ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಸಂಕಷ್ಟಕ್ಕೆ ನೆರವಾಗಲು ಬಿಸಿಸಿಐಗೆ ಕಪಿಲ್‌ ದೇವ್ ಮನವಿ

ಮುಂಬೈ: ತಮ್ಮ ಸಹ ಆಟಗಾರ ಅಂಶುಮಾನ್ ಗಾಯಕ್ವಾಡ್ ಸಂಕಷ್ಟಕ್ಕೆ ಭಾರತ ಕ್ರಿಕೆಟ್ ನ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಮರುಗಿದ್ದಾರೆ. ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಬ್ಲಡ್ ಕ್ಯಾನ್ಸರ್  ನಿಂದ ಬಳಲುತ್ತಿದ್ದು, ಗೆಳೆಯನ ಸಂಕಷ್ಟಕ್ಕೆ ನೆರವಾಗಲು ಬಿಸಿಸಿಐಗೂ ಮನವಿ ಮಾಡಿದ್ದಾರೆ.

ಕಳೆದ ಒಂದು ವರ್ಷದಿಂದ  71 ವರ್ಷದ  ಗಾಯಕ್ಕಾಡ್ ಲಂಡಾನ್ ನ ಕಿಂಗ್ಸ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ರಿಕೆಟಿಗ

ಗಾಯಕ್ಕಾಡ್  ಚಿಕಿತ್ಸೆಗೆ ಅಗತ್ಯವಿರುವ ಆರ್ಥಿಕ ಸಹಾಯ ಒದಗಿಸುವುದಕ್ಕಾಗಿ ತಮ್ಮಇನ್ನಿತರ ಸಹ ಆಟಗಾರರಾದ ಮೊಹಿಂದರ್ ಅಮರ್ ನಾಥ್, ಸುನಿಲ್ ಗವಾಸ್ಕರ್, ಸಂದೀಪ್ ಪಾಟೀಲ್, ದಿಲೀಪ್ ವೆಂಗ್‌ಸರ್ಕರ್, ಮದನ್ ಲಾಲ್, ರವಿ ಶಾಸ್ತ್ರಿ, ಕೀರ್ತಿ ಆಜಾದ್ ಸಾಕಷ್ಟು ನೆರವು ನೀಡುತ್ತಿದ್ದಾರೆ ಎಂದು ಕಪಿಲ್ ದೇವ್ ಹೇಳಿದ್ದಾರೆ. ಕ್ರಿಕೆಟಿಗ

ಇದನ್ನೂ ಓದಿ: ವಿಧಾನಮಂಡಲ ಅಧಿವೇಶನ : ಹಲವು ಮಸೂದೆಗಳಿಗೆ ಸದನದಲ್ಲಿ ಅಂಗೀಕಾರ ಸಾಧ್ಯತೆ

ಈ ವಿಷಯವಾಗಿ ತಾವು ಬರೆದಿರುವ ಪತ್ರಕ್ಕೆ ಬಿಸಿಸಿಐ ಸ್ಪಂದಿಸುತ್ತದೆ ಎಂದೂ ಕಪಿಲ್ ದೇವ್ ವಿಶ್ವಾಸ ವ್ಯಕ್ತಪಡಿಸಿದ್ದು, ಪರಿಸ್ಥಿತಿ ಸುಧಾರಿಸದೇ ಇದ್ದಲ್ಲಿ ತಾವು ತಮ್ಮ ಪಿಂಚಣಿಯ ಹಣವನ್ನು ನೀಡುವುದಾಗಿ ಘೋಷಿಸಿದ್ದಾರೆ.

“ದುರದೃಷ್ಟವಶಾತ್, ನಮ್ಮಲ್ಲಿ ವ್ಯವಸ್ತ್ರ ಇಲ್ಲ ಈ ತಲೆಮಾರಿನ ಆಟಗಾರರು ಉತ್ತಮ ಹಣ ಗಳಿಸುವುದನ್ನು ನೋಡುವುದು ಸಂತೋಷವಾಗಿದೆ. ಸಹಾಯಕ ಸಿಬ್ಬಂದಿಗೆ ಉತ್ತಮ ವೇತನ ನೀಡುತ್ತಿರುವುದು ಸಂತೋಷವಾಗಿದೆ. ನಮ್ಮ ಕಾಲದಲ್ಲಿ ಮಂಡಳಿಯಲ್ಲಿ ಹಣವಿರಲಿಲ್ಲ ಇಂದು, ಕ್ರಿಕೆಟ್ ಮಂಡಳಿ ಉತ್ತಮ ಸ್ಥಿತಿಯಲ್ಲಿದೆ. ಹಿಂದಿನಿಂದಲೂ ಹಿರಿಯ ಆಟಗಾರರನ್ನು ನೋಡಿಕೊಳ್ಳಬೇಕು. ಟ್ರಸ್ಟ್ ರಚನೆಯಾದರೆ, ಇಂತಹ ಉದ್ದೇಶಗಳಿಗಾಗಿ ಹಣವನ್ನು ಅಲ್ಲಿ ಹಾಕಬಹುದು. ಆದರೆ ನಮ್ಮಲ್ಲಿ ವ್ಯವಸ್ಥೆ ಇಲ್ಲ. ಟ್ರಸ್ಟ್ ಇರಬೇಕು. ಬಿಸಿಸಿಐ ಈ ಕೆಲಸವನ್ನು ಮಾಡಬಹುದಾಗಿದೆ. ಅವರು ಮಾಜಿ ಮತ್ತು ಪ್ರಸ್ತುತ ಆಟಗಾರರನ್ನು ನೋಡಿಕೊಳ್ಳುತ್ತಾರೆ. ಕ್ರಿಕೆಟ್ ಕುಟುಂಬ ನಮಗೆ ಅವಕಾಶ ನೀಡಿದರೆ ನಮ್ಮ ಪಿಂಚಣಿ ಮೊತ್ತವನ್ನು ದೇಣಿಗೆ ನೀಡುವ ಮೂಲಕ ಕೊಡುಗೆ ನೀಡಲು ನಾವು ಸಿದ್ಧರಿದ್ದೇವೆ, “ಎಂದು ಕಪಿಲ್ ದೇವ್ ಹೇಳಿದ್ದಾರ

ಗಾಯಕ್ವಾಡ್ ಅವರ ಕ್ರಿಕೆಟ್ ಪರಂಪರೆ ಗಮನಾರ್ಹವಾಗಿದೆ. ಅವರು 1975 ಮತ್ತು 1987 ರ ನಡುವೆ ಭಾರತದ ಪರ 40 ಟೆಸ್ಟ್ ಮತ್ತು 15 ODIಗಳನ್ನು ಆಡಿದ್ದಾರೆ ಮತ್ತು ನಂತರ ಎರಡು ಪ್ರತ್ಯೇಕ ಅವಧಿಗಳಲ್ಲಿ ಭಾರತದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದರು.

ಇದನ್ನೂ ನೋಡಿ: ಕನ್ನಡ ಕಟ್ಟುವಿಕೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪಾತ್ರ – ಡಾ. ಪುರುಷೋತ್ತಮ ಬಿಳಿಮಲೆ ಜೊತೆ ಮಾತುಕತೆ

Donate Janashakthi Media

Leave a Reply

Your email address will not be published. Required fields are marked *