ಹಿಂದು ಯುವತಿಯನ್ನು ಪ್ರೀತಿಸಿದ್ದಕ್ಕೆ ಮುಸ್ಲಿಂ ಯುವಕನ‌ ಕೊಲೆ : ಹಿಂದೂಪರ ಸಂಘಟನೆಗಳ ಕೈವಾಡ?

ಖಾನಾಪುರ : ಖಾನಾಪುರದಲ್ಲಿ ಯುವಕನೋರ್ವನ ಮೃತದೇಹ ಪತ್ತೆಯಾಗಿದ್ದು, ಕೈಗಳನ್ನು ಕಟ್ಟಿದ, ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ರೈಲು ಹಳಿಯಲ್ಲಿ ಪತ್ತೆಯಾಗಿದ್ದು, ಕೊಲೆಗೈದು ಹಳಿಯಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಯುವತಿಯೊಬ್ಬಳ ಪೋಷಕರ ಸಹಿತ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಖಾನಪುರದ ಅಝಾಮ್ ನಗರ ನಿವಾಸಿ ನಾಝಿಮಾ ಶೈಖ್ ಎಂಬವರ ಪುತ್ರ ಅರ್ಬಾಝ್ ಮುಲ್ಲಾ(28) ಕೊಲೆಯಾದ ಯುವಕ. ಇತರೆ ಕೋಮಿನ ಯುವತಿಯನ್ನು ಪ್ರೀತಿಸಿದ್ದ ಕಾರಣಕ್ಕೆ ಕೊಲೆ ನಡೆದಿದೆ ಎಂಬುದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಎರಡು ವರ್ಷದ ಪ್ರೀತಿ : ಅರ್ಬಾಜ್ ತನ್ನದೇ ಕಾಲೋನಿಯಲ್ಲಿರುವ ಅನ್ಯಕೋಮಿನ ಯುವತಿಯನ್ನ ಪ್ರೀತಿಸುತ್ತಿದ್ದ. ಒಂದೇ ಕಾಲೋನಿ ಆಗಿದ್ದಕ್ಕೆ ಆಗಾಗಾ ಯುವತಿ ಇವರ ಮನೆಗೆ ಬರೋದು ಹೋಗುವುದು ಮಾಡುತ್ತಿದ್ದಳು.

ಬಳಿಕ ಪ್ರೀತಿ ವಿಚಾರ ಕೆಲ ಸಂಘಟನೆಗಳಿಗೆ ಗೊತ್ತಾಗಿ ಅರ್ಬಾಜ್ಗೆ ಧಮಕಿ ಹಾಕಲಾರಂಭಿಸುತ್ತಾರಂತೆ. ಸೆ.26ರಂದು ಪುಂಡಲೀಕ ಮಹಾರಜ ಎಂಬುವವರ ಮಧ್ಯಸ್ಥಿಕೆಯಲ್ಲಿ ಅಂದು ಅರ್ಬಾಜ್ ತಾಯಿ ಮುಂದೆ ಮಗ ತಂಟೆಗೆ ಬರಲ್ಲಾ ಅಂತಾ ಪೋಟೋ ಸೇರಿದಂತೆ ಎಲ್ಲವನ್ನೂ ಡಿಲಿಟ್ ಮಾಡಿ ಸೀಮ್ ಕೂಡ ಮುರಿದು ಹಾಕಿರುತ್ತಾರೆ. ಇದಾದ ಎರಡೇ ದಿನದಲ್ಲಿ ಯುವಕ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಬೆಳಗಾವಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ತನಿಖೆ ಮುಂದುರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 30ಕ್ಕೂ ಅಧಿಕ ಜನರನ್ನು ವಿಚಾರಣೆ ಮಾಡುತ್ತಿದ್ದಾರೆ. ಯುವತಿ ಸೇರಿ ಯುವತಿಯ ಕುಟುಂಬಸ್ಥರನ್ನ ವಶಕ್ಕೆ ಪಡೆದು ಬೆಳಗಾವಿ ರೈಲ್ವೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *