಮಿತ್ರ ದೇಶಗಳಾಗಿ ನೋಡುವಂತೆ ಮಾಡಿದೆ.

ತನ್ನ ನಿಲುವನ್ನು ಸಮರ್ಥಿಸಿಕೊಳ್ಳುವ ಕಾರಣಕ್ಕಾಗಿ ಬಿಜೆಪಿ, ಸಂಘ ಪರಿವಾರದ ಜೊತೆಯಲ್ಲಿ ಸೇರಿಕೊಂಡು, ಗಾಜಾ ಮೇಲಿನ ಇಸ್ರೇಲಿ ಆಕ್ರಮಣವನ್ನು ಧಾರ್ಮಿಕ ಯುದ್ಧ ಎಂಬAತೆ ಬಿಂಬಿಸುತ್ತಿದೆ. ಮತಧರ್ಮದ ಜೊತೆಯಲ್ಲಿ ರಾಷ್ಟ್ರೀಯತೆಯನ್ನು ಗುರುತಿಸುವ ಮತ್ತು ಮುಸ್ಲಿಮರನ್ನು ದ್ವೇಷಿಸುವ ಗುಣದಿಂದಾಗಿ ಇಸ್ರೇಲಿನ ಜಿಯೋನಿಸ್ಟರೊಂದಿಗೆ ಆರ್.ಎಸ್.ಎಸ್. ಸೈದ್ಧಾಂತಿಕ ಸಹಮತವನ್ನು ಹೊಂದಿದೆ. ನಮ್ಮ ದೇಶದ ಆಳುವ ವರ್ಗದ ಹಿತಕ್ಕೆ ಅನುಗುಣವಾಗಿರುವ ಈ ಸೈದ್ಧಾಂತಿಕ ಸಖ್ಯತೆಯಲ್ಲಿಯೇ ಇಸ್ರೇಲಿಗೆ ಬೆಂಬಲ ನೀಡುವ ಬಿಜೆಪಿ ಸರ್ಕಾರದ ಪ್ರಸಕ್ತ ನಿಲುವು ಇದೆ ಎಂಬದುನ್ನು ಗಮನಿಸಬೇಕಿದೆ. ಇದು ಭಾರತದ ಅಂತರರಾಷ್ಟ್ರೀಯ ಸಂಬAಧಗಳಿಗೆ ಮಾರಕವಾಗಲಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ;

1. ಗಾಜಾ ಮೇಲಿನ ಆಕ್ರಮಣ ಮತ್ತು ದಾಳಿಯನ್ನು ಇಸ್ರೇಲ್ ನಿಲ್ಲಿಸಬೇಕು. ಅದು ನಡೆಸಿರುವ ಜನಾಂಗೀಯ ದ್ವೇಷ ಮತ್ತು ಯುದ್ಧ ಅಪರಾಧಗಳನ್ನು ಖಂಡಿಸಿ, ಇಸ್ರೇಲನ್ನು ಜನಾಂಗೀಯ ದ್ವೇಷದ ಪ್ರಭುತ್ವವೆಂದು ಘೋಷಿಸಿ ಕ್ರಮ ಕೈಗೊಳ್ಳಬೇಕು.

2. ತಮ್ಮ ರಾಷ್ಟ್ರ, ಗೌರವ ಮತ್ತು ಸ್ವಾತಂತ್ರ‍್ಯಕ್ಕಾಗಿ ಪ್ಯಾಲೆಸ್ಟೀನಿ ಜನತೆ ನಡೆಸುತ್ತಿರುವ ನ್ಯಾಯಯುತ ಹೋರಾಟವನ್ನು ಬೆಂಬಲಿಸಬೇಕು.

3. ಭಾರತ ದೇಶದ ಜನರ ಸಾಮ್ರಾಜ್ಯಶಾಹಿ-ವಿರೋಧಿ ಆಶೋತ್ತರಗಳಿಗೆ ಅನುಗುಣವಾಗಿ ಪ್ಯಾಲೆಸ್ತೀನಿಯರ ಆಶಯಗಳನ್ನು ಬೆಂಬಲಿಸುತ್ತ ಬಂದಿರುವ ನೆಲೆಯಲ್ಲೇ ಭಾರತ ಸರ್ಕಾರವು ನೀತಿಬದ್ಧ ನಿಲುವನ್ನು ತೆಗೆದುಕೊಳ್ಳಬೇಕುಮತ್ತು ಇಸ್ರೇಲಿನೊಂದಿಗೆ ಮಿಲಿಟರಿ ಮತ್ತು ಭದ್ರತಾ ಸಹಕಾರವನ್ನು ತಕ್ಷಣವೇ ನಿಲ್ಲಿಸಬೇಕು.

 

ಇದನ್ನೂ ನೋಡಿ: ಭಾರತದ ರಾಜಕೀಯ ಮತ್ತು ಹಣಕಾಸು ಒಕ್ಕೂಟ ಸವಾಲುಗಳು ಮತ್ತು ಸಾಧ್ಯತೆಗಳು Janashakthi Media

 

Donate Janashakthi Media

Leave a Reply

Your email address will not be published. Required fields are marked *